‘ಇದೇ 13 ಮತ್ತು 14ರಂದು ಸ್ಯಾಂಕಿ ಕೆರೆಗೆ ಬಂದಿದ್ದ ಆರೋಪಿಗಳು ಸ್ಥಳ ಪರಿಶೀಲಿಸಿದ್ದರು. ಮೂರನೇ ದಿನವೂ ಸ್ಥಳಕ್ಕೆ ಬಂದಿದ್ದರು. ಆಗ ಪ್ರತಿಮೆ ಬಳಿ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಹಿಂದಕ್ಕೆ ಕಳುಹಿಸಿದ್ದರು. ಶಿವಾಜಿ ಪ್ರತಿಮೆ ಎತ್ತರವಾಗಿರುವುದನ್ನು ಗಮನಿಸಿದ್ದ ಆರೋಪಿಗಳು, ಅದನ್ನು ಏರಲು ಅಗತ್ಯವಿರುವ ಎತ್ತರದ ಏಣಿಯೊಂದನ್ನು ಯಾರೂ ಇಲ್ಲದ ಹೊತ್ತಿನಲ್ಲಿ ಸ್ಥಳಕ್ಕೆ ತಂದು ಅಲ್ಲೇ ಇಟ್ಟು ಹೋಗಿದ್ದರು’ ಎಂದು ಮೂಲಗಳು ವಿವರಿಸಿವೆ.