ಭಾರತೀಯರು ಹೆಚ್ಚಾಗಿ ಸಿಂಗಾಪುರ, ತೈವಾನ್, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಅಕ್ವೇರಿಯಂ ವೀಕ್ಷಣೆಗೆ ತೆರಳುತ್ತಾರೆ. ಮುಂದಿನ ದಿನಗಳಲ್ಲಿ ಅಂತಹದ್ದೇ ವಾತಾವರಣವನ್ನು ಬೆಂಗಳೂರಿನಲ್ಲಿಯೇ ನೋಡಲು ಸಾಧ್ಯವಾಗಲಿದೆ. ಆಲಂಕಾರಿಕ ಮೀನುಗಳ ಕೆಲವು ತಳಿಗಳು ಕಣ್ಮರೆಯಾಗುತ್ತಿದ್ದು, ಅವುಗಳ ರಕ್ಷಣೆಗೂ ಇಲಾಖೆ ಮುಂದಾಗಿದೆ.