<h2>ಕಲಾ ಸಂವಾದ </h2><p><strong>ಬೆಂಗಳೂರು:</strong> ಪರಮ್ ಕಲ್ಚರ್ ಸಾಂಸ್ಕೃತಿಕ ವೇದಿಕೆಯು ಇದೇ 31ರಂದು ಸಂಜೆ 6 ಗಂಟೆಗೆ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ ‘ಕಲಾ ಸಂವಾದ’ ಸಾಂಸ್ಕೃತಿಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದೆ. </p>.<p>ರಂಗಕರ್ಮಿ ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಕಲಾ ದಂಪತಿಗಳಾದ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ಅವರೊಂದಿಗೆ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರು ಸಂವಾದ ನಡೆಸಲಿದ್ದಾರೆ. </p>.<p>ಅಭಿನವ ಪ್ರೊಡಕ್ಷನ್ಸ್ ವತಿಯಿಂದ ವೇಷಭೂಷಣಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನೃತ್ಯ ರೂಪಕಗಳಿಗೆ ಬಳಸಲಾದ ಭವ್ಯ ವೇಷಭೂಷಣಗಳು, ಕಲಾತ್ಮಕ ಕಿರೀಟಗಳು ಮತ್ತು ಅಪರೂಪದ ಆಭರಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.</p>.<h2>ಮಂಟೇಸ್ವಾಮಿ ಕಾವ್ಯ ಲೈವ್</h2><p><strong>ಬೆಂಗಳೂರು:</strong> ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿ ತನ್ನ ಕೇಂದ್ರದಲ್ಲಿ ಇದೇ 29ರಂದು ಸಂಜೆ 6.30ಕ್ಕೆ ‘ಮಂಟೇಸ್ವಾಮಿ ಕಾವ್ಯ ಲೈವ್’ ಕಾರ್ಯಕ್ರಮ ಹಮ್ಮಿಕೊಂಡಿದೆ. </p>.<p>15ನೇ ಶತಮಾನದ ಸಂತ ಮಂಟೇಸ್ವಾಮಿ ಅವರ ಜೀವನ ಮತ್ತು ಸಂಚಾರಗಳನ್ನು ಆಧರಿಸಿದ ಈ ಕಾವ್ಯ, ಕರ್ನಾಟಕದ ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುತ್ತಾ, ಸಾಮಾಜಿಕ ಅಸಮಾನತೆ ಮತ್ತು ಶ್ರೇಣೀಕರಣಗಳನ್ನು ಪ್ರಶ್ನಿಸುತ್ತದೆ. ಈ ಜೀವಂತ ಪರಂಪರೆಯ ಒಂದು ಭಾಗವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.</p>.<p>ಈ ಕಾರ್ಯಕ್ರಮವನ್ನು ಮೈಸೂರು ಜಿ. ಗುರುರಾಜ್ ಅವರು ಮುನ್ನಡೆಸಲಿದ್ದಾರೆ. ಸಿ. ಬಸವರಾಜು (ಸಹಗಾನ), ಬಿ. ಜಗದೀಶ್ (ಡಕ್ಕಿ), ಜಿ. ಪೃಥ್ವಿರಾಜ್ (ಕಂಜರಿ), ಕಾಂತರಾಜು (ತಾಳ), ಜಿ. ಸಿದ್ದರಾಜು (ಘಟ) ಅವರು ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ ಎಂದು ಆಯೋಜಕರು ತಿಳಿಸಿದ್ದಾರೆ. </p>.<p><strong>ನೋಂದಣಿಗೆ ಲಿಂಕ್: https://forms.gle/uBFL62eriUso5ymU9</strong></p>.<h2>‘ರಂಗ ರಂಗೋಲಿ’ ನಾಟಕಗಳ ಉತ್ಸವ</h2><p><strong>ಬೆಂಗಳೂರು:</strong> ಅಕಾಡಮಿ ಆಫ್ ಮ್ಯೂಸಿಕ್ ‘ರಂಗ ರಂಗೋಲಿ’ ನಾಟಕಗಳ ಉತ್ಸವವನ್ನು ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದೆ. </p>.<p>29ರಂದು ಸಂಜೆ 6.30ಕ್ಕೆ ವೇದಿಕೆ ಫೌಂಡೇಷನ್ ತಂಡವು ‘ತುಘಲಕ್’ ನಾಟಕ ಪ್ರದರ್ಶಿಸಲಿದೆ. ಈ ನಾಟಕವನ್ನು ಗಿರೀಶ ಕಾರ್ನಾಡ ಅವರು ರಚಿಸಿದ್ದು, ಸಿ.ಆರ್. ಸಿಂಹ ನಿರ್ದೇಶಿಸಿದ್ದಾರೆ. ಋತ್ವಿಕ್ ಸಿಂಹ ಅವರು ಮರು ನಿರ್ದೇಶಿದ್ದಾರೆ. </p>.<p>30ರಂದು ಸಂಜೆ 6.30ಕ್ಕೆ ಬೆನಕ ತಂಡದಿಂದ ‘ಗೋಕುಲ ನಿರ್ಗಮನ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಿ.ವಿ. ಕಾರಂತ್ ಅವರ ಈ ನಾಟಕವನ್ನು ರಂಗಕರ್ಮಿ ಟಿ.ಎಸ್. ನಾಗಾಭರಣ ಅವರು ಮರು ವಿನ್ಯಾಸ ಮಾಡಿದ್ದಾರೆ. </p>.<h2>‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ</h2><p><strong>ಬೆಂಗಳೂರು:</strong> ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡವು ಇದೇ 30ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಪುಕಟ್ಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಈ ನಾಟಕವನ್ನು ಎಚ್. ಡುಂಡಿರಾಜ್ ಅವರು ರಚಿಸಿದ್ದು, ಅಶೋಕ್ ಬಿ. ನಿರ್ದೇಶಿಸಿದ್ದಾರೆ. ದಿನವಿಡೀ ಎಲ್ಲ ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿ, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ನಾಟಕ ಕಟ್ಟಿಕೊಡಲಿದೆ. ಒಂದೂವರೆ ಗಂಟೆಯ ಈ ಪ್ರದರ್ಶನ, ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಲಿದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ ಎಂದು ಆಯೋಜಕರು ತಿಳಿಸಿದ್ದಾರೆ. </p><p>ವಿವರಕ್ಕೆ: 9945977184 </p>.<h2>ಜಾಣಜಾಣೆಯ ‘ನಗೆ ಹಬ್ಬ’</h2><p><strong>ಬೆಂಗಳೂರು:</strong> ಜಾಣಜಾಣೆಯ ಸಾಹಿತಿ ಕಲಾವಿದರ ಟ್ರಸ್ಟ್ ಇದೇ 31ರಂದು ಸಂಜೆ 5 ಗಂಟೆಗೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಜಾಣಜಾಣೆಯ ‘ನಗೆ ಹಬ್ಬ’ ಹಮ್ಮಿಕೊಂಡಿದೆ. </p>.<p>ನಾಲ್ಕೂವರೆ ತಾಸು ಈ ಕಾರ್ಯಕ್ರಮ ನಡೆಯಲಿದ್ದು, ಹಾಸ್ಯ, ಸಂಗೀತ, ಮಿಮಿಕ್ರಿ ಇರಲಿದೆ. ಮಿಮಿಕ್ರಿ ಕಲಾವಿದರಾದ ದಯಾನಂದ್, ಗೋಪಿ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಎಂ.ಎಸ್. ನರಸಿಂಹಮೂರ್ತಿ, ಸಂಗೀತಗಾರ ಗುರುಕಿರಣ್ ಪಾಲ್ಗೊಳ್ಳಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ನಾಳೆ ಬಾ!’ ಹಾಸ್ಯ ಕಾರ್ಯಕ್ರಮ</h2><p><strong>ಬೆಂಗಳೂರು:</strong> ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ತನ್ನ ಕೇಂದ್ರದಲ್ಲಿ ಇದೇ 29ರಂದು ಸಂಜೆ 6 ಗಂಟೆಗೆ ‘ನಾಳೆ ಬಾ!’ ಸ್ಟ್ಯಾಂಡ್ ಅಪ್ ಕಾಮಿಡಿ ಹಮ್ಮಿಕೊಂಡಿದೆ. </p>.<p>ಈ ಕಾರ್ಯಕ್ರಮವನ್ನು ರಾಘವೇಂದ್ರ ಆಚಾರ್ಯ ಅವರು ನಡೆಸಿಕೊಡಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಪರ್ವ’ ನಾಟಕ ಪ್ರದರ್ಶನ</h2><p><strong>ಬೆಂಗಳೂರು:</strong> ಕೋಣನಕುಂಟೆಯಲ್ಲಿರುವ ಪ್ರೆಸ್ಟಿಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ತನ್ನ ಕೇಂದ್ರದಲ್ಲಿ ಇದೇ 30 ಮತ್ತು 31ರಂದು ಬೆಳಿಗ್ಗೆ 10 ಗಂಟೆಯಿಂದ ‘ಪರ್ವ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ ನಾಟಕ ಇದಾಗಿದೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ನಿರ್ದೇಶಿಸಿದ್ದಾರೆ. ಇದು ಮಹಾಭಾರತದ ಕಥೆಯನ್ನು ಆಧರಿಸಿದ್ದು, 8 ಗಂಟೆಗಳ ನಾಟಕವಾಗಿದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಬಾಯ್ಬಡ್ಕಿ’ ಹಾಸ್ಯ ನಾಟಕ</h2><p><strong>ಬೆಂಗಳೂರು:</strong> ಅಂತರಂಗ ಬಹಿರಂಗ ತಂಡವು ಇದೇ 31ರಂದು ಸಂಜೆ 4 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಬಾಯ್ಬಡ್ಕಿ’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಭೀಷ್ಮ ರಾಮಯ್ಯ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಒಂದೂವರೆ ಗಂಟೆಯ ಈ ನಾಟಕದ ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.</p>.<h2>‘ಬಾಯ್ ತುಂಬ ನಕ್ಬಿಡಿ’ ನಾಟಕ</h2><p>ಬೆಂಗಳೂರು: ಅಂತರಂಗ ಬಹಿರಂಗ ತಂಡ ಮತ್ತು ಕಲ್ಪವೃಕ್ಷ ಟ್ರಸ್ಟ್ ಜಂಟಿಯಾಗಿ ಇದೇ 31ರಂದು ಸಂಜೆ 7 ಗಂಟೆಗೆ ‘ಬಾಯ್ ತುಂಬ ನಕ್ಬಿಡಿ’ ಮಹಿಳೆಯರ ನಗೆ ನಾಟಕವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದೆ. </p>.<p>ನಾಗವೇಣಿ ರಂಜನ್ ಅವರು ಈ ನಾಟಕ ರಚಿಸಿದ್ದು, ವನಿತಾ ರಂಗಾಯಣ ನಿರ್ದೇಶಿಸಿದ್ದಾರೆ. ಈ ಕಥೆಯು ಮನೆಯ ಯಜಮಾನಿ ಮತ್ತು ಆಕೆಯ ಸೇವಕಿ ಸುತ್ತ ಸುತ್ತುತ್ತದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಕಥೆಗಾರ’ ನಾಟಕ</h2><p>ಬೆಂಗಳೂರು: ಕಲಾಧ್ಯಾನ್ ಇನ್ಸ್ಟಿಟ್ಯೂಟ್ ಫಾರ್ ಆರ್ಟ್ಸ್ ಇದೇ 29ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಕಥೆಗಾರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ವಿವೇಕ್ ಎಂ. ರಾವ್ ಅವರು ರಚಿಸಿ ನಿರ್ದೇಶಿಸಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಕಲಾ ಸಂವಾದ </h2><p><strong>ಬೆಂಗಳೂರು:</strong> ಪರಮ್ ಕಲ್ಚರ್ ಸಾಂಸ್ಕೃತಿಕ ವೇದಿಕೆಯು ಇದೇ 31ರಂದು ಸಂಜೆ 6 ಗಂಟೆಗೆ ಮೀನಾಕ್ಷಿ ರಂಗಮಂಚ ಸಭಾಂಗಣದಲ್ಲಿ ‘ಕಲಾ ಸಂವಾದ’ ಸಾಂಸ್ಕೃತಿಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದೆ. </p>.<p>ರಂಗಕರ್ಮಿ ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಚರ್ಚೆ ನಡೆಯಲಿದೆ. ಕಲಾ ದಂಪತಿಗಳಾದ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ.ರಾಜೇಂದ್ರ ಅವರೊಂದಿಗೆ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರು ಸಂವಾದ ನಡೆಸಲಿದ್ದಾರೆ. </p>.<p>ಅಭಿನವ ಪ್ರೊಡಕ್ಷನ್ಸ್ ವತಿಯಿಂದ ವೇಷಭೂಷಣಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ನೃತ್ಯ ರೂಪಕಗಳಿಗೆ ಬಳಸಲಾದ ಭವ್ಯ ವೇಷಭೂಷಣಗಳು, ಕಲಾತ್ಮಕ ಕಿರೀಟಗಳು ಮತ್ತು ಅಪರೂಪದ ಆಭರಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.</p>.<h2>ಮಂಟೇಸ್ವಾಮಿ ಕಾವ್ಯ ಲೈವ್</h2><p><strong>ಬೆಂಗಳೂರು:</strong> ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿ ತನ್ನ ಕೇಂದ್ರದಲ್ಲಿ ಇದೇ 29ರಂದು ಸಂಜೆ 6.30ಕ್ಕೆ ‘ಮಂಟೇಸ್ವಾಮಿ ಕಾವ್ಯ ಲೈವ್’ ಕಾರ್ಯಕ್ರಮ ಹಮ್ಮಿಕೊಂಡಿದೆ. </p>.<p>15ನೇ ಶತಮಾನದ ಸಂತ ಮಂಟೇಸ್ವಾಮಿ ಅವರ ಜೀವನ ಮತ್ತು ಸಂಚಾರಗಳನ್ನು ಆಧರಿಸಿದ ಈ ಕಾವ್ಯ, ಕರ್ನಾಟಕದ ವಿವಿಧ ಸಮುದಾಯಗಳ ಜನರನ್ನು ಒಟ್ಟುಗೂಡಿಸುತ್ತಾ, ಸಾಮಾಜಿಕ ಅಸಮಾನತೆ ಮತ್ತು ಶ್ರೇಣೀಕರಣಗಳನ್ನು ಪ್ರಶ್ನಿಸುತ್ತದೆ. ಈ ಜೀವಂತ ಪರಂಪರೆಯ ಒಂದು ಭಾಗವನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.</p>.<p>ಈ ಕಾರ್ಯಕ್ರಮವನ್ನು ಮೈಸೂರು ಜಿ. ಗುರುರಾಜ್ ಅವರು ಮುನ್ನಡೆಸಲಿದ್ದಾರೆ. ಸಿ. ಬಸವರಾಜು (ಸಹಗಾನ), ಬಿ. ಜಗದೀಶ್ (ಡಕ್ಕಿ), ಜಿ. ಪೃಥ್ವಿರಾಜ್ (ಕಂಜರಿ), ಕಾಂತರಾಜು (ತಾಳ), ಜಿ. ಸಿದ್ದರಾಜು (ಘಟ) ಅವರು ಸಾಥ್ ನೀಡಲಿದ್ದಾರೆ. ಪ್ರವೇಶ ಉಚಿತ ಎಂದು ಆಯೋಜಕರು ತಿಳಿಸಿದ್ದಾರೆ. </p>.<p><strong>ನೋಂದಣಿಗೆ ಲಿಂಕ್: https://forms.gle/uBFL62eriUso5ymU9</strong></p>.<h2>‘ರಂಗ ರಂಗೋಲಿ’ ನಾಟಕಗಳ ಉತ್ಸವ</h2><p><strong>ಬೆಂಗಳೂರು:</strong> ಅಕಾಡಮಿ ಆಫ್ ಮ್ಯೂಸಿಕ್ ‘ರಂಗ ರಂಗೋಲಿ’ ನಾಟಕಗಳ ಉತ್ಸವವನ್ನು ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದೆ. </p>.<p>29ರಂದು ಸಂಜೆ 6.30ಕ್ಕೆ ವೇದಿಕೆ ಫೌಂಡೇಷನ್ ತಂಡವು ‘ತುಘಲಕ್’ ನಾಟಕ ಪ್ರದರ್ಶಿಸಲಿದೆ. ಈ ನಾಟಕವನ್ನು ಗಿರೀಶ ಕಾರ್ನಾಡ ಅವರು ರಚಿಸಿದ್ದು, ಸಿ.ಆರ್. ಸಿಂಹ ನಿರ್ದೇಶಿಸಿದ್ದಾರೆ. ಋತ್ವಿಕ್ ಸಿಂಹ ಅವರು ಮರು ನಿರ್ದೇಶಿದ್ದಾರೆ. </p>.<p>30ರಂದು ಸಂಜೆ 6.30ಕ್ಕೆ ಬೆನಕ ತಂಡದಿಂದ ‘ಗೋಕುಲ ನಿರ್ಗಮನ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬಿ.ವಿ. ಕಾರಂತ್ ಅವರ ಈ ನಾಟಕವನ್ನು ರಂಗಕರ್ಮಿ ಟಿ.ಎಸ್. ನಾಗಾಭರಣ ಅವರು ಮರು ವಿನ್ಯಾಸ ಮಾಡಿದ್ದಾರೆ. </p>.<h2>‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ</h2><p><strong>ಬೆಂಗಳೂರು:</strong> ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗ ತಂಡವು ಇದೇ 30ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಪುಕಟ್ಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಈ ನಾಟಕವನ್ನು ಎಚ್. ಡುಂಡಿರಾಜ್ ಅವರು ರಚಿಸಿದ್ದು, ಅಶೋಕ್ ಬಿ. ನಿರ್ದೇಶಿಸಿದ್ದಾರೆ. ದಿನವಿಡೀ ಎಲ್ಲ ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿ, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ನಾಟಕ ಕಟ್ಟಿಕೊಡಲಿದೆ. ಒಂದೂವರೆ ಗಂಟೆಯ ಈ ಪ್ರದರ್ಶನ, ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಲಿದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ ಎಂದು ಆಯೋಜಕರು ತಿಳಿಸಿದ್ದಾರೆ. </p><p>ವಿವರಕ್ಕೆ: 9945977184 </p>.<h2>ಜಾಣಜಾಣೆಯ ‘ನಗೆ ಹಬ್ಬ’</h2><p><strong>ಬೆಂಗಳೂರು:</strong> ಜಾಣಜಾಣೆಯ ಸಾಹಿತಿ ಕಲಾವಿದರ ಟ್ರಸ್ಟ್ ಇದೇ 31ರಂದು ಸಂಜೆ 5 ಗಂಟೆಗೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಜಾಣಜಾಣೆಯ ‘ನಗೆ ಹಬ್ಬ’ ಹಮ್ಮಿಕೊಂಡಿದೆ. </p>.<p>ನಾಲ್ಕೂವರೆ ತಾಸು ಈ ಕಾರ್ಯಕ್ರಮ ನಡೆಯಲಿದ್ದು, ಹಾಸ್ಯ, ಸಂಗೀತ, ಮಿಮಿಕ್ರಿ ಇರಲಿದೆ. ಮಿಮಿಕ್ರಿ ಕಲಾವಿದರಾದ ದಯಾನಂದ್, ಗೋಪಿ, ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಎಂ.ಎಸ್. ನರಸಿಂಹಮೂರ್ತಿ, ಸಂಗೀತಗಾರ ಗುರುಕಿರಣ್ ಪಾಲ್ಗೊಳ್ಳಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ನಾಳೆ ಬಾ!’ ಹಾಸ್ಯ ಕಾರ್ಯಕ್ರಮ</h2><p><strong>ಬೆಂಗಳೂರು:</strong> ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ತನ್ನ ಕೇಂದ್ರದಲ್ಲಿ ಇದೇ 29ರಂದು ಸಂಜೆ 6 ಗಂಟೆಗೆ ‘ನಾಳೆ ಬಾ!’ ಸ್ಟ್ಯಾಂಡ್ ಅಪ್ ಕಾಮಿಡಿ ಹಮ್ಮಿಕೊಂಡಿದೆ. </p>.<p>ಈ ಕಾರ್ಯಕ್ರಮವನ್ನು ರಾಘವೇಂದ್ರ ಆಚಾರ್ಯ ಅವರು ನಡೆಸಿಕೊಡಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಪರ್ವ’ ನಾಟಕ ಪ್ರದರ್ಶನ</h2><p><strong>ಬೆಂಗಳೂರು:</strong> ಕೋಣನಕುಂಟೆಯಲ್ಲಿರುವ ಪ್ರೆಸ್ಟಿಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ತನ್ನ ಕೇಂದ್ರದಲ್ಲಿ ಇದೇ 30 ಮತ್ತು 31ರಂದು ಬೆಳಿಗ್ಗೆ 10 ಗಂಟೆಯಿಂದ ‘ಪರ್ವ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ ನಾಟಕ ಇದಾಗಿದೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ನಿರ್ದೇಶಿಸಿದ್ದಾರೆ. ಇದು ಮಹಾಭಾರತದ ಕಥೆಯನ್ನು ಆಧರಿಸಿದ್ದು, 8 ಗಂಟೆಗಳ ನಾಟಕವಾಗಿದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಬಾಯ್ಬಡ್ಕಿ’ ಹಾಸ್ಯ ನಾಟಕ</h2><p><strong>ಬೆಂಗಳೂರು:</strong> ಅಂತರಂಗ ಬಹಿರಂಗ ತಂಡವು ಇದೇ 31ರಂದು ಸಂಜೆ 4 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಬಾಯ್ಬಡ್ಕಿ’ ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ಭೀಷ್ಮ ರಾಮಯ್ಯ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಒಂದೂವರೆ ಗಂಟೆಯ ಈ ನಾಟಕದ ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.</p>.<h2>‘ಬಾಯ್ ತುಂಬ ನಕ್ಬಿಡಿ’ ನಾಟಕ</h2><p>ಬೆಂಗಳೂರು: ಅಂತರಂಗ ಬಹಿರಂಗ ತಂಡ ಮತ್ತು ಕಲ್ಪವೃಕ್ಷ ಟ್ರಸ್ಟ್ ಜಂಟಿಯಾಗಿ ಇದೇ 31ರಂದು ಸಂಜೆ 7 ಗಂಟೆಗೆ ‘ಬಾಯ್ ತುಂಬ ನಕ್ಬಿಡಿ’ ಮಹಿಳೆಯರ ನಗೆ ನಾಟಕವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದೆ. </p>.<p>ನಾಗವೇಣಿ ರಂಜನ್ ಅವರು ಈ ನಾಟಕ ರಚಿಸಿದ್ದು, ವನಿತಾ ರಂಗಾಯಣ ನಿರ್ದೇಶಿಸಿದ್ದಾರೆ. ಈ ಕಥೆಯು ಮನೆಯ ಯಜಮಾನಿ ಮತ್ತು ಆಕೆಯ ಸೇವಕಿ ಸುತ್ತ ಸುತ್ತುತ್ತದೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ. </p>.<h2>‘ಕಥೆಗಾರ’ ನಾಟಕ</h2><p>ಬೆಂಗಳೂರು: ಕಲಾಧ್ಯಾನ್ ಇನ್ಸ್ಟಿಟ್ಯೂಟ್ ಫಾರ್ ಆರ್ಟ್ಸ್ ಇದೇ 29ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಕಥೆಗಾರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. </p>.<p>ವಿವೇಕ್ ಎಂ. ರಾವ್ ಅವರು ರಚಿಸಿ ನಿರ್ದೇಶಿಸಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೋದಲ್ಲಿ ಲಭ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>