<p><strong>ಬೆಂಗಳೂರು:</strong> ‘ಹಿಂದೆ ಇದ್ದ ಕೈಬರಹದ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದ ಕೆಲವು ಹಿತಾಸಕ್ತ ಗುಂಪುಗಳು, ಕಾನೂನು–ಆಡಳಿತಾತ್ಮಕ ಚೌಕಟ್ಟಿನ ಬಗ್ಗೆ ಅರಿವಿಲ್ಲದೆ ಇ-ಖಾತಾ ಮತ್ತು ಅದರ ನೋಂದಣಿ ವ್ಯವಸ್ಥೆಯೊಂದಿಗಿನ ಸಂಯೋಜನೆ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.</p>.<p>‘ಇ-ಖಾತೆ ಸಂಯೋಜನೆಗೂ ಮುನ್ನ,ಬೆಂಗಳೂರಿನ ಆಸ್ತಿಗಳ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿತ್ತು. ಕಾವೇರಿವ್ಯವಸ್ಥೆಗೆ ಸೇರುತ್ತಿದ್ದ ವಹಿವಾಟುಗಳಲ್ಲಿ ಸುಮಾರು ಶೇ 85ರಷ್ಟು ಅನಧಿಕೃತ ಬಡಾವಣೆಗಳು, ಅಕ್ರಮ ಕಂದಾಯ ನಿವೇಶನಗಳು, ಅನುಮೋದಿಸದ ಉಪ ವಿಭಾಗಗಳು ಅಥವಾ ದೋಷಪೂರಿತ ಮಾಲೀಕತ್ವ ದಾಖಲೆಗಳಿಗೆ ಸಂಬಂಧಿಸಿ ದ್ದಾಗಿದ್ದವು. 2024-25ನೇ ಸಾಲಿನಲ್ಲೇ ಇ-ಖಾತಾ ಸಂಯೋಜನೆಗೂ ಮುನ್ನ ಇಂತಹ 75,000ಕ್ಕೂ ಹೆಚ್ಚು ವಹಿವಾಟು ನಡೆದಿದ್ದವು. ಇದೀಗ ಇಂತಹ ವಹಿವಾಟುಗಳು ಬಹುತೇಕ ಶೂನ್ಯಕ್ಕೆ ಇಳಿದವು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಯೋಜನಾ ಅನುಮೋದನೆ ಅಥವಾ ನಗರ ಪಾಲಿಕೆಯ ಮಾನ್ಯತೆ ಗಳಿಲ್ಲದ ಆಸ್ತಿಗಳನ್ನು ಖರೀದಿಸುವಂತೆ ನಾಗರಿಕರ ದಾರಿ ತಪ್ಪಿಸಲಾಗುತ್ತಿತ್ತು. ಇ-ಖಾತಾ ಸಂಯೋಜನೆಯನ್ನು ಪ್ರಶ್ನಿಸಿ ಅನೇಕ ರಿಟ್ ಅರ್ಜಿಗಳು ಹೈಕೋರ್ಟ್ ಮುಂದೆ ಬಂದಿವೆ. ಇ-ಖಾತಾ ವ್ಯವಸ್ಥೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ’ ಎಂದಿದ್ದಾರೆ.</p>.<p>‘ಡಿಜಿಟಲೀಕರಣ ಮತ್ತು ಸಂಯೋಜನೆಯು ದಶಕಗಳಿಂದ ಮಧ್ಯವರ್ತಿಗಳು, ಅಕ್ರಮ ಬಡಾವಣೆ ನಿರ್ವಾಹಕರು, ದಾಖಲೆಗಳ ದುರ್ಬಳಕೆದಾರರು ಮತ್ತು ಊಹಾತ್ಮಕ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಅನುಕೂಲವಾಗಿದ್ದ ಅಪಾರದರ್ಶಕ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿರುವುದರಿಂದ ಕೆಲವು ವರ್ಗಗಳಿಗೆ ಅಸಮಾಧಾನ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಹಿಂದೆ ಇದ್ದ ಕೈಬರಹದ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದ ಕೆಲವು ಹಿತಾಸಕ್ತ ಗುಂಪುಗಳು, ಕಾನೂನು–ಆಡಳಿತಾತ್ಮಕ ಚೌಕಟ್ಟಿನ ಬಗ್ಗೆ ಅರಿವಿಲ್ಲದೆ ಇ-ಖಾತಾ ಮತ್ತು ಅದರ ನೋಂದಣಿ ವ್ಯವಸ್ಥೆಯೊಂದಿಗಿನ ಸಂಯೋಜನೆ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.</p>.<p>‘ಇ-ಖಾತೆ ಸಂಯೋಜನೆಗೂ ಮುನ್ನ,ಬೆಂಗಳೂರಿನ ಆಸ್ತಿಗಳ ನಿರ್ವಹಣೆ ಅವ್ಯವಸ್ಥೆಯಿಂದ ಕೂಡಿತ್ತು. ಕಾವೇರಿವ್ಯವಸ್ಥೆಗೆ ಸೇರುತ್ತಿದ್ದ ವಹಿವಾಟುಗಳಲ್ಲಿ ಸುಮಾರು ಶೇ 85ರಷ್ಟು ಅನಧಿಕೃತ ಬಡಾವಣೆಗಳು, ಅಕ್ರಮ ಕಂದಾಯ ನಿವೇಶನಗಳು, ಅನುಮೋದಿಸದ ಉಪ ವಿಭಾಗಗಳು ಅಥವಾ ದೋಷಪೂರಿತ ಮಾಲೀಕತ್ವ ದಾಖಲೆಗಳಿಗೆ ಸಂಬಂಧಿಸಿ ದ್ದಾಗಿದ್ದವು. 2024-25ನೇ ಸಾಲಿನಲ್ಲೇ ಇ-ಖಾತಾ ಸಂಯೋಜನೆಗೂ ಮುನ್ನ ಇಂತಹ 75,000ಕ್ಕೂ ಹೆಚ್ಚು ವಹಿವಾಟು ನಡೆದಿದ್ದವು. ಇದೀಗ ಇಂತಹ ವಹಿವಾಟುಗಳು ಬಹುತೇಕ ಶೂನ್ಯಕ್ಕೆ ಇಳಿದವು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಯೋಜನಾ ಅನುಮೋದನೆ ಅಥವಾ ನಗರ ಪಾಲಿಕೆಯ ಮಾನ್ಯತೆ ಗಳಿಲ್ಲದ ಆಸ್ತಿಗಳನ್ನು ಖರೀದಿಸುವಂತೆ ನಾಗರಿಕರ ದಾರಿ ತಪ್ಪಿಸಲಾಗುತ್ತಿತ್ತು. ಇ-ಖಾತಾ ಸಂಯೋಜನೆಯನ್ನು ಪ್ರಶ್ನಿಸಿ ಅನೇಕ ರಿಟ್ ಅರ್ಜಿಗಳು ಹೈಕೋರ್ಟ್ ಮುಂದೆ ಬಂದಿವೆ. ಇ-ಖಾತಾ ವ್ಯವಸ್ಥೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ’ ಎಂದಿದ್ದಾರೆ.</p>.<p>‘ಡಿಜಿಟಲೀಕರಣ ಮತ್ತು ಸಂಯೋಜನೆಯು ದಶಕಗಳಿಂದ ಮಧ್ಯವರ್ತಿಗಳು, ಅಕ್ರಮ ಬಡಾವಣೆ ನಿರ್ವಾಹಕರು, ದಾಖಲೆಗಳ ದುರ್ಬಳಕೆದಾರರು ಮತ್ತು ಊಹಾತ್ಮಕ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಅನುಕೂಲವಾಗಿದ್ದ ಅಪಾರದರ್ಶಕ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿರುವುದರಿಂದ ಕೆಲವು ವರ್ಗಗಳಿಗೆ ಅಸಮಾಧಾನ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>