<p><strong>ಬೆಂಗಳೂರು:</strong> ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ಭೂ ಗ್ಯಾರಂಟಿ’ ಯೋಜನೆಯಡಿ ‘ನನ್ನ ಇ–ಖಾತಾ ನನ್ನ ಹಕ್ಕು ಅಭಿಯಾನ’ ಮೇ 16ರ ಶನಿವಾರದಿಂದ ಆರಂಭವಾಗಲಿದೆ.</p>.<p>ಆಸ್ತಿ ಮಾಲೀಕರಿಗೆ ಸುರಕ್ಷಿತ ಭೂ ದಾಖಲೆಗಳನ್ನು ನೀಡುವ ಸಲುವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಇ-ಖಾತಾ ಸಿದ್ಧಪಡಿಸಿ, ವಿತರಿಸಲಾಗುತ್ತಿದೆ ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಅಭಿಯಾನಕ್ಕಾಗಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 52 ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಶನಿವಾರ ಪ್ರತಿ ಕೇಂದ್ರದಲ್ಲಿ 100ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಮಾಲೀಕರು ಬಂದರೆ, ಅವರಿಗೆ ಟೋಕನ್ ನೀಡಿ, ಮುಂದಿನವಾರ ಅರ್ಜಿ ಸ್ವೀಕರಿಸಲಾಗುತ್ತದೆ. ಪ್ರತಿ ಶನಿವಾರ ಎಲ್ಲ ಕೇಂದ್ರಗಳಿಂದ ಸುಮಾರು ಐದು ಸಾವಿರ ಸಾರ್ವಜನಿಕರಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.</p>.<p>ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗಾಗಿ ಮಾರ್ಗಸೂಚಿ ದರದ ಶೇ 5ರ ಬದಲಿಗೆ ಶೇ 2ರಷ್ಟು ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯು 100 ದಿನ ಇರಲಿದೆ.</p>.<p>ಸಹಾಯಕ ಕಂದಾಯ ಅಧಿಕಾರಿಗಳು (ಎಆರ್ಒ), ಕಂದಾಯ ನಿರೀಕ್ಷಕರು (ಆರ್ಐ), ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿಯಾನ ಕೇಂದ್ರದಲ್ಲಿ ಅರ್ಜಿ ವಿಲೇವಾರಿ ಮತ್ತು ಪರಿಹಾರ ಒದಗಿಸಲಿದ್ದಾರೆ. ನಾಗರಿಕರು ಖಾತಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡುವಾಗ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.</p>.<p>ಅಭಿಯಾನ ಪ್ರತಿ ಶನಿವಾರ ನಡೆಯುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನದಂದು ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, ಬದಲಿಯಾಗಿ ಕೆಲಸದ ದಿನಗಳಂದು ರಜೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.</p>.<p><strong>ಖಾತಾ ಅಭಿಯಾನ ಕೇಂದ್ರದಲ್ಲಿನ ವ್ಯವಸ್ಥೆ</strong></p><p>* ನಾಗರಿಕ ಸಹಾಯ ಕೇಂದ್ರ (ಹೆಲ್ಸ್ ಡೆಸ್ಕ್)</p><p>* ಆಸನ ಹಾಗೂ ಸರತಿ ಸಾಲು ವ್ಯವಸ್ಥೆ</p><p>* ಸೂಚನಾ ಹಾಗೂ ಮಾಹಿತಿಯುಳ್ಳ ನಾಮಫಲಕ</p><p>* ವಿವಿಧ ಸೇವೆಗಳಿಗೆ ಪ್ರತ್ಯೇಕ ಕೌಂಟರ್</p><p>* ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್ಗಳು, ಪ್ರಿಂಟರ್, ಸ್ಕ್ಯಾನರ್</p><p>* ಪಾವತಿಗೆ ನೆರವು</p><p>* ನುರಿತ ಸಿಬ್ಬಂದಿ</p>.<h2>ನಗರ ಪಾಲಿಕೆಗಳಲ್ಲಿನ ಅಭಿಯಾನ ಕೇಂದ್ರಗಳ ವಿವರ</h2>.<p><strong>ಬೆಂಗಳೂರು ಪೂರ್ವ</strong></p><p>ಮಾರತ್ತಹಳ್ಳಿ- ನ್ಯೂ ಹೊರೈಜಾನ್ ಕಾಲೇಜು, ಬೆಳ್ಳಂದೂರು, ಕಾಡು ಬೀಸನಹಳ್ಳಿ; ವೈಟ್ಫೀಲ್ಡ್ ಕ್ಲಬ್; ಹೂಡಿ ಪಾಲಿಕೆ ವಾರ್ಡ್ ಕಚೇರಿ, ಎಇಸಿಎಸ್ ಲೇಔಟ್, ದೊಡ್ಡನೆಕ್ಕುಂದಿ;</p><p>ಕೆ.ಆರ್.ಪುರ- ಐಟಿಐ ಶಾಲೆ, ಐಟಿಐ ಕಾಲೊನಿ; ಎಚ್ಎಎಲ್ ವಿಮಾನನಿಲ್ದಾಣ- ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯರಸ್ತೆ; ಹೊರಮಾವು- ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗರ ಮುಖ್ಯ ರಸ್ತೆ.</p><p><strong>ಬೆಂಗಳೂರು ಕೇಂದ್ರ</strong></p><p>ಸಿ.ವಿ. ರಾಮನ್ ನಗರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 9ನೇ ಎ ಮುಖ್ಯರಸ್ತೆ, ಎಲ್ಐಸಿ ಕಾಲೊನಿ: ಜೀವನ್ ಬಿಮಾ ನಗರ, ತಮಿಳು ಸರ್ಕಾರಿ ಶಾಲೆ; ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯರಸ್ತೆ, ಲಾಂಗ್ಫೋರ್ಡ್ ಟೌನ್; ಡಾ. ಶಿವಕುಮಾರ ಸ್ವಾಮೀಜಿ ಬಯಲು ರಂಗಮಂಟಪ, ಇಂಡಿಕ್ಯೂಬ್ ಪಾರ್ಕ್, ದೊಮ್ಮಲೂರು 1ನೇ ಹಂತ; ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, 1ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ಆರೋಗ್ಯ ಸೌಧ ಸಮೀಪ; ನ್ಯಾಷನಲ್ ಹೈಸ್ಕೂಲ್, ಕೆ.ಆರ್ ರಸ್ತೆ, ಬಸವನಗುಡಿ; ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ, 1ನೇ ಬ್ಲಾಕ್, ಜಯನಗರ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ; ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ಲೀನ್ಸ್ ರಸ್ತೆ; ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್, ಚಾಮರಾಜಪೇಟೆ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ.</p><p><strong>ಬೆಂಗಳೂರು ಪಶ್ಚಿಮ</strong></p><p>ಮಲ್ಲೇಶ್ವರ ವಿಭಾಗ ಕಂದಾಯ ಅಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, 5ನೇ ಮುಖ್ಯ ರಸ್ತೆ, 5ನೇ ಕ್ರಾಸ್ ರಸ್ತೆ, ಎಂ.ಕೆ.ಕೆ ರಸ್ತೆ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್, ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ನೆಲ ಮಹಡಿ, ತ್ಯಾಗರಾಜನಗರ, ಚನ್ನಮ್ಮನಕೆರೆ ಅಚ್ಚುಕಟ್ಟು; ಜ್ಞಾನಸೌಧ, 3ನೇ ಮುಖ್ಯರಸ್ತೆ, ಕಲ್ಯಾಣನಗರ, 8ನೇ ಕ್ರಾಸ್, 1ನೇ ಹಂತ, 2ನೇ ಬ್ಲಾಕ್, ನಾಗರಭಾವಿ, ಮೂಡಲಪಾಳ್ಯ; ಪಾಲಿಕೆ ವಾರ್ಡ್ ಕಚೇರಿ, ಹಂಪಿನಗರ, ಶಾಸಕರ ಕಚೇರಿ, ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ, ಹಂಪಿನಗರ; ಪದ್ಮನಾಭನಗರ ಶಾಸಕರ ಕಚೇರಿ, ಸಂಖ್ಯೆ 3, 9ನೇ ಮುಖ್ಯರಸ್ತೆ, ವಿಹಾರ ಕೇಂದ್ರ ಸಮೀಪ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ; ಗಂಗಮ್ಮ ತಿಮ್ಮಯ್ಯ ಶಿಕ್ಷಣ ಸಂಸ್ಥೆ, ಸುಂಕದಕಟ್ಟೆ, 10/15, ಮಾಗಡಿ ಮುಖ್ಯರಸ್ತೆ; ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, 18, 3ನೇ ಮುಖ್ಯರಸ್ತೆ, ಅಂಚೆ ಕಚೇರಿ ಹಿಂಭಾಗ, ಕೆಂಗೇರಿ ಉಪನಗರ; ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 4ನೇ ಕ್ರಾಸ್, ಎಚ್ಎಂಟಿ ಲೇಔಟ್, ಓಂ ಟಿಂಬರ್ಸ್ ರಸ್ತೆ, ನೀರಿನ ಟ್ಯಾಂಕ್ ಸಮೀಪ; ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ಸಂಖ್ಯೆ 1,221, 12ನೇ ಮುಖ್ಯರಸ್ತೆ, 11ನೇ ಕ್ರಾಸ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, ನಾಗಪುರ.</p><p><strong>ಬೆಂಗಳೂರು ದಕ್ಷಿಣ</strong></p><p>ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ, ಐಎಂಜಿ ಅಪಾರ್ಟೆಂಟ್ಸ್ ಸಮೀಪ; ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ, ಬೇಗೂರು: ಬಹುಉದ್ದೇಶದ ಕಾರ್ಪೊರೇಷನ್ ಕಟ್ಟಡ, 2ನೇ ಕ್ರಾಸ್ ರಸ್ತೆ, ಸಿಎಚ್ಸಿಎಸ್ ಲೇಔಟ್, ಎಲ್ಐಸಿ ಕಾಲೊನಿ, ಜಯನಗರ 4ನೇ ಬ್ಲಾಕ್; ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 21ನೇ ಮುಖ್ಯರಸ್ತೆ, ಮಾರೆನಹಳ್ಳಿ, ರೇಣುಕಾ ಪ್ರಸನ್ನ ಥಿಯೇಟರ್ ಎದುರು, 2ನೇ ಹಂತ, ಜೆಪಿ ನಗರ; ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಉತ್ತರಹಳ್ಳಿ; ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, 14ನೇ ಮುಖ್ಯರಸ್ತೆ, ಆರ್ಬಿಐ ಲೇಔಟ್, ಜೆಪಿ ನಗರ 7ನೇ ಹಂತ; ಎಆರ್ಒ ಕಚೇರಿ, ಸಿಜೆ ವೆಂಕಟದಾಸ್ ರಸ್ತೆ, 150 ಬಸ್ ನಿಲ್ದಾಣದ ಸಮೀಪ, ಲಕ್ಷ್ಮೀಕಾಂತ ಪಾರ್ಕ್ ಎದುರು; ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆ, ರೂಪೇನ ಅಗ್ರಹಾರ, ಪೊಲೀಸ್ ಠಾಣೆ ಸಮೀಪ; ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪುಟ್ಟೇನಹಳ್ಳಿ, ಜಂಬೂಸವಾರಿ ದಿನ್ನೆ ಮುಖ್ಯರಸ್ತೆ; ಎಚ್ಎಸ್ಆರ್ ಲೇಔಟ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಕ್ಟರ್-1; ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿಇಆರ್ಪಿ ಪೊಲೀಸ್ ಕ್ವಾರ್ಟಸ್್ರ, ಅಡುಗೋಡಿ; ಶ್ರೀ ಸಾಯಿ ಇಂಗ್ಲಿಷ್ ಶಾಲೆ, 2ನೇ ಮುಖ್ಯರಸ್ತೆ, ನ್ಯೂ ಮೈಕೊ ಲೇಔಟ್ ರಸ್ತೆ, ಆಡುಗೋಡಿ ಸಿಗ್ನಲ್ ಸಮೀಪ.</p><p><strong>ಬೆಂಗಳೂರು ಉತ್ತರ</strong></p><p>ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ; ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್ಎಂಟಿ ಲೇಔಟ್, ಹಾಪ್ಕಾಮ್ಸ್ ರಸ್ತೆ, ವಿದ್ಯಾರಣ್ಯಪುರ; ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ನ್ ರಸ್ತೆ, ಕ್ಲೀವ್ಲ್ಯಾಂಡ್ ಟೌನ್: ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ, ಮಾರುತಿಸೇವಾನಗರ: ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, ಎಚ್ಬಿಆರ್ ಲೇಔಟ್, 7ನೇ ಮುಖ್ಯರಸ್ತೆ; ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎನ್ಸನ್, ಹೆಸರಘಟ್ಟ ರಸ್ತೆ; ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ ಟೆನ್ನನ್, ಹೆಸರಘಟ್ಟ ರಸ್ತೆ; ಆರ್ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಚಿಕ್ಕಬಾಣಾವರ ರೈಲು ನಿಲ್ದಾಣ ರಸ್ತೆ, ಬ್ಯಾಂಕ್ ಆಫ್ ಬರೋಡಾ ಎಟಿಎಂ ಸಮೀಪ, ಮೇಡರಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ; ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ; ಯಲಹಂಕ ನ್ಯೂ ಟೌನ್ / ಯಲಹಂಕ ಓಲ್ಡ್ ಟೌನ್ ಮಿನಿ ವಿಧಾನಸೌಧ, 3ನೇ ಮಹಡಿ, ಎನ್ಇಎಸ್ ಸಮೀಪ, ಸುಗ್ಗಪ್ಪ ಲೇಔಟ್, ಯಲಹಂಕ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260516-4-174040805</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ಭೂ ಗ್ಯಾರಂಟಿ’ ಯೋಜನೆಯಡಿ ‘ನನ್ನ ಇ–ಖಾತಾ ನನ್ನ ಹಕ್ಕು ಅಭಿಯಾನ’ ಮೇ 16ರ ಶನಿವಾರದಿಂದ ಆರಂಭವಾಗಲಿದೆ.</p>.<p>ಆಸ್ತಿ ಮಾಲೀಕರಿಗೆ ಸುರಕ್ಷಿತ ಭೂ ದಾಖಲೆಗಳನ್ನು ನೀಡುವ ಸಲುವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಇ-ಖಾತಾ ಸಿದ್ಧಪಡಿಸಿ, ವಿತರಿಸಲಾಗುತ್ತಿದೆ ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಅಭಿಯಾನಕ್ಕಾಗಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 52 ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಶನಿವಾರ ಪ್ರತಿ ಕೇಂದ್ರದಲ್ಲಿ 100ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಮಾಲೀಕರು ಬಂದರೆ, ಅವರಿಗೆ ಟೋಕನ್ ನೀಡಿ, ಮುಂದಿನವಾರ ಅರ್ಜಿ ಸ್ವೀಕರಿಸಲಾಗುತ್ತದೆ. ಪ್ರತಿ ಶನಿವಾರ ಎಲ್ಲ ಕೇಂದ್ರಗಳಿಂದ ಸುಮಾರು ಐದು ಸಾವಿರ ಸಾರ್ವಜನಿಕರಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.</p>.<p>ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗಾಗಿ ಮಾರ್ಗಸೂಚಿ ದರದ ಶೇ 5ರ ಬದಲಿಗೆ ಶೇ 2ರಷ್ಟು ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯು 100 ದಿನ ಇರಲಿದೆ.</p>.<p>ಸಹಾಯಕ ಕಂದಾಯ ಅಧಿಕಾರಿಗಳು (ಎಆರ್ಒ), ಕಂದಾಯ ನಿರೀಕ್ಷಕರು (ಆರ್ಐ), ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿಯಾನ ಕೇಂದ್ರದಲ್ಲಿ ಅರ್ಜಿ ವಿಲೇವಾರಿ ಮತ್ತು ಪರಿಹಾರ ಒದಗಿಸಲಿದ್ದಾರೆ. ನಾಗರಿಕರು ಖಾತಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡುವಾಗ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.</p>.<p>ಅಭಿಯಾನ ಪ್ರತಿ ಶನಿವಾರ ನಡೆಯುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರದ ರಜಾದಿನದಂದು ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ, ಬದಲಿಯಾಗಿ ಕೆಲಸದ ದಿನಗಳಂದು ರಜೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.</p>.<p><strong>ಖಾತಾ ಅಭಿಯಾನ ಕೇಂದ್ರದಲ್ಲಿನ ವ್ಯವಸ್ಥೆ</strong></p><p>* ನಾಗರಿಕ ಸಹಾಯ ಕೇಂದ್ರ (ಹೆಲ್ಸ್ ಡೆಸ್ಕ್)</p><p>* ಆಸನ ಹಾಗೂ ಸರತಿ ಸಾಲು ವ್ಯವಸ್ಥೆ</p><p>* ಸೂಚನಾ ಹಾಗೂ ಮಾಹಿತಿಯುಳ್ಳ ನಾಮಫಲಕ</p><p>* ವಿವಿಧ ಸೇವೆಗಳಿಗೆ ಪ್ರತ್ಯೇಕ ಕೌಂಟರ್</p><p>* ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್ಗಳು, ಪ್ರಿಂಟರ್, ಸ್ಕ್ಯಾನರ್</p><p>* ಪಾವತಿಗೆ ನೆರವು</p><p>* ನುರಿತ ಸಿಬ್ಬಂದಿ</p>.<h2>ನಗರ ಪಾಲಿಕೆಗಳಲ್ಲಿನ ಅಭಿಯಾನ ಕೇಂದ್ರಗಳ ವಿವರ</h2>.<p><strong>ಬೆಂಗಳೂರು ಪೂರ್ವ</strong></p><p>ಮಾರತ್ತಹಳ್ಳಿ- ನ್ಯೂ ಹೊರೈಜಾನ್ ಕಾಲೇಜು, ಬೆಳ್ಳಂದೂರು, ಕಾಡು ಬೀಸನಹಳ್ಳಿ; ವೈಟ್ಫೀಲ್ಡ್ ಕ್ಲಬ್; ಹೂಡಿ ಪಾಲಿಕೆ ವಾರ್ಡ್ ಕಚೇರಿ, ಎಇಸಿಎಸ್ ಲೇಔಟ್, ದೊಡ್ಡನೆಕ್ಕುಂದಿ;</p><p>ಕೆ.ಆರ್.ಪುರ- ಐಟಿಐ ಶಾಲೆ, ಐಟಿಐ ಕಾಲೊನಿ; ಎಚ್ಎಎಲ್ ವಿಮಾನನಿಲ್ದಾಣ- ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯರಸ್ತೆ; ಹೊರಮಾವು- ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗರ ಮುಖ್ಯ ರಸ್ತೆ.</p><p><strong>ಬೆಂಗಳೂರು ಕೇಂದ್ರ</strong></p><p>ಸಿ.ವಿ. ರಾಮನ್ ನಗರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 9ನೇ ಎ ಮುಖ್ಯರಸ್ತೆ, ಎಲ್ಐಸಿ ಕಾಲೊನಿ: ಜೀವನ್ ಬಿಮಾ ನಗರ, ತಮಿಳು ಸರ್ಕಾರಿ ಶಾಲೆ; ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯರಸ್ತೆ, ಲಾಂಗ್ಫೋರ್ಡ್ ಟೌನ್; ಡಾ. ಶಿವಕುಮಾರ ಸ್ವಾಮೀಜಿ ಬಯಲು ರಂಗಮಂಟಪ, ಇಂಡಿಕ್ಯೂಬ್ ಪಾರ್ಕ್, ದೊಮ್ಮಲೂರು 1ನೇ ಹಂತ; ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, 1ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ಆರೋಗ್ಯ ಸೌಧ ಸಮೀಪ; ನ್ಯಾಷನಲ್ ಹೈಸ್ಕೂಲ್, ಕೆ.ಆರ್ ರಸ್ತೆ, ಬಸವನಗುಡಿ; ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ, 1ನೇ ಬ್ಲಾಕ್, ಜಯನಗರ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ; ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ಲೀನ್ಸ್ ರಸ್ತೆ; ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್, ಚಾಮರಾಜಪೇಟೆ; ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ.</p><p><strong>ಬೆಂಗಳೂರು ಪಶ್ಚಿಮ</strong></p><p>ಮಲ್ಲೇಶ್ವರ ವಿಭಾಗ ಕಂದಾಯ ಅಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, 5ನೇ ಮುಖ್ಯ ರಸ್ತೆ, 5ನೇ ಕ್ರಾಸ್ ರಸ್ತೆ, ಎಂ.ಕೆ.ಕೆ ರಸ್ತೆ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್, ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ನೆಲ ಮಹಡಿ, ತ್ಯಾಗರಾಜನಗರ, ಚನ್ನಮ್ಮನಕೆರೆ ಅಚ್ಚುಕಟ್ಟು; ಜ್ಞಾನಸೌಧ, 3ನೇ ಮುಖ್ಯರಸ್ತೆ, ಕಲ್ಯಾಣನಗರ, 8ನೇ ಕ್ರಾಸ್, 1ನೇ ಹಂತ, 2ನೇ ಬ್ಲಾಕ್, ನಾಗರಭಾವಿ, ಮೂಡಲಪಾಳ್ಯ; ಪಾಲಿಕೆ ವಾರ್ಡ್ ಕಚೇರಿ, ಹಂಪಿನಗರ, ಶಾಸಕರ ಕಚೇರಿ, ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ, ಹಂಪಿನಗರ; ಪದ್ಮನಾಭನಗರ ಶಾಸಕರ ಕಚೇರಿ, ಸಂಖ್ಯೆ 3, 9ನೇ ಮುಖ್ಯರಸ್ತೆ, ವಿಹಾರ ಕೇಂದ್ರ ಸಮೀಪ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ; ಗಂಗಮ್ಮ ತಿಮ್ಮಯ್ಯ ಶಿಕ್ಷಣ ಸಂಸ್ಥೆ, ಸುಂಕದಕಟ್ಟೆ, 10/15, ಮಾಗಡಿ ಮುಖ್ಯರಸ್ತೆ; ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, 18, 3ನೇ ಮುಖ್ಯರಸ್ತೆ, ಅಂಚೆ ಕಚೇರಿ ಹಿಂಭಾಗ, ಕೆಂಗೇರಿ ಉಪನಗರ; ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 4ನೇ ಕ್ರಾಸ್, ಎಚ್ಎಂಟಿ ಲೇಔಟ್, ಓಂ ಟಿಂಬರ್ಸ್ ರಸ್ತೆ, ನೀರಿನ ಟ್ಯಾಂಕ್ ಸಮೀಪ; ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ಸಂಖ್ಯೆ 1,221, 12ನೇ ಮುಖ್ಯರಸ್ತೆ, 11ನೇ ಕ್ರಾಸ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, ನಾಗಪುರ.</p><p><strong>ಬೆಂಗಳೂರು ದಕ್ಷಿಣ</strong></p><p>ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ, ಐಎಂಜಿ ಅಪಾರ್ಟೆಂಟ್ಸ್ ಸಮೀಪ; ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ, ಬೇಗೂರು: ಬಹುಉದ್ದೇಶದ ಕಾರ್ಪೊರೇಷನ್ ಕಟ್ಟಡ, 2ನೇ ಕ್ರಾಸ್ ರಸ್ತೆ, ಸಿಎಚ್ಸಿಎಸ್ ಲೇಔಟ್, ಎಲ್ಐಸಿ ಕಾಲೊನಿ, ಜಯನಗರ 4ನೇ ಬ್ಲಾಕ್; ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 21ನೇ ಮುಖ್ಯರಸ್ತೆ, ಮಾರೆನಹಳ್ಳಿ, ರೇಣುಕಾ ಪ್ರಸನ್ನ ಥಿಯೇಟರ್ ಎದುರು, 2ನೇ ಹಂತ, ಜೆಪಿ ನಗರ; ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಉತ್ತರಹಳ್ಳಿ; ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, 14ನೇ ಮುಖ್ಯರಸ್ತೆ, ಆರ್ಬಿಐ ಲೇಔಟ್, ಜೆಪಿ ನಗರ 7ನೇ ಹಂತ; ಎಆರ್ಒ ಕಚೇರಿ, ಸಿಜೆ ವೆಂಕಟದಾಸ್ ರಸ್ತೆ, 150 ಬಸ್ ನಿಲ್ದಾಣದ ಸಮೀಪ, ಲಕ್ಷ್ಮೀಕಾಂತ ಪಾರ್ಕ್ ಎದುರು; ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆ, ರೂಪೇನ ಅಗ್ರಹಾರ, ಪೊಲೀಸ್ ಠಾಣೆ ಸಮೀಪ; ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪುಟ್ಟೇನಹಳ್ಳಿ, ಜಂಬೂಸವಾರಿ ದಿನ್ನೆ ಮುಖ್ಯರಸ್ತೆ; ಎಚ್ಎಸ್ಆರ್ ಲೇಔಟ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಕ್ಟರ್-1; ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿಇಆರ್ಪಿ ಪೊಲೀಸ್ ಕ್ವಾರ್ಟಸ್್ರ, ಅಡುಗೋಡಿ; ಶ್ರೀ ಸಾಯಿ ಇಂಗ್ಲಿಷ್ ಶಾಲೆ, 2ನೇ ಮುಖ್ಯರಸ್ತೆ, ನ್ಯೂ ಮೈಕೊ ಲೇಔಟ್ ರಸ್ತೆ, ಆಡುಗೋಡಿ ಸಿಗ್ನಲ್ ಸಮೀಪ.</p><p><strong>ಬೆಂಗಳೂರು ಉತ್ತರ</strong></p><p>ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ; ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್ಎಂಟಿ ಲೇಔಟ್, ಹಾಪ್ಕಾಮ್ಸ್ ರಸ್ತೆ, ವಿದ್ಯಾರಣ್ಯಪುರ; ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ನ್ ರಸ್ತೆ, ಕ್ಲೀವ್ಲ್ಯಾಂಡ್ ಟೌನ್: ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ, ಮಾರುತಿಸೇವಾನಗರ: ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, ಎಚ್ಬಿಆರ್ ಲೇಔಟ್, 7ನೇ ಮುಖ್ಯರಸ್ತೆ; ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎನ್ಸನ್, ಹೆಸರಘಟ್ಟ ರಸ್ತೆ; ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ ಟೆನ್ನನ್, ಹೆಸರಘಟ್ಟ ರಸ್ತೆ; ಆರ್ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಚಿಕ್ಕಬಾಣಾವರ ರೈಲು ನಿಲ್ದಾಣ ರಸ್ತೆ, ಬ್ಯಾಂಕ್ ಆಫ್ ಬರೋಡಾ ಎಟಿಎಂ ಸಮೀಪ, ಮೇಡರಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ; ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ; ಯಲಹಂಕ ನ್ಯೂ ಟೌನ್ / ಯಲಹಂಕ ಓಲ್ಡ್ ಟೌನ್ ಮಿನಿ ವಿಧಾನಸೌಧ, 3ನೇ ಮಹಡಿ, ಎನ್ಇಎಸ್ ಸಮೀಪ, ಸುಗ್ಗಪ್ಪ ಲೇಔಟ್, ಯಲಹಂಕ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260516-4-174040805</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>