ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐದನೇ ಮಹಡಿಯಿಂದ ಬಿದ್ದು ಗಾರೆ‌ ಮೇಸ್ತ್ರಿ ಸಾವು

Last Updated 10 ಸೆಪ್ಟೆಂಬರ್ 2021, 13:08 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಸಿ.ನಗರ ಠಾಣೆ ವ್ಯಾಪ್ತಿಯಲ್ಲಿರುವ‌‌ ನಿರ್ಮಾಣ ಹಂತದ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ವೆಂಕಟಸ್ವಾಮಿ (46) ಎಂಬುವರು ಮೃತಪಟ್ಟಿದ್ದಾರೆ.

'ಡಿ.ಜೆ. ಹಳ್ಳಿಯ ವಾಹಬ್ ಗಾರ್ಡನ್ ನಿವಾಸಿ ವೆಂಕಟಸ್ವಾಮಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸದ ಮೇಸ್ತ್ರಿ ಆಗಿದ್ದರು' ಎಂದು ಪೊಲೀಸರು ‌ಹೇಳಿದರು.

'ಠಾಣೆ ವ್ಯಾಪ್ತಿಯ ಬೋರ್ ಬ್ಯಾಂಕ್ ರಸ್ತೆ ಬಳಿಯ‌ ಜಾಗದಲ್ಲಿ 10 ದಿನಗಳಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಹಬ್ಬದ‌ ದಿನವಾದ ಶುಕ್ರವಾರವೂ ಕೆಲಸಕ್ಕೆ ‌ಬಂದಿದ್ದ ವೆಂಕಟಸ್ವಾಮಿ, ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆಯೇ ಆಯ ತಪ್ಪಿ ಬಿದ್ದಿದ್ದರು. ತೀವ್ರ‌ ಗಾಯಗೊಂಡು ಅವರು ಅಸುನೀಗಿದ್ದಾರೆ' ಎಂದೂ‌ ಮಾಹಿತಿ ನೀಡಿದರು.

'ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಜಾಗದ ಮಾಲೀಕ ಹಾಗೂ ಗುತ್ತಿಗೆದಾರನ ಬಗ್ಗೆ‌ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದೂ‌ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT