'ಠಾಣೆ ವ್ಯಾಪ್ತಿಯ ಬೋರ್ ಬ್ಯಾಂಕ್ ರಸ್ತೆ ಬಳಿಯ ಜಾಗದಲ್ಲಿ 10 ದಿನಗಳಿಂದ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದೆ. ಹಬ್ಬದ ದಿನವಾದ ಶುಕ್ರವಾರವೂ ಕೆಲಸಕ್ಕೆ ಬಂದಿದ್ದ ವೆಂಕಟಸ್ವಾಮಿ, ಐದನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆಯೇ ಆಯ ತಪ್ಪಿ ಬಿದ್ದಿದ್ದರು. ತೀವ್ರ ಗಾಯಗೊಂಡು ಅವರು ಅಸುನೀಗಿದ್ದಾರೆ' ಎಂದೂ ಮಾಹಿತಿ ನೀಡಿದರು.