<p><strong>ಬೆಂಗಳೂರು</strong>: ನಗರದ ಏಳು ವಾರ್ಡ್ಗಳಲ್ಲಿ ಪಾದಚಾರಿ ಮಾರ್ಗಗಳು ಬಳಕೆಗೆ ಸೂಕ್ತವಾಗಿಲ್ಲ, ಈ ಪ್ರದೇಶಗಳಲ್ಲಿ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಳ ಮೇಲೆ ನಡೆದಾಡುವಂತಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಾರ್ಟಿ (ಬಿಎನ್ಪಿ) ಹೇಳಿದೆ.</p>.<p>‘ಸಮಗ್ರ ಪಾದಚಾರಿ ರಸ್ತೆ ಮೌಲ್ಯಮಾಪನ ವರದಿ’ಯಲ್ಲಿ ಬಿಎನ್ಪಿ ಈ ವಿಷಯವನ್ನು ತಿಳಿಸಿದೆ. ಎಚ್ಎಸ್ಆರ್ ಲೇಔಟ್, ಕಲ್ಯಾಣ ನಗರ, ಬಿಳೇಕಹಳ್ಳಿ, ಯಲೇನಹಳ್ಳಿ, ದೊಡ್ಡಕಮ್ಮನಹಳ್ಳಿ, ಶಾಕಂಬರಿನಗರ ಮತ್ತು ಸಾರಕ್ಕಿ ವಾರ್ಡ್ಗಳ ‘ಏರಿಯಾ ಸಭಾಗಳು’ ನಡೆಸಿದ ಸುಮಾರು 5.25 ಕಿ.ಮೀ. ರಸ್ತೆ ಜಾಲದ ಏಳು ವ್ಯವಸ್ಥಿತ ಸಮೀಕ್ಷೆಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.</p>.<p>‘ಮುಖ್ಯ ರಸ್ತೆ ಹಾಗೂ ವಸತಿ ಪ್ರದೇಶದ ರಸ್ತೆಗಳ ವಾಸ್ತವ ಸ್ಥಿತಿ ಮತ್ತು ಜಿಯೋಟ್ಯಾಗಿಂಗ್ ಮೂಲಕ ನಡೆಸಿದ ಈ ತಪಾಸಣೆಯಲ್ಲಿ, ಸಮೀಕ್ಷೆ ಮಾಡಲಾದ ಶೇ 100ರಷ್ಟು ಪಾದಚಾರಿ ಮಾರ್ಗಗಳು ಕನಿಷ್ಠ ದರ್ಜೆಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ’ ಎಂದು ಬಿಎನ್ಪಿ ಸಂಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.</p>.<p>‘ಸಮೀಕ್ಷೆ ನಡೆಸಿದ ಶೇ 83ರಷ್ಟು ಭಾಗಗಳಲ್ಲಿ ಪಾದಚಾರಿ ಮಾರ್ಗಗಳಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಇನ್ನು ಶೇ 67ರಷ್ಟು ಪ್ರದೇಶಗಳಲ್ಲಿ ನೀರು ನಿಂತಿರುವುದು, ಬೆಳಕಿಲ್ಲದಿರುವುದು ಅಥವಾ ಬೀದಿ ದೀಪಗಳೇ ಇಲ್ಲದಿರುವುದು ಕಂಡುಬಂದಿದೆ. ವೀಲ್ ಚೇರ್ ಮೂಲಕ ಸಂಚಾರಕ್ಕೆ ಅಥವಾ ರ್ಯಾಂಪ್ಗಳ ವ್ಯವಸ್ಥೆ ಎಲ್ಲಿಯೂ ಇಲ್ಲ. ಶೇ 83ರಷ್ಟು ಪಾದಚಾರಿ ಮಾರ್ಗಗಳು ಪಾರ್ಕಿಂಗ್ ಮತ್ತು ಕಟ್ಟಡ ತ್ಯಾಜ್ಯಗಳಿಂದಲೇ ತುಂಬಿಕೊಂಡಿವೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-4-1070673338</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಏಳು ವಾರ್ಡ್ಗಳಲ್ಲಿ ಪಾದಚಾರಿ ಮಾರ್ಗಗಳು ಬಳಕೆಗೆ ಸೂಕ್ತವಾಗಿಲ್ಲ, ಈ ಪ್ರದೇಶಗಳಲ್ಲಿ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಳ ಮೇಲೆ ನಡೆದಾಡುವಂತಾಗಿದೆ ಎಂದು ಬೆಂಗಳೂರು ನವನಿರ್ಮಾಣ ಪಾರ್ಟಿ (ಬಿಎನ್ಪಿ) ಹೇಳಿದೆ.</p>.<p>‘ಸಮಗ್ರ ಪಾದಚಾರಿ ರಸ್ತೆ ಮೌಲ್ಯಮಾಪನ ವರದಿ’ಯಲ್ಲಿ ಬಿಎನ್ಪಿ ಈ ವಿಷಯವನ್ನು ತಿಳಿಸಿದೆ. ಎಚ್ಎಸ್ಆರ್ ಲೇಔಟ್, ಕಲ್ಯಾಣ ನಗರ, ಬಿಳೇಕಹಳ್ಳಿ, ಯಲೇನಹಳ್ಳಿ, ದೊಡ್ಡಕಮ್ಮನಹಳ್ಳಿ, ಶಾಕಂಬರಿನಗರ ಮತ್ತು ಸಾರಕ್ಕಿ ವಾರ್ಡ್ಗಳ ‘ಏರಿಯಾ ಸಭಾಗಳು’ ನಡೆಸಿದ ಸುಮಾರು 5.25 ಕಿ.ಮೀ. ರಸ್ತೆ ಜಾಲದ ಏಳು ವ್ಯವಸ್ಥಿತ ಸಮೀಕ್ಷೆಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.</p>.<p>‘ಮುಖ್ಯ ರಸ್ತೆ ಹಾಗೂ ವಸತಿ ಪ್ರದೇಶದ ರಸ್ತೆಗಳ ವಾಸ್ತವ ಸ್ಥಿತಿ ಮತ್ತು ಜಿಯೋಟ್ಯಾಗಿಂಗ್ ಮೂಲಕ ನಡೆಸಿದ ಈ ತಪಾಸಣೆಯಲ್ಲಿ, ಸಮೀಕ್ಷೆ ಮಾಡಲಾದ ಶೇ 100ರಷ್ಟು ಪಾದಚಾರಿ ಮಾರ್ಗಗಳು ಕನಿಷ್ಠ ದರ್ಜೆಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ’ ಎಂದು ಬಿಎನ್ಪಿ ಸಂಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.</p>.<p>‘ಸಮೀಕ್ಷೆ ನಡೆಸಿದ ಶೇ 83ರಷ್ಟು ಭಾಗಗಳಲ್ಲಿ ಪಾದಚಾರಿ ಮಾರ್ಗಗಳಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಇನ್ನು ಶೇ 67ರಷ್ಟು ಪ್ರದೇಶಗಳಲ್ಲಿ ನೀರು ನಿಂತಿರುವುದು, ಬೆಳಕಿಲ್ಲದಿರುವುದು ಅಥವಾ ಬೀದಿ ದೀಪಗಳೇ ಇಲ್ಲದಿರುವುದು ಕಂಡುಬಂದಿದೆ. ವೀಲ್ ಚೇರ್ ಮೂಲಕ ಸಂಚಾರಕ್ಕೆ ಅಥವಾ ರ್ಯಾಂಪ್ಗಳ ವ್ಯವಸ್ಥೆ ಎಲ್ಲಿಯೂ ಇಲ್ಲ. ಶೇ 83ರಷ್ಟು ಪಾದಚಾರಿ ಮಾರ್ಗಗಳು ಪಾರ್ಕಿಂಗ್ ಮತ್ತು ಕಟ್ಟಡ ತ್ಯಾಜ್ಯಗಳಿಂದಲೇ ತುಂಬಿಕೊಂಡಿವೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-4-1070673338</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>