<p>ಕೆ.ಆರ್.ಪುರ: ಎಲ್ಲೆಂದರಲ್ಲಿ ಕಸ ಸುರಿಯಬಾರದು, ಮನೆ ಮುಂದೆ ವಾಹನಗಳು ಬಂದಾಗ ಕಸ ನೀಡುವ ಮೂಲಕ ನೈರ್ಮಲ್ಯ ಕಾಪಾಡಬೇಕು ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಕ್ಯಾಲಸನಹಳ್ಳಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.</p>.<p>ಪೂರ್ವ ಫಾಮ್ ಬೀಚ್ ಅಪಾರ್ಟ್ಮೆಂಟ್, ಭೂ ಆಭರಣ ಅಪಾರ್ಟ್ ಮೆಂಟ್, ಬಿ.ಹನುಮಂತನಗರ ಬಡಾವಣೆ ಹಾಗೂ ಆಶಾ ಟೌನ್ಶಿಪ್ ನಿವಾಸಿಗಳು ಭಾನುವಾರ ಭಿತ್ತಿಪತ್ರ ಹಿಡಿದು ಅರಿವು ಮೂಡಿಸಿದರು.</p>.<p>‘ಎಲ್ಲುಸ್ ರಸ್ತೆ, ಕ್ಯಾಲಸನಹಳ್ಳಿ ರಸ್ತೆ, ಹನುಮಂತಪ್ಪ ಬಡಾವಣೆ, ಹೆಣ್ಣೂರು ರಸ್ತೆಗಳಲ್ಲಿ ವಾಹನಗಳಲ್ಲಿ ಬಂದು ರಸ್ತೆ ಬದಿಗೆ ಕಸ ಎಸೆಯಲಾಗುತ್ತಿದೆ. ಅಂಗಡಿ, ಬೇಕರಿ, ಮಾಂಸದ ತ್ಯಾಜ್ಯವನ್ನು ರಾತ್ರೋರಾತ್ರಿ ಸುರಿಯುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ಸ್ವಚ್ಛಗೊಳಿಸುವಂತಾ ಗಿದೆ’ ಎಂದು ಸ್ಥಳೀಯ ಎ.ರಾಘವೇಂದ್ರ ಆಕ್ರೋಶ ಹೊರಹಾಕಿದರು.</p>.<p>‘ಎಲ್ಲೆಂದರಲ್ಲಿ ಕಸ ಎಸೆಯದೆ. ಒಣ, ಹಸಿ ಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಬಿ.ಹನುಮಂತನಗರ ಬಡಾವಣೆ ನಿವಾಸಿ ಭಾರತಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-4-1685589188</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಆರ್.ಪುರ: ಎಲ್ಲೆಂದರಲ್ಲಿ ಕಸ ಸುರಿಯಬಾರದು, ಮನೆ ಮುಂದೆ ವಾಹನಗಳು ಬಂದಾಗ ಕಸ ನೀಡುವ ಮೂಲಕ ನೈರ್ಮಲ್ಯ ಕಾಪಾಡಬೇಕು ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಕ್ಯಾಲಸನಹಳ್ಳಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.</p>.<p>ಪೂರ್ವ ಫಾಮ್ ಬೀಚ್ ಅಪಾರ್ಟ್ಮೆಂಟ್, ಭೂ ಆಭರಣ ಅಪಾರ್ಟ್ ಮೆಂಟ್, ಬಿ.ಹನುಮಂತನಗರ ಬಡಾವಣೆ ಹಾಗೂ ಆಶಾ ಟೌನ್ಶಿಪ್ ನಿವಾಸಿಗಳು ಭಾನುವಾರ ಭಿತ್ತಿಪತ್ರ ಹಿಡಿದು ಅರಿವು ಮೂಡಿಸಿದರು.</p>.<p>‘ಎಲ್ಲುಸ್ ರಸ್ತೆ, ಕ್ಯಾಲಸನಹಳ್ಳಿ ರಸ್ತೆ, ಹನುಮಂತಪ್ಪ ಬಡಾವಣೆ, ಹೆಣ್ಣೂರು ರಸ್ತೆಗಳಲ್ಲಿ ವಾಹನಗಳಲ್ಲಿ ಬಂದು ರಸ್ತೆ ಬದಿಗೆ ಕಸ ಎಸೆಯಲಾಗುತ್ತಿದೆ. ಅಂಗಡಿ, ಬೇಕರಿ, ಮಾಂಸದ ತ್ಯಾಜ್ಯವನ್ನು ರಾತ್ರೋರಾತ್ರಿ ಸುರಿಯುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ಸ್ವಚ್ಛಗೊಳಿಸುವಂತಾ ಗಿದೆ’ ಎಂದು ಸ್ಥಳೀಯ ಎ.ರಾಘವೇಂದ್ರ ಆಕ್ರೋಶ ಹೊರಹಾಕಿದರು.</p>.<p>‘ಎಲ್ಲೆಂದರಲ್ಲಿ ಕಸ ಎಸೆಯದೆ. ಒಣ, ಹಸಿ ಕಸ ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಬಿ.ಹನುಮಂತನಗರ ಬಡಾವಣೆ ನಿವಾಸಿ ಭಾರತಿ ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260421-4-1685589188</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>