<p><strong>ಬೆಂಗಳೂರು:</strong> ಗುಜರಿ ವಸ್ತುಗಳ ಹೆಸರಿನಲ್ಲಿ ₹2,384 ಕೋಟಿ ಮೊತ್ತದ ಖೊಟ್ಟಿ ವಹಿವಾಟು ನಡೆಸಿ, ರಾಜ್ಯ ಸರ್ಕಾರಕ್ಕೆ ₹418 ಕೋಟಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ್ದ ಜಾಲವನ್ನು ಪತ್ತೆ ಮಾಡಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.</p>.<p>‘ನಗರದ ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದ ಕೆಲವು ಗುಜರಿ ವಸ್ತು ನಿರ್ವಹಣಾ ಕಂಪನಿಗಳು ಪದೇ ಪದೇ ನಕಲಿ ಜಿಎಸ್ಟಿ ಇನ್ವಾಯ್ಸ್ ಸೃಷ್ಟಿಸಿ, ಐಟಿಸಿ ವಂಚಿಸು ತ್ತಿದ್ದವು. ಈ ಬಗ್ಗೆ ವಿವರಣೆ ಪಡೆಯಲು ನೋಟಿಸ್ ನೀಡಲು ಹೋದಾಗ ನೋಂದಾಯಿತ ವಿಳಾಸದಲ್ಲಿ ಅಂತಹ ಕಂಪನಿಗಳೇ ಇಲ್ಲ ಎಂಬುದು ಪತ್ತೆಯಾಗುತ್ತಿದ್ದವು’ ಎಂದು ವಾಣಿಜ್ಯ ಇಲಾಖೆ ಮೂಲಗಳು ತಿಳಿಸಿವೆ.</p>.<p>‘ಈ ಕಂಪನಿಗಳ ವಹಿವಾಟುಗಳ ವಿವರ ಕಲೆ ಹಾಕಲು ವಿಶೇಷ ತಂಡವನ್ನು ರಚಿಸಲಾಗಿತ್ತು. ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ಇಂತಹ ವಹಿವಾಟು ನಡೆಸಿದ್ದ ಮತ್ತು ನಡೆಸುತ್ತಿದ್ದ ಸುಮಾರು 127 ಕಂಪನಿಗಳನ್ನು ಒಂದೇ ಜಾಲವು ನಿರ್ವಹಣೆ ಮಾಡುತ್ತಿದೆ ಎಂಬುದು ಪತ್ತೆಯಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>‘ನಾಯಂಡಹಳ್ಳಿಯಲ್ಲಿ ‘ಎಸ್ಕೆಎಸ್ ಟ್ರೇಡರ್ಸ್’ ಎಂಬ ಗುಜರಿ ವಸ್ತುಗಳ ಕಂಪನಿ ನಡೆಸುತ್ತಿರುವ ಸಲೀಮುಲ್ಲಾ ಬೇಗ್ (49 ವರ್ಷ) ಎಂಬವರು ಇದೇ ರೀತಿ ಸುಮಾರು 72 ನಕಲಿ ಕಂಪನಿಗಳ ಜತೆ ಸಂಶಯಾಸ್ಪದ ಖೊಟ್ಟಿ ವಹಿವಾಟು ನಡೆಸಿದ್ದಾರೆ. ಈ ನಕಲಿ ಕಂಪನಿಗಳಿಂದ ₹2,172 ಕೋಟಿ ಮೊತ್ತದ ಟಂಗ್ಸ್ಟನ್ ಕಾರ್ಬೈಡ್ ತ್ಯಾಜ್ಯ, ಇ–ತ್ಯಾಜ್ಯ ಮತ್ತು ಇತರ ಕೆಲವು ಹಾಳಾದ ಯಂತ್ರೋಪಕರಣಗಳನ್ನು ಖರೀದಿಸಿದ್ದೇವೆ ಎಂದು ಎಸ್ಕೆಎಸ್ ಟ್ರೇಡರ್ಸ್ ಇನ್ವಾಯ್ಸ್ಗಳನ್ನು ಸೃಷ್ಟಿಸಿದೆ. ಆದರೆ, ಆ 72 ಕಂಪನಿಗಳೂ ಅಸ್ತಿತ್ವದಲ್ಲಿ ಇಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<p>‘₹2,172 ಕೋಟಿ ಮೊತ್ತದ ಖೊಟ್ಟಿ ವಹಿವಾಟಿನ ಮೂಲಕ ಎಸ್ಕೆಎಸ್ ಟ್ರೇಡರ್ಸ್ ಹೆಸರಿಗೆ ₹380 ಕೋಟಿ ಮೊತ್ತದ ಐಟಿಸಿ ಪಡೆಯಲಾಗಿದೆ. ಇದೇ ರೀತಿ, ಹಸನ್ ಬೇಗ್ (35 ವರ್ಷ), ಮಾಲೀಕತ್ವದ ‘ಕೆಎಚ್ ಇ–ವೇಸ್ಟ್ ರಿಸೈಕ್ಲರ್’ ಕಂಪನಿಯು 55 ನಕಲಿ ಕಂಪನಿಗಳ ಜತೆ ₹212 ಕೋಟಿ ಮೊತ್ತದ ಸಂಶಯಾಸ್ಪದ ವಹಿವಾಟಿನ ಮೂಲಕ ₹38 ಕೋಟಿ ಮೊತ್ತದ ಐಟಿಸಿ ಪಡೆದಿದೆ. ಸಲೀಮುಲ್ಲಾ ಬೇಗ್ ಮತ್ತು ಹಸನ್ ಬೇಗ್ ಒಟ್ಟಾಗಿ ಈ ಜಾಲವನ್ನು ನಡೆಸುತ್ತಿದ್ದರು. ತಾವು ಪಡೆದುಕೊಂಡ ಐಟಿಸಿಯನ್ನು ಕಮಿಷನ್ ಪಡೆದು ಬೇರೆ ಕಂಪನಿಗಳಿಗೆ ವರ್ಗಾಯಿಸುತ್ತಿದ್ದರು ಎಂದು ವಿವರಿಸಿದೆ.</p>.<p>‘ಸುದೀರ್ಘ ತನಿಖೆಯ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಐಟಿಸಿ ವರ್ಗಾವಣೆ ಮಾಡಿಸಿಕೊಂಡವರಲ್ಲಿ ರಾಜ್ಯದ ಮತ್ತು ಹೊರರಾಜ್ಯದ ಕಂಪನಿಗಳೂ ಇವೆ. ತನಿಖೆಯನ್ನು ಮುಂದುವರಿಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ವಂಚಿಸಿರುವ ಐಟಿಸಿ ಮೊತ್ತವನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿವೆ.</p>.<p>ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಜಾರಿ) ಕನಿಷ್ಕ, ಹೆಚ್ಚುವರಿ ಆಯುಕ್ತೆ (ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗ) ಅಪರ್ಣಾ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಜಂಟಿ ತಂಡವು ಈ ತನಿಖೆಯನ್ನು ನಡೆಸುತ್ತಿದೆ.</p>.<p><strong>ವಂಚನೆಯ ಪರಿ</strong></p><p>ಆರೋಪಿಗಳು ಯಾರದ್ದೋ ಆಧಾರ್ ಮತ್ತು ಪ್ಯಾನ್ ವಿವರ ಬಳಸಿಕೊಂಡು, ಅಂತಹವರ ಹೆಸರಿನಲ್ಲಿ ಕಂಪನಿ ಹಾಗೂ ಜಿಎಸ್ಟಿ ನೋಂದಣಿ ಮಾಡಿಸುತ್ತಿದ್ದರು</p><p>ನಕಲಿ ಬಾಡಿಗೆ ಕರಾರು ಪತ್ರ, ಸುಳ್ಳು ವಿಳಾಸ, ನಕಲಿ ನೋಟರಿ ಮುದ್ರೆಗಳನ್ನು ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದರು. ಇವೇ ದಾಖಲೆಗಳನ್ನು ಬಳಸಿಕೊಂಡು ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನೂ ತೆರೆಯುತ್ತಿದ್ದರು</p><p>ಹೀಗೆ ಅಪರಿಚಿತರ ಹೆಸರಿನಲ್ಲಿ ನೋಂದಣಿ ಮಾಡಲಾದ ಕಂಪನಿಯಿಂದ ತಮ್ಮ ಕಂಪನಿಗಳು (ಎಸ್ಕೆಎಸ್ ಟ್ರೇಡರ್ಸ್ ಮತ್ತು ಕೆಎಚ್ ಇ–ವೇಸ್ಟ್ ರಿಸೈಕ್ಲರ್) ಗುಜರಿ ವಸ್ತುಗಳನ್ನು ಖರೀದಿಸಿವೆ ಎಂದು ನಕಲಿ ಇನ್ವಾಯ್ಸ್ ಸೃಷ್ಟಿಸುತ್ತಿದ್ದರು</p><p>ಗುಜರಿ ವಸ್ತುಗಳನ್ನು ಮತ್ತು ಮರುಬಳಕೆ ವಸ್ತುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡಿದಂತೆ ಮತ್ತೊಂದು ಇನ್ವಾಯ್ಸ್ ಸೃಷ್ಟಿಸುತ್ತಿದ್ದರು.<br>ಆ ಇನ್ವಾಯ್ಸ್ಗಳ ಆಧಾರದಲ್ಲಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡು, ಅವುಗಳನ್ನು ಇತರರಿಗೆ ವರ್ಗಾಯಿಸುತ್ತಿದ್ದರು</p><p>ಜಿಎಸ್ಟಿ ಐಟಿಸಿ ನೀಡಲಾಗಿರುವ ಪ್ರಕರಣಗಳಲ್ಲಿ, ಮೂಲ ಕಂಪನಿಯು ಜಿಎಸ್ಟಿ ಪಾವತಿಸದೇ ಇರುವುದು ಪತ್ತೆಯಾಗುತ್ತಿತ್ತು. ಅಂತಹ ಕಂಪನಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆಯೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುತ್ತಿದ್ದರು. ವಾಸ್ತವದಲ್ಲಿ ಆ ಕಂಪನಿಗಳೇ ಇಲ್ಲದಿದ್ದ ಕಾರಣ ಜಿಎಸ್ಟಿ ವಸೂಲಿ ಸಾಧ್ಯವಾಗುತ್ತಿರಲಿಲ್ಲ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260514-4-1072025751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗುಜರಿ ವಸ್ತುಗಳ ಹೆಸರಿನಲ್ಲಿ ₹2,384 ಕೋಟಿ ಮೊತ್ತದ ಖೊಟ್ಟಿ ವಹಿವಾಟು ನಡೆಸಿ, ರಾಜ್ಯ ಸರ್ಕಾರಕ್ಕೆ ₹418 ಕೋಟಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚಿಸಿದ್ದ ಜಾಲವನ್ನು ಪತ್ತೆ ಮಾಡಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.</p>.<p>‘ನಗರದ ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದ ಕೆಲವು ಗುಜರಿ ವಸ್ತು ನಿರ್ವಹಣಾ ಕಂಪನಿಗಳು ಪದೇ ಪದೇ ನಕಲಿ ಜಿಎಸ್ಟಿ ಇನ್ವಾಯ್ಸ್ ಸೃಷ್ಟಿಸಿ, ಐಟಿಸಿ ವಂಚಿಸು ತ್ತಿದ್ದವು. ಈ ಬಗ್ಗೆ ವಿವರಣೆ ಪಡೆಯಲು ನೋಟಿಸ್ ನೀಡಲು ಹೋದಾಗ ನೋಂದಾಯಿತ ವಿಳಾಸದಲ್ಲಿ ಅಂತಹ ಕಂಪನಿಗಳೇ ಇಲ್ಲ ಎಂಬುದು ಪತ್ತೆಯಾಗುತ್ತಿದ್ದವು’ ಎಂದು ವಾಣಿಜ್ಯ ಇಲಾಖೆ ಮೂಲಗಳು ತಿಳಿಸಿವೆ.</p>.<p>‘ಈ ಕಂಪನಿಗಳ ವಹಿವಾಟುಗಳ ವಿವರ ಕಲೆ ಹಾಕಲು ವಿಶೇಷ ತಂಡವನ್ನು ರಚಿಸಲಾಗಿತ್ತು. ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ಇಂತಹ ವಹಿವಾಟು ನಡೆಸಿದ್ದ ಮತ್ತು ನಡೆಸುತ್ತಿದ್ದ ಸುಮಾರು 127 ಕಂಪನಿಗಳನ್ನು ಒಂದೇ ಜಾಲವು ನಿರ್ವಹಣೆ ಮಾಡುತ್ತಿದೆ ಎಂಬುದು ಪತ್ತೆಯಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.</p>.<p>‘ನಾಯಂಡಹಳ್ಳಿಯಲ್ಲಿ ‘ಎಸ್ಕೆಎಸ್ ಟ್ರೇಡರ್ಸ್’ ಎಂಬ ಗುಜರಿ ವಸ್ತುಗಳ ಕಂಪನಿ ನಡೆಸುತ್ತಿರುವ ಸಲೀಮುಲ್ಲಾ ಬೇಗ್ (49 ವರ್ಷ) ಎಂಬವರು ಇದೇ ರೀತಿ ಸುಮಾರು 72 ನಕಲಿ ಕಂಪನಿಗಳ ಜತೆ ಸಂಶಯಾಸ್ಪದ ಖೊಟ್ಟಿ ವಹಿವಾಟು ನಡೆಸಿದ್ದಾರೆ. ಈ ನಕಲಿ ಕಂಪನಿಗಳಿಂದ ₹2,172 ಕೋಟಿ ಮೊತ್ತದ ಟಂಗ್ಸ್ಟನ್ ಕಾರ್ಬೈಡ್ ತ್ಯಾಜ್ಯ, ಇ–ತ್ಯಾಜ್ಯ ಮತ್ತು ಇತರ ಕೆಲವು ಹಾಳಾದ ಯಂತ್ರೋಪಕರಣಗಳನ್ನು ಖರೀದಿಸಿದ್ದೇವೆ ಎಂದು ಎಸ್ಕೆಎಸ್ ಟ್ರೇಡರ್ಸ್ ಇನ್ವಾಯ್ಸ್ಗಳನ್ನು ಸೃಷ್ಟಿಸಿದೆ. ಆದರೆ, ಆ 72 ಕಂಪನಿಗಳೂ ಅಸ್ತಿತ್ವದಲ್ಲಿ ಇಲ್ಲ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<p>‘₹2,172 ಕೋಟಿ ಮೊತ್ತದ ಖೊಟ್ಟಿ ವಹಿವಾಟಿನ ಮೂಲಕ ಎಸ್ಕೆಎಸ್ ಟ್ರೇಡರ್ಸ್ ಹೆಸರಿಗೆ ₹380 ಕೋಟಿ ಮೊತ್ತದ ಐಟಿಸಿ ಪಡೆಯಲಾಗಿದೆ. ಇದೇ ರೀತಿ, ಹಸನ್ ಬೇಗ್ (35 ವರ್ಷ), ಮಾಲೀಕತ್ವದ ‘ಕೆಎಚ್ ಇ–ವೇಸ್ಟ್ ರಿಸೈಕ್ಲರ್’ ಕಂಪನಿಯು 55 ನಕಲಿ ಕಂಪನಿಗಳ ಜತೆ ₹212 ಕೋಟಿ ಮೊತ್ತದ ಸಂಶಯಾಸ್ಪದ ವಹಿವಾಟಿನ ಮೂಲಕ ₹38 ಕೋಟಿ ಮೊತ್ತದ ಐಟಿಸಿ ಪಡೆದಿದೆ. ಸಲೀಮುಲ್ಲಾ ಬೇಗ್ ಮತ್ತು ಹಸನ್ ಬೇಗ್ ಒಟ್ಟಾಗಿ ಈ ಜಾಲವನ್ನು ನಡೆಸುತ್ತಿದ್ದರು. ತಾವು ಪಡೆದುಕೊಂಡ ಐಟಿಸಿಯನ್ನು ಕಮಿಷನ್ ಪಡೆದು ಬೇರೆ ಕಂಪನಿಗಳಿಗೆ ವರ್ಗಾಯಿಸುತ್ತಿದ್ದರು ಎಂದು ವಿವರಿಸಿದೆ.</p>.<p>‘ಸುದೀರ್ಘ ತನಿಖೆಯ ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಐಟಿಸಿ ವರ್ಗಾವಣೆ ಮಾಡಿಸಿಕೊಂಡವರಲ್ಲಿ ರಾಜ್ಯದ ಮತ್ತು ಹೊರರಾಜ್ಯದ ಕಂಪನಿಗಳೂ ಇವೆ. ತನಿಖೆಯನ್ನು ಮುಂದುವರಿಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ವಂಚಿಸಿರುವ ಐಟಿಸಿ ಮೊತ್ತವನ್ನು ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿವೆ.</p>.<p>ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಜಾರಿ) ಕನಿಷ್ಕ, ಹೆಚ್ಚುವರಿ ಆಯುಕ್ತೆ (ಸೇವಾ ವಿಶ್ಲೇಷಣೆ ಮತ್ತು ಗುಪ್ತಚರ ವಿಭಾಗ) ಅಪರ್ಣಾ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಜಂಟಿ ತಂಡವು ಈ ತನಿಖೆಯನ್ನು ನಡೆಸುತ್ತಿದೆ.</p>.<p><strong>ವಂಚನೆಯ ಪರಿ</strong></p><p>ಆರೋಪಿಗಳು ಯಾರದ್ದೋ ಆಧಾರ್ ಮತ್ತು ಪ್ಯಾನ್ ವಿವರ ಬಳಸಿಕೊಂಡು, ಅಂತಹವರ ಹೆಸರಿನಲ್ಲಿ ಕಂಪನಿ ಹಾಗೂ ಜಿಎಸ್ಟಿ ನೋಂದಣಿ ಮಾಡಿಸುತ್ತಿದ್ದರು</p><p>ನಕಲಿ ಬಾಡಿಗೆ ಕರಾರು ಪತ್ರ, ಸುಳ್ಳು ವಿಳಾಸ, ನಕಲಿ ನೋಟರಿ ಮುದ್ರೆಗಳನ್ನು ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದರು. ಇವೇ ದಾಖಲೆಗಳನ್ನು ಬಳಸಿಕೊಂಡು ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಳನ್ನೂ ತೆರೆಯುತ್ತಿದ್ದರು</p><p>ಹೀಗೆ ಅಪರಿಚಿತರ ಹೆಸರಿನಲ್ಲಿ ನೋಂದಣಿ ಮಾಡಲಾದ ಕಂಪನಿಯಿಂದ ತಮ್ಮ ಕಂಪನಿಗಳು (ಎಸ್ಕೆಎಸ್ ಟ್ರೇಡರ್ಸ್ ಮತ್ತು ಕೆಎಚ್ ಇ–ವೇಸ್ಟ್ ರಿಸೈಕ್ಲರ್) ಗುಜರಿ ವಸ್ತುಗಳನ್ನು ಖರೀದಿಸಿವೆ ಎಂದು ನಕಲಿ ಇನ್ವಾಯ್ಸ್ ಸೃಷ್ಟಿಸುತ್ತಿದ್ದರು</p><p>ಗುಜರಿ ವಸ್ತುಗಳನ್ನು ಮತ್ತು ಮರುಬಳಕೆ ವಸ್ತುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡಿದಂತೆ ಮತ್ತೊಂದು ಇನ್ವಾಯ್ಸ್ ಸೃಷ್ಟಿಸುತ್ತಿದ್ದರು.<br>ಆ ಇನ್ವಾಯ್ಸ್ಗಳ ಆಧಾರದಲ್ಲಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡು, ಅವುಗಳನ್ನು ಇತರರಿಗೆ ವರ್ಗಾಯಿಸುತ್ತಿದ್ದರು</p><p>ಜಿಎಸ್ಟಿ ಐಟಿಸಿ ನೀಡಲಾಗಿರುವ ಪ್ರಕರಣಗಳಲ್ಲಿ, ಮೂಲ ಕಂಪನಿಯು ಜಿಎಸ್ಟಿ ಪಾವತಿಸದೇ ಇರುವುದು ಪತ್ತೆಯಾಗುತ್ತಿತ್ತು. ಅಂತಹ ಕಂಪನಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆಯೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುತ್ತಿದ್ದರು. ವಾಸ್ತವದಲ್ಲಿ ಆ ಕಂಪನಿಗಳೇ ಇಲ್ಲದಿದ್ದ ಕಾರಣ ಜಿಎಸ್ಟಿ ವಸೂಲಿ ಸಾಧ್ಯವಾಗುತ್ತಿರಲಿಲ್ಲ</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br>260514-4-1072025751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>