<p>ಬೆಂಗಳೂರು: ಸರಸ್ವತೀ ಸಂಗೀತ ವಿದ್ಯಾಲಯ ನೀಡುವ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ಕ್ಕೆ ತಬಲಾ ವಿದ್ವಾಂಸ ಎನ್.ಎಸ್. ಗುಂಡಾಶಾಸ್ತ್ರಿ ಹಾಗೂ ‘ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ’ಕ್ಕೆ ಮ್ಯಾಂಡೊಲಿನ್ ವಿದ್ವಾಂಸ ಎನ್.ಎಸ್. ಪ್ರಸಾದ್ ಆಯ್ಕೆಯಾಗಿದ್ದಾರೆ.</p>.<p>ಈ ಪ್ರಶಸ್ತಿಗಳು ತಲಾ ₹11 ಸಾವಿರ ನಗದು ಒಳಗೊಂಡಿವೆ. ವಿದ್ಯಾಲಯವು ಇದೇ 7ರಂದು ಸಂಜೆ 4.30ಕ್ಕೆ ಜಯನಗರದ 9ನೇ ಬ್ಲಾಕ್ನಲ್ಲಿರುವ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಭಾರತೀಯ ನಾದ ಸೌರಭ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.</p>.<p>ನವದೆಹಲಿಯ ಆಕಾಶವಾಣಿ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಕೆ.ವಾಗೀಶ್ ಹಾಗೂ ತಬಲಾ ವಾದಕ ಸತೀಶ್ ಹಂಪಿಹೊಳಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.</p>.<p>ಈ ಸಂಗೀತೋತ್ಸವದಲ್ಲಿ ವಾಗೀಶ ಭಟ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದು, ಮಧುಸೂದನ್ ಮುತಾಲಿಕ್ (ತಬಲಾ), ಶಿವಕುಮಾರ್ ಮಹಂತ (ಹಾರ್ಮೋನಿಯಂ), ಸ್ಮೃತಿ ಎಸ್. ಭಟ್ (ಗಾಯನ), ಎಂ. ಪ್ರಣವ್ ಪೈ (ತಬಲಾ) ಹಾಗೂ ಪ್ರಣವ್ ಪಡಿಯಾರ್ (ಹಾರ್ಮೋನಿಯಂ) ಅವರಿಂದ ಸಂಗೀತ ಕಛೇರಿ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-4-1863518822</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸರಸ್ವತೀ ಸಂಗೀತ ವಿದ್ಯಾಲಯ ನೀಡುವ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ಕ್ಕೆ ತಬಲಾ ವಿದ್ವಾಂಸ ಎನ್.ಎಸ್. ಗುಂಡಾಶಾಸ್ತ್ರಿ ಹಾಗೂ ‘ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ’ಕ್ಕೆ ಮ್ಯಾಂಡೊಲಿನ್ ವಿದ್ವಾಂಸ ಎನ್.ಎಸ್. ಪ್ರಸಾದ್ ಆಯ್ಕೆಯಾಗಿದ್ದಾರೆ.</p>.<p>ಈ ಪ್ರಶಸ್ತಿಗಳು ತಲಾ ₹11 ಸಾವಿರ ನಗದು ಒಳಗೊಂಡಿವೆ. ವಿದ್ಯಾಲಯವು ಇದೇ 7ರಂದು ಸಂಜೆ 4.30ಕ್ಕೆ ಜಯನಗರದ 9ನೇ ಬ್ಲಾಕ್ನಲ್ಲಿರುವ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಭಾರತೀಯ ನಾದ ಸೌರಭ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.</p>.<p>ನವದೆಹಲಿಯ ಆಕಾಶವಾಣಿ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಕೆ.ವಾಗೀಶ್ ಹಾಗೂ ತಬಲಾ ವಾದಕ ಸತೀಶ್ ಹಂಪಿಹೊಳಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.</p>.<p>ಈ ಸಂಗೀತೋತ್ಸವದಲ್ಲಿ ವಾಗೀಶ ಭಟ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಲಿದ್ದು, ಮಧುಸೂದನ್ ಮುತಾಲಿಕ್ (ತಬಲಾ), ಶಿವಕುಮಾರ್ ಮಹಂತ (ಹಾರ್ಮೋನಿಯಂ), ಸ್ಮೃತಿ ಎಸ್. ಭಟ್ (ಗಾಯನ), ಎಂ. ಪ್ರಣವ್ ಪೈ (ತಬಲಾ) ಹಾಗೂ ಪ್ರಣವ್ ಪಡಿಯಾರ್ (ಹಾರ್ಮೋನಿಯಂ) ಅವರಿಂದ ಸಂಗೀತ ಕಛೇರಿ ನಡೆಯಲಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-4-1863518822</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>