<p><strong>ಬೆಂಗಳೂರು:</strong> ನಗರದಲ್ಲಿ ಶುಕ್ರವಾರ ಗಾಳಿ ಸಹಿತ ಸುರಿದ ಮಳೆಯಿಂದಾಗಿ ಹತ್ತಾರು ಕಡೆಗಳಲ್ಲಿ ಮರಗಳು ಮುರಿದು ಬಿದ್ದವು. ವಾಹನ ಸಂಚಾರಕ್ಕೆ ತೊಡಕುಂಟಾಯಿತು. ವಿಜಯನಗರದಲ್ಲಿ ಕಾಂಪೌಂಡ್ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ಹಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ಹರಿಯಿತು.</p>.<p>ರಾಜರಾಜೇಶ್ವರಿ ನಗರದಲ್ಲಿ ಮೂರು ಕಡೆ ಮರಗಳು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದವು. ಹೆಗ್ಗನಹಳ್ಳಿ, ಪುಟ್ಟೇನಹಳ್ಳಿ, ಅರಕೆರೆ, ಮೈಕೊ ಲೇಔಟ್, ವಿಜಯನಗರ, ಜೆ.ಪಿ.ನಗರ, ಕಲ್ಯಾಣ ನಗರ, ಮತ್ತಿಕೆರೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆ.ಆರ್.ಪುರ, ದೊಡ್ಡಬೆಟ್ಟಹಳ್ಳಿ, ವಿದ್ಯಾರಣ್ಯಪುರ ಮುಂತಾದೆಡೆ ಮರಗಳು ಧರೆಗುರುಳಿವೆ.</p>.<p>ಇಸ್ರೋ ಲೇಔಟ್ ಬಸ್ ನಿಲ್ದಾಣ ಬಳಿ ಮರ ಬಿದ್ದ ಕಾರಣ ಕೆ.ಎಸ್. ಲೇಔಟ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ವಾಹನಗಳು ಪರ್ಯಾಯ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು.</p>.<p>ಕೆ.ಆರ್. ಸರ್ಕಲ್, ಮೈಸೂರು ರಸ್ತೆಯಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. </p>.<p>ಯುಬಿ ಸಿಟಿ, ಕಾಫಿ ಡೇ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಗುರುರಾಜ ಜಂಕ್ಷನ್, ಗವಿಪುರ ರಸ್ತೆ<br />ಸಾರಕ್ಕಿ, ಪಟ್ಟಂದೂರು ಅಗ್ರಹಾರ, ಇಸಿಸಿ ರಸ್ತೆ, ದೇವಾಂಗ ಜಂಕ್ಷನ್, ಮೇಖ್ರಿವೃತ್ತ, ಸಿಎಲ್ ಕ್ರಾಸ್, ಬಿಸ್ಮಿಲ್ಲಾ ನಗರ, ನಾಯಂಡಹಳ್ಳಿ, ರಾಜಮಹಲ್, ಕುಮಾರ ಕೃಪಾ ರಸ್ತೆ, ರಾಜೀವ್ ಗಾಂಧಿ ವೃತ್ತ, ಕಿಮ್ಕೋ ಜಂಕ್ಷನ್, ಕಲ್ಯಾಣ ನಗರ ಓಂಶಕ್ತಿ ದೇವಸ್ಥಾನ ರಸ್ತೆ, ಮಡಿವಾಳ ಪಿಎಸ್ ರಸ್ತೆ, ಸಾರಕ್ಕಿ ಯು ಟರ್ನ್, ಕ್ವೀನ್ಸ್ ಜಂಕ್ಷನ್, ಅನಿಲ್ ಕುಂಬ್ಳೆ ಜಂಕ್ಷನ್, ಎಸ್ಜೆಪಿ ರಸ್ತೆ, ಬ್ರಿಯಾಂಡ್ ಸ್ಕ್ವೇರ್ ರಸ್ತೆ, ಜಿಆರ್ಟಿ ಜಂಕ್ಷನ್, ನೆಕ್ಸಸ್ ಮಾಲ್, ವೈಟ್ಫೀಲ್ಡ್ ಮುಖ್ಯ ರಸ್ತೆ, ಬಳೆಗೆರೆ ರಸ್ತೆ, ಸಿದ್ಧಾಪುರ, ದೇವಿನಗರ ಕ್ರಾಸ್, ಬಿಳೇಕಹಳ್ಳಿ, ಆರ್.ವಿ ಟೀಚರ್ ಕಾಲೇಜು ಜಂಕ್ಷನ್ಗಳಲ್ಲಿ ರಸ್ತೆಯಲ್ಲಿ ಮಳೆ ನೀರು ಹರಿದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಯಿತು. ಇದರಿಂದ ವಾಹನ ದಟ್ಟಣೆ ಉಂಟಾಯಿತು.</p>.<p>ಮಳೆ ವಿವರ: ನಾಯಂಡಹಳ್ಳಿ 3.9 ಸೆಂ.ಮೀ., ಕಾಟನ್ಪೇಟೆ 3.9 ಸೆಂ.ಮೀ., ಸಂಪಂಗಿರಾಮನಗರ 3.6 ಸೆಂ.ಮೀ., ಹಂಪಿನಗರ 3.6 ಸೆಂ.ಮೀ., ಪುಲಕೇಶಿನಗರ 3.4 ಸೆಂ.ಮೀ., ಚಾಮರಾಜಪೇಟೆ 3.4 ಸೆಂ.ಮೀ., ಕೆಂಗೇರಿ 3.3 ಸೆಂ.ಮೀ., ಬಾಣಸವಾಡಿ 3.1 ಸೆಂ.ಮೀ., ರಾಜಮಹಲ್ ಗುಟ್ಟಹಳ್ಳಿ 2.7 ಸೆಂ.ಮೀ., ವಿಶ್ವೇಶ್ವರ ಪುರ 2.7 ಸೆಂ.ಮೀ., ಮನೋರಾಯನ ಪಾಳ್ಯ 2.7 ಸೆಂ.ಮೀ., ನಾಗಪುರ 2.5 ಸೆಂ.ಮೀ., ಕೊಟ್ಟಿಗೇಪಾಳ್ಯ 2.2 ಸೆಂ.ಮೀ., ಕಮ್ಮನಹಳ್ಳಿ 2.2 ಸೆಂ.ಮೀ., ಅಂಜನಾಪುರ 2.1 ಸೆಂ.ಮೀ., ರಾಜರಾಜೇಶ್ವರಿ ನಗರ 2 ಸೆಂ.ಮೀ. ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಗರದಲ್ಲಿ ಶುಕ್ರವಾರ ಗಾಳಿ ಸಹಿತ ಸುರಿದ ಮಳೆಯಿಂದಾಗಿ ಹತ್ತಾರು ಕಡೆಗಳಲ್ಲಿ ಮರಗಳು ಮುರಿದು ಬಿದ್ದವು. ವಾಹನ ಸಂಚಾರಕ್ಕೆ ತೊಡಕುಂಟಾಯಿತು. ವಿಜಯನಗರದಲ್ಲಿ ಕಾಂಪೌಂಡ್ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ಹಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ಹರಿಯಿತು.</p>.<p>ರಾಜರಾಜೇಶ್ವರಿ ನಗರದಲ್ಲಿ ಮೂರು ಕಡೆ ಮರಗಳು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದವು. ಹೆಗ್ಗನಹಳ್ಳಿ, ಪುಟ್ಟೇನಹಳ್ಳಿ, ಅರಕೆರೆ, ಮೈಕೊ ಲೇಔಟ್, ವಿಜಯನಗರ, ಜೆ.ಪಿ.ನಗರ, ಕಲ್ಯಾಣ ನಗರ, ಮತ್ತಿಕೆರೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಕೆ.ಆರ್.ಪುರ, ದೊಡ್ಡಬೆಟ್ಟಹಳ್ಳಿ, ವಿದ್ಯಾರಣ್ಯಪುರ ಮುಂತಾದೆಡೆ ಮರಗಳು ಧರೆಗುರುಳಿವೆ.</p>.<p>ಇಸ್ರೋ ಲೇಔಟ್ ಬಸ್ ನಿಲ್ದಾಣ ಬಳಿ ಮರ ಬಿದ್ದ ಕಾರಣ ಕೆ.ಎಸ್. ಲೇಔಟ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ವಾಹನಗಳು ಪರ್ಯಾಯ ರಸ್ತೆಯಲ್ಲಿ ಪ್ರಯಾಣಿಸಬೇಕಾಯಿತು.</p>.<p>ಕೆ.ಆರ್. ಸರ್ಕಲ್, ಮೈಸೂರು ರಸ್ತೆಯಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. </p>.<p>ಯುಬಿ ಸಿಟಿ, ಕಾಫಿ ಡೇ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್, ಗುರುರಾಜ ಜಂಕ್ಷನ್, ಗವಿಪುರ ರಸ್ತೆ<br />ಸಾರಕ್ಕಿ, ಪಟ್ಟಂದೂರು ಅಗ್ರಹಾರ, ಇಸಿಸಿ ರಸ್ತೆ, ದೇವಾಂಗ ಜಂಕ್ಷನ್, ಮೇಖ್ರಿವೃತ್ತ, ಸಿಎಲ್ ಕ್ರಾಸ್, ಬಿಸ್ಮಿಲ್ಲಾ ನಗರ, ನಾಯಂಡಹಳ್ಳಿ, ರಾಜಮಹಲ್, ಕುಮಾರ ಕೃಪಾ ರಸ್ತೆ, ರಾಜೀವ್ ಗಾಂಧಿ ವೃತ್ತ, ಕಿಮ್ಕೋ ಜಂಕ್ಷನ್, ಕಲ್ಯಾಣ ನಗರ ಓಂಶಕ್ತಿ ದೇವಸ್ಥಾನ ರಸ್ತೆ, ಮಡಿವಾಳ ಪಿಎಸ್ ರಸ್ತೆ, ಸಾರಕ್ಕಿ ಯು ಟರ್ನ್, ಕ್ವೀನ್ಸ್ ಜಂಕ್ಷನ್, ಅನಿಲ್ ಕುಂಬ್ಳೆ ಜಂಕ್ಷನ್, ಎಸ್ಜೆಪಿ ರಸ್ತೆ, ಬ್ರಿಯಾಂಡ್ ಸ್ಕ್ವೇರ್ ರಸ್ತೆ, ಜಿಆರ್ಟಿ ಜಂಕ್ಷನ್, ನೆಕ್ಸಸ್ ಮಾಲ್, ವೈಟ್ಫೀಲ್ಡ್ ಮುಖ್ಯ ರಸ್ತೆ, ಬಳೆಗೆರೆ ರಸ್ತೆ, ಸಿದ್ಧಾಪುರ, ದೇವಿನಗರ ಕ್ರಾಸ್, ಬಿಳೇಕಹಳ್ಳಿ, ಆರ್.ವಿ ಟೀಚರ್ ಕಾಲೇಜು ಜಂಕ್ಷನ್ಗಳಲ್ಲಿ ರಸ್ತೆಯಲ್ಲಿ ಮಳೆ ನೀರು ಹರಿದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಯಿತು. ಇದರಿಂದ ವಾಹನ ದಟ್ಟಣೆ ಉಂಟಾಯಿತು.</p>.<p>ಮಳೆ ವಿವರ: ನಾಯಂಡಹಳ್ಳಿ 3.9 ಸೆಂ.ಮೀ., ಕಾಟನ್ಪೇಟೆ 3.9 ಸೆಂ.ಮೀ., ಸಂಪಂಗಿರಾಮನಗರ 3.6 ಸೆಂ.ಮೀ., ಹಂಪಿನಗರ 3.6 ಸೆಂ.ಮೀ., ಪುಲಕೇಶಿನಗರ 3.4 ಸೆಂ.ಮೀ., ಚಾಮರಾಜಪೇಟೆ 3.4 ಸೆಂ.ಮೀ., ಕೆಂಗೇರಿ 3.3 ಸೆಂ.ಮೀ., ಬಾಣಸವಾಡಿ 3.1 ಸೆಂ.ಮೀ., ರಾಜಮಹಲ್ ಗುಟ್ಟಹಳ್ಳಿ 2.7 ಸೆಂ.ಮೀ., ವಿಶ್ವೇಶ್ವರ ಪುರ 2.7 ಸೆಂ.ಮೀ., ಮನೋರಾಯನ ಪಾಳ್ಯ 2.7 ಸೆಂ.ಮೀ., ನಾಗಪುರ 2.5 ಸೆಂ.ಮೀ., ಕೊಟ್ಟಿಗೇಪಾಳ್ಯ 2.2 ಸೆಂ.ಮೀ., ಕಮ್ಮನಹಳ್ಳಿ 2.2 ಸೆಂ.ಮೀ., ಅಂಜನಾಪುರ 2.1 ಸೆಂ.ಮೀ., ರಾಜರಾಜೇಶ್ವರಿ ನಗರ 2 ಸೆಂ.ಮೀ. ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>