<p><strong>ಬೆಂಗಳೂರು:</strong> ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಅತಿವೇಗದ (ಹೈಸ್ಪೀಡ್–ಬುಲೆಟ್) ರೈಲು ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದ ಮೂರು ತಿಂಗಳ ನಂತರ ಭಾರತೀಯ ರೈಲ್ವೆಯು ಎರಡೂ ಮಾರ್ಗಗಳನ್ನು ಅಂತಿಮಗೊಳಿಸಿ ನಕ್ಷೆ ಬಿಡುಗಡೆ ಮಾಡಿದೆ. </p>.<p>ಬಜೆಟ್ನಲ್ಲಿ ಸೇರ್ಪಡೆಯಾಗದಿದ್ದರೂ ಬೆಂಗಳೂರು-ಮೈಸೂರು ಬುಲೆಟ್ ರೈಲು ಮಾರ್ಗದ ಅಂದಾಜು ನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.</p>.<p>ನಕ್ಷೆಯ ಪ್ರಕಾರ, ಬೆಂಗಳೂರು-ಚೆನ್ನೈ ಮಾರ್ಗವು (306 ಕಿಮೀ) ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಲಿದೆ. ವೈಟ್ಫೀಲ್ಡ್, ಕೋಡಿಹಳ್ಳಿ (ಹೊಸಕೋಟೆ ಬಳಿ) ಮತ್ತು ಕೋಲಾರ ಮೂಲಕ ಆಂಧ್ರ ಪ್ರದೇಶವನ್ನು ಪ್ರವೇಶಿಸಲಿದೆ. ಚಿತ್ತೂರು, ಪರಂದೂರು ಮತ್ತು ಪೂನಮಲ್ಲೆ ಮೂಲಕ ಹಾದುಹೋಗಲಿದೆ. ನಂತರ ಚೆನ್ನೈ ಸೆಂಟ್ರಲ್ನಲ್ಲಿ ಕೊನೆಗೊಳ್ಳಲಿದೆ.</p>.<p>ತಮಿಳುನಾಡು ಸರ್ಕಾರ ಚೆನ್ನೈಗೆ ಹತ್ತಿರವಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜಿಸಿರುವ ಕಾಂಚೀಪುರಂ ಜಿಲ್ಲೆಯ ಪರಂದೂರು ಈ ರೈಲು ಯೋಜನೆಯಲ್ಲಿ ಮೊದಲು ಇರಲಿಲ್ಲ. ಪ್ರಸ್ತುತ ಬಿಡುಗಡೆ ಮಾಡಲಾದ ಮಾರ್ಗದಲ್ಲಿ ಸೇರ್ಪಡೆ ಮಾಡಲಾಗಿದೆ. </p>.<p>ಬೆಂಗಳೂರು–ಹೈದರಾಬಾದ್ ಮಾರ್ಗವು ಹಿಂದೂಪುರ, ದುದ್ದೇಬಂಡಾ (ಪೆನುಕೊಂಡ ಬಳಿ), ಅನಂತಪುರ, ಗೂಟಿ, ಧೋನೆ (ದ್ರೋಣಾಚಲಂ), ಕರ್ನೂಲ್, ಮನ್ನನೂರು (ನಾಗರ್ಕರ್ನೂಲ್), ಭಾರತ್ ಸಿಟಿ (ಹೈದರಾಬಾದ್ ಬಳಿಯ ಯೋಜಿತ ಪಟ್ಟಣ) ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ (ಶಂಶಾಬಾದ್) ಮೂಲಕ ಹಾದು ಹೋಗಿ ಹೈದರಾಬಾದ್ನಲ್ಲಿ ಕೊನೆಗೊಳ್ಳಲಿದೆ.</p>.<p>ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ ಅನ್ನು ಎರಡೂ ಕಾರಿಡಾರ್ಗಳು ಸಂಪರ್ಕಿಸದೇ ನಗರದ ಹೊರಗಿನಿಂದಲೇ ಸಂಚರಿಸುತ್ತಿರುವುದು ರೈಲ್ವೆ ಪ್ರಯಾಣಿಕರಿಗೆ ನಿರಾಸೆ ತಂದಿದೆ.</p>.<p>ಮೈಸೂರು ಮಾರ್ಗ: ಬೆಂಗಳೂರು-ಮೈಸೂರು ಮಾರ್ಗವು (157.34 ಕಿ.ಮೀ.) ಮಂಡ್ಯ, ರಾಮನಗರ, ಕೆಂಗೇರಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ (ಹುಸ್ಕೂರು ಬಳಿ) ನಿಲ್ದಾಣಗಳನ್ನು ಒಳಗೊಂಡಿದೆ. ರಾಮನಗರ ನಿಲ್ದಾಣವು ಮೊದಲು ಇರಲಿಲ್ಲ. ಆಮೇಲೆ ಸೇರ್ಪಡೆ ಮಾಡಲಾಗಿದ್ದು, ಮೈಸೂರು ಮಾರ್ಗವು ಕೋಡಿಹಳ್ಳಿಯಲ್ಲಿ ಚೆನ್ನೈ ಮಾರ್ಗವನ್ನು ಸಂಧಿಸಲಿದೆ.</p>.<p>ಹೈದರಾಬಾದ್-ಪುಣೆ ಮಾರ್ಗವು ಕಲಬುರಗಿಯಲ್ಲಿ ನಿಲ್ದಾಣವನ್ನು ಹೊಂದಿರುತ್ತದೆ. ಎಲ್ಲ ಮಾರ್ಗಗಳಿಗೂ ಸಮೀಕ್ಷೆಗಳು ನಡೆಯುತ್ತಿವೆ ಎಂದು ಯೋಜನೆಗಳನ್ನು ಕಾರ್ಯಗತಗೊಳಿಸುವ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ನ (ಎನ್ಎಚ್ಎಸ್ಆರ್ಸಿಎಲ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p>ಕೋಲಾರ ಜಿಲ್ಲೆಯಲ್ಲಿ ಸ್ಥಳ ದತ್ತಾಂಶ, ಸಂಚಾರ, ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ಮೌಲ್ಯಮಾಪನ ಅಧ್ಯಯನಗಳನ್ನು ಒಳಗೊಂಡಿರುವ ಲಿಡರ್ (ಎಲ್ಐಡಿಎಆರ್) ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದ್ದಾರೆ. </p>.<p>‘ಅಗತ್ಯವಿರುವ ಜಮೀನುಗಳನ್ನು ಗುರುತಿಸಲಾಗಿದೆ. ಕೋಲಾರಕ್ಕೆ ಒಂದು ನಿಲ್ದಾಣ ಸಿಗುತ್ತದೆ. 2027-28ರ ಸುಮಾರಿಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಅತಿವೇಗದ (ಹೈಸ್ಪೀಡ್–ಬುಲೆಟ್) ರೈಲು ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದ ಮೂರು ತಿಂಗಳ ನಂತರ ಭಾರತೀಯ ರೈಲ್ವೆಯು ಎರಡೂ ಮಾರ್ಗಗಳನ್ನು ಅಂತಿಮಗೊಳಿಸಿ ನಕ್ಷೆ ಬಿಡುಗಡೆ ಮಾಡಿದೆ. </p>.<p>ಬಜೆಟ್ನಲ್ಲಿ ಸೇರ್ಪಡೆಯಾಗದಿದ್ದರೂ ಬೆಂಗಳೂರು-ಮೈಸೂರು ಬುಲೆಟ್ ರೈಲು ಮಾರ್ಗದ ಅಂದಾಜು ನಕ್ಷೆಯನ್ನೂ ಸಿದ್ಧಪಡಿಸಲಾಗಿದೆ.</p>.<p>ನಕ್ಷೆಯ ಪ್ರಕಾರ, ಬೆಂಗಳೂರು-ಚೆನ್ನೈ ಮಾರ್ಗವು (306 ಕಿಮೀ) ಬೈಯಪ್ಪನಹಳ್ಳಿಯಿಂದ ಪ್ರಾರಂಭವಾಗಲಿದೆ. ವೈಟ್ಫೀಲ್ಡ್, ಕೋಡಿಹಳ್ಳಿ (ಹೊಸಕೋಟೆ ಬಳಿ) ಮತ್ತು ಕೋಲಾರ ಮೂಲಕ ಆಂಧ್ರ ಪ್ರದೇಶವನ್ನು ಪ್ರವೇಶಿಸಲಿದೆ. ಚಿತ್ತೂರು, ಪರಂದೂರು ಮತ್ತು ಪೂನಮಲ್ಲೆ ಮೂಲಕ ಹಾದುಹೋಗಲಿದೆ. ನಂತರ ಚೆನ್ನೈ ಸೆಂಟ್ರಲ್ನಲ್ಲಿ ಕೊನೆಗೊಳ್ಳಲಿದೆ.</p>.<p>ತಮಿಳುನಾಡು ಸರ್ಕಾರ ಚೆನ್ನೈಗೆ ಹತ್ತಿರವಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜಿಸಿರುವ ಕಾಂಚೀಪುರಂ ಜಿಲ್ಲೆಯ ಪರಂದೂರು ಈ ರೈಲು ಯೋಜನೆಯಲ್ಲಿ ಮೊದಲು ಇರಲಿಲ್ಲ. ಪ್ರಸ್ತುತ ಬಿಡುಗಡೆ ಮಾಡಲಾದ ಮಾರ್ಗದಲ್ಲಿ ಸೇರ್ಪಡೆ ಮಾಡಲಾಗಿದೆ. </p>.<p>ಬೆಂಗಳೂರು–ಹೈದರಾಬಾದ್ ಮಾರ್ಗವು ಹಿಂದೂಪುರ, ದುದ್ದೇಬಂಡಾ (ಪೆನುಕೊಂಡ ಬಳಿ), ಅನಂತಪುರ, ಗೂಟಿ, ಧೋನೆ (ದ್ರೋಣಾಚಲಂ), ಕರ್ನೂಲ್, ಮನ್ನನೂರು (ನಾಗರ್ಕರ್ನೂಲ್), ಭಾರತ್ ಸಿಟಿ (ಹೈದರಾಬಾದ್ ಬಳಿಯ ಯೋಜಿತ ಪಟ್ಟಣ) ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳ (ಶಂಶಾಬಾದ್) ಮೂಲಕ ಹಾದು ಹೋಗಿ ಹೈದರಾಬಾದ್ನಲ್ಲಿ ಕೊನೆಗೊಳ್ಳಲಿದೆ.</p>.<p>ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ ಅನ್ನು ಎರಡೂ ಕಾರಿಡಾರ್ಗಳು ಸಂಪರ್ಕಿಸದೇ ನಗರದ ಹೊರಗಿನಿಂದಲೇ ಸಂಚರಿಸುತ್ತಿರುವುದು ರೈಲ್ವೆ ಪ್ರಯಾಣಿಕರಿಗೆ ನಿರಾಸೆ ತಂದಿದೆ.</p>.<p>ಮೈಸೂರು ಮಾರ್ಗ: ಬೆಂಗಳೂರು-ಮೈಸೂರು ಮಾರ್ಗವು (157.34 ಕಿ.ಮೀ.) ಮಂಡ್ಯ, ರಾಮನಗರ, ಕೆಂಗೇರಿ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ (ಹುಸ್ಕೂರು ಬಳಿ) ನಿಲ್ದಾಣಗಳನ್ನು ಒಳಗೊಂಡಿದೆ. ರಾಮನಗರ ನಿಲ್ದಾಣವು ಮೊದಲು ಇರಲಿಲ್ಲ. ಆಮೇಲೆ ಸೇರ್ಪಡೆ ಮಾಡಲಾಗಿದ್ದು, ಮೈಸೂರು ಮಾರ್ಗವು ಕೋಡಿಹಳ್ಳಿಯಲ್ಲಿ ಚೆನ್ನೈ ಮಾರ್ಗವನ್ನು ಸಂಧಿಸಲಿದೆ.</p>.<p>ಹೈದರಾಬಾದ್-ಪುಣೆ ಮಾರ್ಗವು ಕಲಬುರಗಿಯಲ್ಲಿ ನಿಲ್ದಾಣವನ್ನು ಹೊಂದಿರುತ್ತದೆ. ಎಲ್ಲ ಮಾರ್ಗಗಳಿಗೂ ಸಮೀಕ್ಷೆಗಳು ನಡೆಯುತ್ತಿವೆ ಎಂದು ಯೋಜನೆಗಳನ್ನು ಕಾರ್ಯಗತಗೊಳಿಸುವ ರಾಷ್ಟ್ರೀಯ ಹೈ ಸ್ಪೀಡ್ ರೈಲು ನಿಗಮ ಲಿಮಿಟೆಡ್ನ (ಎನ್ಎಚ್ಎಸ್ಆರ್ಸಿಎಲ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p>ಕೋಲಾರ ಜಿಲ್ಲೆಯಲ್ಲಿ ಸ್ಥಳ ದತ್ತಾಂಶ, ಸಂಚಾರ, ಪರಿಸರದ ಮೇಲೆ ಬೀರುವ ಪರಿಣಾಮದ ಬಗ್ಗೆ ಮೌಲ್ಯಮಾಪನ ಅಧ್ಯಯನಗಳನ್ನು ಒಳಗೊಂಡಿರುವ ಲಿಡರ್ (ಎಲ್ಐಡಿಎಆರ್) ಸಮೀಕ್ಷೆಗಳು ಪೂರ್ಣಗೊಂಡಿವೆ ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ತಿಳಿಸಿದ್ದಾರೆ. </p>.<p>‘ಅಗತ್ಯವಿರುವ ಜಮೀನುಗಳನ್ನು ಗುರುತಿಸಲಾಗಿದೆ. ಕೋಲಾರಕ್ಕೆ ಒಂದು ನಿಲ್ದಾಣ ಸಿಗುತ್ತದೆ. 2027-28ರ ಸುಮಾರಿಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>