<p>ರಾಜರಾಜೇಶ್ವರಿನಗರ: ‘ಕಾವೇರಿ ನೀರಿನ ಜತೆಗೆ ಚರಂಡಿ ನೀರು ಬರುತ್ತಿದೆ. ಹತ್ತು ನಿಮಿಷ ನೀರನ್ನು ಹೊರ ಚೆಲ್ಲಿ, ನಂತರ ನೀರು ಹಿಡಿಯಬೇಕು. ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಶುದ್ಧ ನೀರು ಸರಬರಾಜು ಮಾಡಬೇಕು’ ಎಂದು ಗೃಹಿಣಿ ಸುನಂದ ಆಗ್ರಹಿಸಿದರು.</p>.<p>‘ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತದೆ, ಮೇಲ್ಭಾಗದ ಮನೆಗಳಿಗೆ ನೀರು ಬರುವುದಿಲ್ಲ. ನೀರೇ ಬರುತ್ತಿಲ್ಲ, ಆದರೂ ಪ್ರತಿ ತಿಂಗಳು ಬಿಲ್ ಮಾತ್ರ ಬರುತ್ತದೆ’ ಎಂದು ದೊಡ್ಡ ಬಿದರಕಲ್ಲು ವಾರ್ಡ್ನ ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ನಿವಾಸಿಗಳು ಜಲಮಂಡಳಿ ವಿರುದ್ಗ ಆ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ಮಾರ್ಗವಾಗಿ ಹಾದು ಹೋಗುವ ರಾಜಕಾಲುವೆಯ ತಡೆಗೋಡೆ ಮತ್ತು ಸೇತುವೆ ನಿರ್ಮಾಣಕ್ಕೆ ₹7 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅವರು ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಸ್ಥಳೀಯರು ದೂರು ನೀಡಿದರು.</p>.<p>ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಜಲಮಂಡಳಿ, ಜಿಬಿಎ ಎಂಜಿನಿಯರ್ಗಳು, ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ವಾರಕ್ಕೆ ಎರಡು ದಿವಸ ಶುದ್ದ ಕಾವೇರಿ ನೀರು ಬಿಡಬೇಕು. ಕಲುಷಿತ ನೀರು ಸೇರದಂತೆ ಕ್ರಮವಹಿಸಲಾಗುವುದು’ ಎಂ ದರು.</p>.<p>ಸಹಾಯಕ ಎಂಜಿನಿಯರ್ ಚಿಕ್ಕಗೂಳಿಗೌಡ ಸಮಜಾಯಿಷಿ ನೀಡಿ, ₹9 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-4-1175708518</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜರಾಜೇಶ್ವರಿನಗರ: ‘ಕಾವೇರಿ ನೀರಿನ ಜತೆಗೆ ಚರಂಡಿ ನೀರು ಬರುತ್ತಿದೆ. ಹತ್ತು ನಿಮಿಷ ನೀರನ್ನು ಹೊರ ಚೆಲ್ಲಿ, ನಂತರ ನೀರು ಹಿಡಿಯಬೇಕು. ನೀರು ದುರ್ವಾಸನೆಯಿಂದ ಕೂಡಿರುತ್ತದೆ. ಶುದ್ಧ ನೀರು ಸರಬರಾಜು ಮಾಡಬೇಕು’ ಎಂದು ಗೃಹಿಣಿ ಸುನಂದ ಆಗ್ರಹಿಸಿದರು.</p>.<p>‘ವಾರಕ್ಕೊಮ್ಮೆ ಕಾವೇರಿ ನೀರು ಬರುತ್ತದೆ, ಮೇಲ್ಭಾಗದ ಮನೆಗಳಿಗೆ ನೀರು ಬರುವುದಿಲ್ಲ. ನೀರೇ ಬರುತ್ತಿಲ್ಲ, ಆದರೂ ಪ್ರತಿ ತಿಂಗಳು ಬಿಲ್ ಮಾತ್ರ ಬರುತ್ತದೆ’ ಎಂದು ದೊಡ್ಡ ಬಿದರಕಲ್ಲು ವಾರ್ಡ್ನ ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ನಿವಾಸಿಗಳು ಜಲಮಂಡಳಿ ವಿರುದ್ಗ ಆ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುನೇಶ್ವರ ಬಡಾವಣೆ-ಮಾರಣ್ಣ ಬಡಾವಣೆ ಮಾರ್ಗವಾಗಿ ಹಾದು ಹೋಗುವ ರಾಜಕಾಲುವೆಯ ತಡೆಗೋಡೆ ಮತ್ತು ಸೇತುವೆ ನಿರ್ಮಾಣಕ್ಕೆ ₹7 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಎಸ್.ಟಿ. ಸೋಮಶೇಖರ್ ಅವರು ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಸ್ಥಳೀಯರು ದೂರು ನೀಡಿದರು.</p>.<p>ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಜಲಮಂಡಳಿ, ಜಿಬಿಎ ಎಂಜಿನಿಯರ್ಗಳು, ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ವಾರಕ್ಕೆ ಎರಡು ದಿವಸ ಶುದ್ದ ಕಾವೇರಿ ನೀರು ಬಿಡಬೇಕು. ಕಲುಷಿತ ನೀರು ಸೇರದಂತೆ ಕ್ರಮವಹಿಸಲಾಗುವುದು’ ಎಂ ದರು.</p>.<p>ಸಹಾಯಕ ಎಂಜಿನಿಯರ್ ಚಿಕ್ಕಗೂಳಿಗೌಡ ಸಮಜಾಯಿಷಿ ನೀಡಿ, ₹9 ಕೋಟಿ ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260527-4-1175708518</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>