<p><strong>ಬೆಂಗಳೂರು</strong>: ಪೂಜೇನಹಳ್ಳಿಯ ಸಮಗ್ರ ಶೀತಲ ಸರಪಳಿ ಘಟಕವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು (ಕೆಪೆಕ್) ಮಂಗಳವಾರ ಸ್ವಾಧೀನಕ್ಕೆ ಪಡೆದುಕೊಂಡಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಘಟಕವನ್ನು ಕೆಪೆಕ್ ಸ್ಥಾಪಿಸಿತ್ತು. ಅದನ್ನು 2024ರ ಜೂನ್ 6ರಂದು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಗೆ ಹಸ್ತಾಂತರ ಮಾಡಿತ್ತು.</p>.<p>ಬಾಡಿಗೆ ಪಾವತಿಸದಿರುವುದು ಮತ್ತು ಒಪ್ಪಂದ ಉಲ್ಲಂಘಿಸಿ ಘಟಕವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದ ಕಾರಣ ಘಟಕವನ್ನು ಹಿಂತಿರುಗಿಸಲು 2025ರ ಜುಲೈ 28ರಂದು ಒಪ್ಪಂದ ರದ್ದುಗೊಳಿಸಿ ಕೆಪೆಕ್ ನೋಟಿಸ್ ನೀಡಿತ್ತು.</p>.<p>ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಆಕ್ರಮಣದಾರರನ್ನು ಒಕ್ಕಲೆಬ್ಬಿಸುವ) ಕಾಯ್ದೆ, 1974ರ ಅಡಿಯಲ್ಲಿ ಸ್ವಾಧೀನ ಅಧಿಕಾರಿಯಾಗಿ ಸರ್ಕಾರವು ಸಿ.ಎನ್. ಶಿವಪ್ರಕಾಶ್ ಅವರನ್ನು ನೇಮಿಸಿತ್ತು. ಅವರು ತೆರವು ಮಾಡಲು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ಗೆ 45 ದಿನಗಳ ಅವಕಾಶ ನೀಡಿ ಕಳೆದ ಏ.10ರಂದು ನೋಟಿಸ್ ನೀಡಿದ್ದರು.</p>.<p>‘ನಿಗದಿತ ಅವಧಿಯಲ್ಲಿ ಘಟಕವನ್ನು ಕೆಪೆಕ್ಗೆ ಹಸ್ತಾಂತರಿಸದ ಕಾರಣ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಸ್ವಾಧೀನ ಅಧಿಕಾರಿಯೂ ಆದ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-4-2012023897</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೂಜೇನಹಳ್ಳಿಯ ಸಮಗ್ರ ಶೀತಲ ಸರಪಳಿ ಘಟಕವನ್ನು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು (ಕೆಪೆಕ್) ಮಂಗಳವಾರ ಸ್ವಾಧೀನಕ್ಕೆ ಪಡೆದುಕೊಂಡಿದೆ.</p>.<p>ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪೂಜೇನಹಳ್ಳಿ ತೋಟಗಾರಿಕಾ ಕ್ಷೇತ್ರದಲ್ಲಿ ಘಟಕವನ್ನು ಕೆಪೆಕ್ ಸ್ಥಾಪಿಸಿತ್ತು. ಅದನ್ನು 2024ರ ಜೂನ್ 6ರಂದು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ ಸಂಸ್ಥೆಗೆ ಹಸ್ತಾಂತರ ಮಾಡಿತ್ತು.</p>.<p>ಬಾಡಿಗೆ ಪಾವತಿಸದಿರುವುದು ಮತ್ತು ಒಪ್ಪಂದ ಉಲ್ಲಂಘಿಸಿ ಘಟಕವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದ ಕಾರಣ ಘಟಕವನ್ನು ಹಿಂತಿರುಗಿಸಲು 2025ರ ಜುಲೈ 28ರಂದು ಒಪ್ಪಂದ ರದ್ದುಗೊಳಿಸಿ ಕೆಪೆಕ್ ನೋಟಿಸ್ ನೀಡಿತ್ತು.</p>.<p>ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಆಕ್ರಮಣದಾರರನ್ನು ಒಕ್ಕಲೆಬ್ಬಿಸುವ) ಕಾಯ್ದೆ, 1974ರ ಅಡಿಯಲ್ಲಿ ಸ್ವಾಧೀನ ಅಧಿಕಾರಿಯಾಗಿ ಸರ್ಕಾರವು ಸಿ.ಎನ್. ಶಿವಪ್ರಕಾಶ್ ಅವರನ್ನು ನೇಮಿಸಿತ್ತು. ಅವರು ತೆರವು ಮಾಡಲು ಫಿಜಾ ಗ್ಲೋಬಲ್ ಆಗ್ರೋವೆಂಚರ್ಸ್ಗೆ 45 ದಿನಗಳ ಅವಕಾಶ ನೀಡಿ ಕಳೆದ ಏ.10ರಂದು ನೋಟಿಸ್ ನೀಡಿದ್ದರು.</p>.<p>‘ನಿಗದಿತ ಅವಧಿಯಲ್ಲಿ ಘಟಕವನ್ನು ಕೆಪೆಕ್ಗೆ ಹಸ್ತಾಂತರಿಸದ ಕಾರಣ ಸ್ವಾಧೀನಪಡಿಸಿಕೊಳ್ಳಲಾಗಿದೆ’ ಎಂದು ಸ್ವಾಧೀನ ಅಧಿಕಾರಿಯೂ ಆದ, ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-4-2012023897</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>