<p><strong>ಬೆಂಗಳೂರು:</strong> ಕೆ.ಆರ್.ಪುರ ಬಳಿಯ ಲೋರಿ ಕೆಳ ಸೇತುವೆಯ ಚಪ್ಪಡಿ (ಸ್ಲ್ಯಾಬ್) ಬದಲಿಸುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂನ್ 4ರಿಂದ 9ರವರೆಗೆ ಕೆಳ ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.</p>.<p>ಕೃಷ್ಣರಾಜಪುರ, ರಾಮಮೂರ್ತಿ ನಗರ, ಐಟಿಐ ಕಾಲೊನಿ ಕಡೆಗೆ ಸಾಗುವ ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಈ ಅವಧಿಯಲ್ಲಿ ಐಟಿಐ ಕಾಲೊನಿ, ರಾಮಮೂರ್ತಿ ನಗರ ಮತ್ತು ಕೃಷ್ಣರಾಜಪುರ ತಲುಪಲು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಲು ರಸ್ತೆ ಬಳಕೆದಾರರಿಗೆ ಸೂಚಿಸಲಾಗಿದೆ.</p>.<p>ಐಟಿಪಿಎಲ್, ವೈಟ್ಫೀಲ್ಡ್ ಕಡೆಗೆ ಹೋಗುವ ರಸ್ತೆಯ ಸಂಚಾರವೂ ಸ್ಥಗಿತಗೊಳ್ಳುವುದರಿಂದ ಆ ಕಡೆಗೆ ಸಾಗುವವರು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಬಹುದು. ಕೆ.ಆರ್. ಪುರ–ಐಟಿಪಿಎಲ್ ಮುಖ್ಯ ರಸ್ತೆಯನ್ನು ಜೂನ್ 7 ಮತ್ತು 8ರಂದು ಬಂದ್ ಮಾಡಲಾಗುವುದು. ರಸ್ತೆ ಕೆಳ ಸೇತುವೆಯ ಬಳಿ ಒದಗಿಸಲಾದ ಬದಲಿ ಮಾರ್ಗವನ್ನು ಬಳಸಿ ಸಂಚರಿಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-4-674800583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೆ.ಆರ್.ಪುರ ಬಳಿಯ ಲೋರಿ ಕೆಳ ಸೇತುವೆಯ ಚಪ್ಪಡಿ (ಸ್ಲ್ಯಾಬ್) ಬದಲಿಸುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂನ್ 4ರಿಂದ 9ರವರೆಗೆ ಕೆಳ ಸೇತುವೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.</p>.<p>ಕೃಷ್ಣರಾಜಪುರ, ರಾಮಮೂರ್ತಿ ನಗರ, ಐಟಿಐ ಕಾಲೊನಿ ಕಡೆಗೆ ಸಾಗುವ ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಲಿದೆ. ಈ ಅವಧಿಯಲ್ಲಿ ಐಟಿಐ ಕಾಲೊನಿ, ರಾಮಮೂರ್ತಿ ನಗರ ಮತ್ತು ಕೃಷ್ಣರಾಜಪುರ ತಲುಪಲು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಲು ರಸ್ತೆ ಬಳಕೆದಾರರಿಗೆ ಸೂಚಿಸಲಾಗಿದೆ.</p>.<p>ಐಟಿಪಿಎಲ್, ವೈಟ್ಫೀಲ್ಡ್ ಕಡೆಗೆ ಹೋಗುವ ರಸ್ತೆಯ ಸಂಚಾರವೂ ಸ್ಥಗಿತಗೊಳ್ಳುವುದರಿಂದ ಆ ಕಡೆಗೆ ಸಾಗುವವರು ಕೆ.ಆರ್. ಪುರ ಕೇಬಲ್-ಸ್ಟೇಯ್ಡ್ ಸೇತುವೆಯನ್ನು ಬಳಸಬಹುದು. ಕೆ.ಆರ್. ಪುರ–ಐಟಿಪಿಎಲ್ ಮುಖ್ಯ ರಸ್ತೆಯನ್ನು ಜೂನ್ 7 ಮತ್ತು 8ರಂದು ಬಂದ್ ಮಾಡಲಾಗುವುದು. ರಸ್ತೆ ಕೆಳ ಸೇತುವೆಯ ಬಳಿ ಒದಗಿಸಲಾದ ಬದಲಿ ಮಾರ್ಗವನ್ನು ಬಳಸಿ ಸಂಚರಿಸಬೇಕು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-4-674800583</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>