<p><strong>ಬೆಂಗಳೂರು:</strong> ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ‘ಸಂಧಾನ ಸೂತ್ರದ ಪರಿಹಾರ’ದ ಬದಲು ‘ಸಂವಿಧಾನ ಸೂತ್ರದ ಪರಿಹಾರ’ ನೀಡುವಂತೆ ಅಭಿಯಾನ ಆರಂಭಿಸಲಾಗಿದೆ. ಪಿ.ಆರ್.ಆರ್. ರೈತ ಹಾಗೂ ನಿವೇಶನದಾರರ ಸಂಘದ ನೇತೃತ್ವದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ, ಭೂಮಿ ಕಳೆದುಕೊಳ್ಳುತ್ತಿರುವ ರೈತರ ಜತೆ ಸಭೆ ನಡೆಸಿ, ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.</p>.<p>ಬಿಬಿಸಿ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಗದಿಪಡಿಸಿರುವ ಪರಿಹಾರ ದರಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 74 ಕಿ.ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ನಿರ್ಮಿಸಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ 2,580 ಎಕರೆ ಜಮೀನನ್ನು ಭೂಸ್ವಾಧೀನ ಮಾಡಲಾಗುತ್ತಿದೆ. ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ಪ್ರಾಧಿಕಾರವು ನೀಡಿರುವ ಐದು ಪರಿಹಾರ ಆಯ್ಕೆ ರೈತ ವಿರೋಧಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಶೇಕಡ 90ರಷ್ಟು ರೈತರು ಬಿಡಿಎ ನಿಗದಿ ಪಡಿಸಿರುವ ಪರಿಹಾರ ಒಪ್ಪಿಕೊಂಡಿಲ್ಲ. ರೈತರನ್ನು ಬೆದರಿಸಿ ಸಂಧಾನ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಉದ್ಯಮಿಗಳು, ರಾಜಕಾರಣಿಗಳು ಮತ್ತು ಜಮೀನು ನೀಡಿ ಪರಿಹಾರ ಪಡೆದುಕೊಂಡಿದ್ದಾರೆ. ಒಂದು, ಎರಡು ಗುಂಟೆ ಜಮೀನು ಹೊಂದಿರುವವರು ಮಾತ್ರ ಒಪ್ಪಿದ್ದಾರೆ’ ಎಂದು ಪಿ.ಆರ್.ಆರ್. ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ಮಾಹಿತಿ ನೀಡಿದರು.</p>.<p>‘ಸಂವಿಧಾನ ಸೂತ್ರದ ಪರಿಹಾರ’ ಒದಗಿಸುವಂತೆ ಅಭಿಯಾನ ಆರಂಭಿಸಲಾಗಿದೆ. ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನವರಿಕೆ ಮಾಡಲಾಗುತ್ತಿದೆ. ಡಿಪಿಆರ್ ಸಹ ಸಿದ್ಧಗೊಂಡಿಲ್ಲ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೊರೆಹೋಗಲಾಗುವುದು. ಅದರ ವೆಚ್ಚಕ್ಕಾಗಿ ‘ಕ್ರೌಡ್ ಫಂಡಿಂಗ್’ ಮೂಲಕ ಹಣ ಸಂಗ್ರಹಿಸಲಾಗುವುದು’ ಎಂದು ವಿವರಿಸಿದರು.</p>.<p>‘ಕೆಎಐಡಿಬಿ ಮತ್ತು ಕೆಎಚ್ಬಿ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡಿವೆ. ಆದರೆ, ಬಿಡಿಎ ಇದಕ್ಕೆ ಮುಂದಾಗಿಲ್ಲ. 20 ಸಾವಿರ ಕುಟುಂಬಗಳ ಜೀವನ ಪ್ರಶ್ನೆ. 1894ರಲ್ಲಿ ಬ್ರಿಟಿಷರು ರೂಪಿಸಿದ ಕಾನೂನಿನಡಿ ನೀಡುವ ಪರಿಹಾರ ಯಾರಿಗೆ ಬೇಕು? ಉದಾಹರಣೆಗೆ ಬೆಂಗಳೂರು ಪೂರ್ವ ತಾಲ್ಲೂಕಿನ ಕೊಡತಿ ಗ್ರಾಮದಲ್ಲಿ ಕೆಐಎಡಿಬಿ ಎಕರೆಗೆ ₹40 ಕೋಟಿ ಪರಿಹಾರ ನೀಡಿದೆ. ಆದರೆ, ಬಿಡಿಎ ಎಕರೆಗೆ ₹5 ಕೋಟಿ ಪರಿಹಾರ ನಿಗದಿ ಮಾಡಿದೆ. ಇದು ಯಾವ ನ್ಯಾಯ’ ಎಂದು ರೈತ ಕೃಷ್ಣ ಮುಲ್ಲೂರು ಪ್ರಶ್ನಿಸಿದರು. ‘ಜಮೀನು ನೀಡುವವರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. 1976ರ ಬಿಡಿಎ ಕಾಯ್ದೆಯ ಸೆಕ್ಷನ್ 27ರ ಪ್ರಕಾರ, ಯಾವುದೇ ಯೋಜನೆ ಕಾರ್ಯಗತಗೊಳ್ಳದಿದ್ದರೆ ಅದು ಸ್ವಯಂ ರದ್ದಾಗುತ್ತದೆ. ಈ ಯೋಜನೆ 2005–06ರಲ್ಲಿ ಘೋಷಣೆಯಾದರೂ ಜಾರಿಗೆ ಬಂದಿಲ್ಲ’ ಎಂದು ವರ್ತೂರಿನ ಜಗದೀಶ್ ರೆಡ್ಡಿ ತಿಳಿಸಿದರು.</p>.<p>‘ಈ ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದರೂ ಬಿಡಿಎ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವ ಮೂಲಕ ಬಲವಂತವಾಗಿ ಸಂಧಾನ ಸೂತ್ರ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಭೂಮಿಯ ನೈಜ ಮೌಲ್ಯವನ್ನು ಕಡಿಮೆ ಮಾಡಲಾಗಿದೆ’ ಎಂದರು.</p>.<p>‘ವರ್ತೂರು ಹೋಬಳಿಯ ಸೋರಹುಣಸೆ ಗ್ರಾಮದಲ್ಲಿ 3 ಎಕರೆ 29 ಗುಂಟೆ ಜಮೀನಿಗೆ ₹3.70 ಕೋಟಿ ಪರಿಹಾರವನ್ನು ಬಿಡಿಎ ನಿಗದಿ ಮಾಡಲಾಗಿದೆ. ಇದೇ ಗ್ರಾಮದಲ್ಲಿ ಖಾಸಗಿಯವರು 1 ಗುಂಟೆ ಜಾಗವನ್ನು ₹1.4 ಕೋಟಿಗೆ ಖರೀದಿಸಿದ್ದಾರೆ. ಹಲವು ವರ್ಷಗಳಿಂದ ಜಮೀನು ಮಾರಾಟ ಮಾಡಲಾಗದೆ, ಅಭಿವೃದ್ಧಿಪಡಿಸಲು ಆಗದ ಸ್ಥಿತಿಯಲ್ಲಿದ್ದೇವೆ’ ಎಂದು ರೈತ ಬೈಯಣ್ಣ ಬೇಸರ ವ್ಯಕ್ತಪಡಿಸಿದರು.</p>.<h2>ಪರಿಹಾರ ಇತ್ಯರ್ಥಪಡಿಸದೆ ಕಾಮಗಾರಿ ಬೇಡ</h2><p>ಬಿಬಿಸಿ (ಪಿಆರ್ಆರ್–1) ಯೋಜನೆಯ ಮೊದಲ ಹಂತ ಅನುಷ್ಠಾನಕ್ಕೆ ತರುವ ಸಂಬಂಧ ಬಿಡಿಎ ಆಹ್ವಾನಿಸಿರುವ ಟೆಂಡರ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p><p>‘18 ವರ್ಷದ ಹಿಂದೆ ಭೂಸ್ವಾಧೀನ ಮಾಡಿಕೊಂಡಿರುವ ಪಿಆರ್ ಆರ್ (ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್–ಬಿಬಿಸಿ) ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಕಾನೂನು ಪಾಲಿಸಿಲ್ಲ. ಹಲವು ಬಾರಿ ಯೋಜನೆ ವಿನ್ಯಾಸ, ಮಾರ್ಗ ಹಾಗೂ ಇತರೆ ಅಂಶಗಳನ್ನು ಬದಲಿಸಲಾಗಿದೆ. ರೈತರಿಗೆ ಪರಿಹಾರ ಪ್ರಕರಣ ಇತ್ಯರ್ಥ ಪಡಿಸದೆ ಕಾಮಗಾರಿ ಜಾರಿಗೆ ಆತುರ ತೋರಿಸುತ್ತಿರುವುದು ಏಕೆ’ ಎಂದು ಬಿಡಿಎ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.</p><p>‘ಶೇಕಡ 70–80 ಜಮೀನು ಸ್ವಾಧೀನ ಪಡೆದ ಬಳಿಕವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದರು. ಆದರೆ, ಈ ಹಿಂದೆ ರೈತರಿಗೆ ಪರಿಹಾರ ವಿತರಿಸಲು ಬಲವಂತವಾಗಿ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಭೂ ಪರಿಹಾರ ಪ್ರಕರಣಗಳನ್ನು ಇತ್ಯರ್ಥ ಪಡಿಸುವವರೆಗೂ ಕಾಮಗಾರಿ ಆರಂಭಿಸಬಾರದು ಎಂದು ಬಿಡಿಎ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.</p><p>ಪಿಆರ್ಆರ್–1ಕ್ಕೆ ಕರೆದಿರುವ ಟೆಂಡರ್ ಕಾನೂನು ಬಾಹಿರವಾಗಿದೆ. ಪರಿಷ್ಕೃತ ಡಿಪಿಆರ್ ಇಲ್ಲ, ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಅಸ್ತಿತ್ವವೇ ಇಲ್ಲದ ಯೋಜನೆಗೆ ಟೆಂಡರ್ ಕರೆದಿರುವುದು ಅಧಿಕಾರ ದುರುಪಯೋಗ, ಸಾರ್ವಜನಿಕ ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ‘ಸಂಧಾನ ಸೂತ್ರದ ಪರಿಹಾರ’ದ ಬದಲು ‘ಸಂವಿಧಾನ ಸೂತ್ರದ ಪರಿಹಾರ’ ನೀಡುವಂತೆ ಅಭಿಯಾನ ಆರಂಭಿಸಲಾಗಿದೆ. ಪಿ.ಆರ್.ಆರ್. ರೈತ ಹಾಗೂ ನಿವೇಶನದಾರರ ಸಂಘದ ನೇತೃತ್ವದಲ್ಲಿ ಗ್ರಾಮಗಳಿಗೆ ಭೇಟಿ ನೀಡಿ, ಭೂಮಿ ಕಳೆದುಕೊಳ್ಳುತ್ತಿರುವ ರೈತರ ಜತೆ ಸಭೆ ನಡೆಸಿ, ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.</p>.<p>ಬಿಬಿಸಿ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಗದಿಪಡಿಸಿರುವ ಪರಿಹಾರ ದರಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು, ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 74 ಕಿ.ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್ಆರ್) ನಿರ್ಮಿಸಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ 2,580 ಎಕರೆ ಜಮೀನನ್ನು ಭೂಸ್ವಾಧೀನ ಮಾಡಲಾಗುತ್ತಿದೆ. ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ಪ್ರಾಧಿಕಾರವು ನೀಡಿರುವ ಐದು ಪರಿಹಾರ ಆಯ್ಕೆ ರೈತ ವಿರೋಧಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಶೇಕಡ 90ರಷ್ಟು ರೈತರು ಬಿಡಿಎ ನಿಗದಿ ಪಡಿಸಿರುವ ಪರಿಹಾರ ಒಪ್ಪಿಕೊಂಡಿಲ್ಲ. ರೈತರನ್ನು ಬೆದರಿಸಿ ಸಂಧಾನ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತಿದೆ. ಉದ್ಯಮಿಗಳು, ರಾಜಕಾರಣಿಗಳು ಮತ್ತು ಜಮೀನು ನೀಡಿ ಪರಿಹಾರ ಪಡೆದುಕೊಂಡಿದ್ದಾರೆ. ಒಂದು, ಎರಡು ಗುಂಟೆ ಜಮೀನು ಹೊಂದಿರುವವರು ಮಾತ್ರ ಒಪ್ಪಿದ್ದಾರೆ’ ಎಂದು ಪಿ.ಆರ್.ಆರ್. ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ಮಾಹಿತಿ ನೀಡಿದರು.</p>.<p>‘ಸಂವಿಧಾನ ಸೂತ್ರದ ಪರಿಹಾರ’ ಒದಗಿಸುವಂತೆ ಅಭಿಯಾನ ಆರಂಭಿಸಲಾಗಿದೆ. ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನವರಿಕೆ ಮಾಡಲಾಗುತ್ತಿದೆ. ಡಿಪಿಆರ್ ಸಹ ಸಿದ್ಧಗೊಂಡಿಲ್ಲ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೊರೆಹೋಗಲಾಗುವುದು. ಅದರ ವೆಚ್ಚಕ್ಕಾಗಿ ‘ಕ್ರೌಡ್ ಫಂಡಿಂಗ್’ ಮೂಲಕ ಹಣ ಸಂಗ್ರಹಿಸಲಾಗುವುದು’ ಎಂದು ವಿವರಿಸಿದರು.</p>.<p>‘ಕೆಎಐಡಿಬಿ ಮತ್ತು ಕೆಎಚ್ಬಿ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡಿವೆ. ಆದರೆ, ಬಿಡಿಎ ಇದಕ್ಕೆ ಮುಂದಾಗಿಲ್ಲ. 20 ಸಾವಿರ ಕುಟುಂಬಗಳ ಜೀವನ ಪ್ರಶ್ನೆ. 1894ರಲ್ಲಿ ಬ್ರಿಟಿಷರು ರೂಪಿಸಿದ ಕಾನೂನಿನಡಿ ನೀಡುವ ಪರಿಹಾರ ಯಾರಿಗೆ ಬೇಕು? ಉದಾಹರಣೆಗೆ ಬೆಂಗಳೂರು ಪೂರ್ವ ತಾಲ್ಲೂಕಿನ ಕೊಡತಿ ಗ್ರಾಮದಲ್ಲಿ ಕೆಐಎಡಿಬಿ ಎಕರೆಗೆ ₹40 ಕೋಟಿ ಪರಿಹಾರ ನೀಡಿದೆ. ಆದರೆ, ಬಿಡಿಎ ಎಕರೆಗೆ ₹5 ಕೋಟಿ ಪರಿಹಾರ ನಿಗದಿ ಮಾಡಿದೆ. ಇದು ಯಾವ ನ್ಯಾಯ’ ಎಂದು ರೈತ ಕೃಷ್ಣ ಮುಲ್ಲೂರು ಪ್ರಶ್ನಿಸಿದರು. ‘ಜಮೀನು ನೀಡುವವರಿಗೆ ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನಿಗದಿ ಮಾಡಬೇಕು. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. 1976ರ ಬಿಡಿಎ ಕಾಯ್ದೆಯ ಸೆಕ್ಷನ್ 27ರ ಪ್ರಕಾರ, ಯಾವುದೇ ಯೋಜನೆ ಕಾರ್ಯಗತಗೊಳ್ಳದಿದ್ದರೆ ಅದು ಸ್ವಯಂ ರದ್ದಾಗುತ್ತದೆ. ಈ ಯೋಜನೆ 2005–06ರಲ್ಲಿ ಘೋಷಣೆಯಾದರೂ ಜಾರಿಗೆ ಬಂದಿಲ್ಲ’ ಎಂದು ವರ್ತೂರಿನ ಜಗದೀಶ್ ರೆಡ್ಡಿ ತಿಳಿಸಿದರು.</p>.<p>‘ಈ ಯೋಜನೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದರೂ ಬಿಡಿಎ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡುವ ಮೂಲಕ ಬಲವಂತವಾಗಿ ಸಂಧಾನ ಸೂತ್ರ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಭೂಮಿಯ ನೈಜ ಮೌಲ್ಯವನ್ನು ಕಡಿಮೆ ಮಾಡಲಾಗಿದೆ’ ಎಂದರು.</p>.<p>‘ವರ್ತೂರು ಹೋಬಳಿಯ ಸೋರಹುಣಸೆ ಗ್ರಾಮದಲ್ಲಿ 3 ಎಕರೆ 29 ಗುಂಟೆ ಜಮೀನಿಗೆ ₹3.70 ಕೋಟಿ ಪರಿಹಾರವನ್ನು ಬಿಡಿಎ ನಿಗದಿ ಮಾಡಲಾಗಿದೆ. ಇದೇ ಗ್ರಾಮದಲ್ಲಿ ಖಾಸಗಿಯವರು 1 ಗುಂಟೆ ಜಾಗವನ್ನು ₹1.4 ಕೋಟಿಗೆ ಖರೀದಿಸಿದ್ದಾರೆ. ಹಲವು ವರ್ಷಗಳಿಂದ ಜಮೀನು ಮಾರಾಟ ಮಾಡಲಾಗದೆ, ಅಭಿವೃದ್ಧಿಪಡಿಸಲು ಆಗದ ಸ್ಥಿತಿಯಲ್ಲಿದ್ದೇವೆ’ ಎಂದು ರೈತ ಬೈಯಣ್ಣ ಬೇಸರ ವ್ಯಕ್ತಪಡಿಸಿದರು.</p>.<h2>ಪರಿಹಾರ ಇತ್ಯರ್ಥಪಡಿಸದೆ ಕಾಮಗಾರಿ ಬೇಡ</h2><p>ಬಿಬಿಸಿ (ಪಿಆರ್ಆರ್–1) ಯೋಜನೆಯ ಮೊದಲ ಹಂತ ಅನುಷ್ಠಾನಕ್ಕೆ ತರುವ ಸಂಬಂಧ ಬಿಡಿಎ ಆಹ್ವಾನಿಸಿರುವ ಟೆಂಡರ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p><p>‘18 ವರ್ಷದ ಹಿಂದೆ ಭೂಸ್ವಾಧೀನ ಮಾಡಿಕೊಂಡಿರುವ ಪಿಆರ್ ಆರ್ (ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್–ಬಿಬಿಸಿ) ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಕಾನೂನು ಪಾಲಿಸಿಲ್ಲ. ಹಲವು ಬಾರಿ ಯೋಜನೆ ವಿನ್ಯಾಸ, ಮಾರ್ಗ ಹಾಗೂ ಇತರೆ ಅಂಶಗಳನ್ನು ಬದಲಿಸಲಾಗಿದೆ. ರೈತರಿಗೆ ಪರಿಹಾರ ಪ್ರಕರಣ ಇತ್ಯರ್ಥ ಪಡಿಸದೆ ಕಾಮಗಾರಿ ಜಾರಿಗೆ ಆತುರ ತೋರಿಸುತ್ತಿರುವುದು ಏಕೆ’ ಎಂದು ಬಿಡಿಎ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.</p><p>‘ಶೇಕಡ 70–80 ಜಮೀನು ಸ್ವಾಧೀನ ಪಡೆದ ಬಳಿಕವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದರು. ಆದರೆ, ಈ ಹಿಂದೆ ರೈತರಿಗೆ ಪರಿಹಾರ ವಿತರಿಸಲು ಬಲವಂತವಾಗಿ ಒಪ್ಪಿಗೆ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಭೂ ಪರಿಹಾರ ಪ್ರಕರಣಗಳನ್ನು ಇತ್ಯರ್ಥ ಪಡಿಸುವವರೆಗೂ ಕಾಮಗಾರಿ ಆರಂಭಿಸಬಾರದು ಎಂದು ಬಿಡಿಎ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.</p><p>ಪಿಆರ್ಆರ್–1ಕ್ಕೆ ಕರೆದಿರುವ ಟೆಂಡರ್ ಕಾನೂನು ಬಾಹಿರವಾಗಿದೆ. ಪರಿಷ್ಕೃತ ಡಿಪಿಆರ್ ಇಲ್ಲ, ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಅಸ್ತಿತ್ವವೇ ಇಲ್ಲದ ಯೋಜನೆಗೆ ಟೆಂಡರ್ ಕರೆದಿರುವುದು ಅಧಿಕಾರ ದುರುಪಯೋಗ, ಸಾರ್ವಜನಿಕ ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>