<p><strong>ಬೆಂಗಳೂರು:</strong> ಉತ್ತರ, ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆಗಳು ತಮ್ಮ ಮೊದಲ ‘ಬೃಹತ್’ ಬಜೆಟ್ಗಳಲ್ಲಿ ಹತ್ತಾರು ನಿರೀಕ್ಷೆಗಳೊಂದಿಗೆ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ‘ಗ್ರೇಟರ್’ ಆಶಯವನ್ನು ವ್ಯಕ್ತಪಡಿಸಿವೆ. ಆದರೆ, ಬಹುತೇಕ ನಿರೀಕ್ಷೆಗಳು ಕೈಗೆಟುಕದ ಗಗನ ಕುಸುಮವಾಗಿವೆ.</p>.<p>ಆಸ್ತಿಗೆ ತೆರಿಗೆ ಸಂಗ್ರಹದಲ್ಲಿ ಐದು ತಿಂಗಳಲ್ಲೇ ಯಶಸ್ಸು ಕಾಣದ ಪಾಲಿಕೆಗಳು, ಹಿಂದಿನ ವರ್ಷಕ್ಕಿಂತ ದುಪ್ಪಟ್ಟು ಸಂಗ್ರಹಿಸುವ ಕನಸನ್ನು ಕಂಡಿವೆ. ತೆರಿಗೆ ಪಾವತಿಸದ ಆಸ್ತಿಗಳನ್ನು ಹರಾಜು ಹಾಕುವಲ್ಲಿ ವಿಫಲವಾಗಿದ್ದು, ಅದನ್ನು ಪಾಲಿಕೆಗಳೇ ಮಾರ್ಗಸೂಚಿ ದರದಲ್ಲಿ ಖರೀದಿಸುವ ಯೋಜನೆ ಇದೆ. ಆದರೆ, ಸುಸ್ತಿದಾರರ ಬಾಕಿ ಹೊರತಾದ ನೂರಾರು ಕೋಟಿ ಹಣವನ್ನು ಆಸ್ತಿ ಮಾಲೀಕರಿಗೆ ನೀಡುವ ಶಕ್ತಿಯನ್ನು ಪಾಲಿಕೆಗಳು ಹೊಂದಿಲ್ಲ ಎಂಬುದು ಅವುಗಳ ‘ಬ್ಯಾಲೆನ್ಸ್ ಶೀಟ್’ನಿಂದಲೇ ಬಹಿರಂಗವಾಗಿದೆ. </p>.<p>ಅನುಷ್ಠಾನವಾಗದ ಪ್ರೀಮಿಯಂ ಎಫ್ಎಎಆರ್ ಮೇಲೆ ಅತಿಹೆಚ್ಚು ಅವಲಂಬಿತವಾಗಿ ನೂರಾರು ಕೋಟಿಗಳನ್ನು ಸಂಗ್ರಹಿಸುವ ಗುರಿಯನ್ನು ಪಾಲಿಕೆಗಳು ಹೊಂದಿವೆ. ರಿಯಲ್ ಎಸ್ಟೇಟ್ ಡೆವಲಪರ್ಗಳ ಆಕ್ಷೇಪಣೆಯಿಂದ ಪ್ರೀಮಿಯಂ ಎಫ್ಎಆರ್ ಅನುಷ್ಠಾನವಾಗಲು ಕಾನೂನು ತೊಡಕಿದೆ. ಅದು ಪರಿಹಾರವಾಗಲು ಸಾಕಷ್ಟು ಸಮಯ ಬೇಕು. ಇನ್ನು ಅದು ಅನುಷ್ಠಾನವಾದರೂ ಅದರ ಖರೀದಿ, ಮಾರಾಟ ಹಾಗೂ ಪಾಲಿಕೆಗಳಿಗೆ ಬರುವ ಶುಲ್ಕಕ್ಕೆ ದೀರ್ಘ ಸಮಯವೇ ಬೇಕು. ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಯೋಜನೆಯಲ್ಲಿ ಹಲವು ಅಕ್ರಮಗಳಾಗಿವೆ ಎಂಬುದನ್ನು ಉಪ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದು, ಅದರ ನಿವಾರಣೆ ಸಾಧ್ಯವಾಗಿಲ್ಲ. ಇನ್ನು ಪ್ರೀಮಿಯಂ ಎಫ್ಎಆರ್ನಲ್ಲೂ ಇಂತಹ ಅಡೆತಡೆಗಳು ಇರುವುದರಿಂದ, ಅದನ್ನೇ ನೆಚ್ಚಿಕೊಂಡಿರುವ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗುವುದಿಲ್ಲ.</p>.<p>ಜಾಹೀರಾತು ಶುಲ್ಕ, ವಾಹನ ನಿಲುಗಡೆ ಶುಲ್ಕ, ಉದ್ದಿಮೆ ಪರವಾನಗಿಯಿಂದ ಬರುವ ವರಮಾನವನ್ನೂ ನೆಚ್ಚಿಕೊಂಡು ಯೋಜನೆಗಳನ್ನು ರೂಪಿಸಲಾಗಿದೆ. ಸ್ವಂತ ಬಲದಿಂದ ಸಂಪನ್ಮೂಲ ಕ್ರೋಡೀಕರಿಸುವ ಕಸರತ್ತು ನಡೆಸಿರುವ ನಗರ ಪಾಲಿಕೆಗಳು, ಅದರಲ್ಲಿ ಶೇ 50ರಷ್ಟನ್ನು ಸಾಧಿಸಿದರೇ ಅದೇ ಅತಿದೊಡ್ಡ ಯಶಸ್ಸು. ಆದರೆ, ಅಂತಹ ಉದಾಹರಣೆ, ನಗರ ಪಾಲಿಕೆ, ಬೃಹತ್ ನಗರ ಪಾಲಿಕೆಗಳಲ್ಲೇ ದಶಕಗಳಿಂದ ದಾಖಲಾಗಿಲ್ಲ.</p>.<p>ಇನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ನಿರೀಕ್ಷಿಸಿ, ನಗರ ಪಾಲಿಕೆಗಳು ಬಜೆಟ್ ಮಂಡಿಸಿವೆ. ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುತ್ತಿರುವ ₹3 ಸಾವಿರ ಕೋಟಿಯನ್ನು ₹3,900 ಕೋಟಿ ನೀಡುತ್ತದೆ ಎಂದು ನಿರೀಕ್ಷಿಸಿ, ಅದನ್ನು ಹಂಚಿಕೊಂಡಿವೆ. ಇದರಲ್ಲಿಯೂ ₹900 ಕೋಟಿ ಕೊರತೆಯಾಗಲಿದೆ. ಇನ್ನು, ಜನಪ್ರತಿನಿಧಿಗಳಿಲ್ಲದ ಪಾಲಿಕೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುವುದನ್ನು ಐದು ವರ್ಷದಿಂದ ನಿಲ್ಲಿಸಿದೆ. ಆದರೂ, ಕೇಂದ್ರದಿಂದ ಸುಮಾರು ₹800 ಕೋಟಿ ನಿರೀಕ್ಷಿಸಲಾಗಿದೆ.</p>.<p>ರಾಜ್ಯ ಸರ್ಕಾರ, ಇನ್ನೂ ₹4 ಸಾವಿರ ಕೋಟಿ ಅನುದಾನವನ್ನು ಪ್ರಕಟಿಸಿದ್ದು, ಅದು ಕಳೆದ ಆರ್ಥಿಕ ವರ್ಷದಿಂದ ಬಾಕಿ ಉಳಿದಿದೆ. ಆ ಅನುದಾನ ಬಿಡುಗಡೆಯಾದರೂ ಅದು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ (ಬಿ–ಸ್ಮೈಲ್) ಹೋಗುತ್ತದೆ. ಸುರಂಗ ರಸ್ತೆ, ಕಾರಿಡಾರ್ಗಳಿಗೆ ಈ ಹಣ ವೆಚ್ಚವಾಗಲಿದೆ ಎಂದು ರಾಜ್ಯ ಸರ್ಕಾರ ಹಿಂದಿನ ಬಜೆಟ್ನಲ್ಲೇ ಸ್ಪಷ್ಟಪಡಿಸಿದೆ. ಆ ಹಣ ನಗರ ಪಾಲಿಕೆಗಳ ಯೋಜನೆಗೆ ಸಿಗುವುದಿಲ್ಲ.</p>.<p>ಹೀಗಾಗಿ, ನಗರ ಪಾಲಿಕೆಗಳು ಸ್ವಂತ ಆರ್ಥಿಕ ಕ್ರೋಡೀಕರಣದಲ್ಲಿ ಯಶಸ್ಸು ಸಾಧಿಸದೆ ಹೋದರೆ, ಅದರ ನಿರೀಕ್ಷೆಯಲ್ಲಿ ರೂಪಿಸಲಾಗಿರುವ ಸಮಗ್ರ ನಗರದ ಅಭಿವೃದ್ಧಿಯ ನೂರಾರು ಯೋಜನೆಗಳು ಬಜೆಟ್ನ ಅಂಕಿ–ಅಂಶಗಳಾಗಿಯೇ ಉಳಿಯುತ್ತವೆ.</p>.<p><strong>ಉಸ್ತುವಾರಿ ಸಚಿವರ ನಿಧಿ ₹300 ಕೋಟಿ</strong></p><p>ಐದು ನಗರ ಪಾಲಿಕೆಗಳಲ್ಲಿ ನಗರದ ಉಸ್ತುವಾರಿ ಸಚಿವರಿಗೆ ಒಟ್ಟಾರೆ ₹300 ಕೋಟಿ ನಿಧಿಯನ್ನು ‘ವಿವೇಚನೆಗೆ ಒಳಪಟ್ಟ ಅನುದಾನ’ವಾಗಿ ಮೀಸಲಿಡಲಾಗಿದೆ. ಈ ನಿಧಿಯಲ್ಲಿ ಅವರು ಯಾವ ಕಾಮಗಾರಿಗಾದರೂ ಅಥವಾ ಯಾವ ಶಾಸಕರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾದರೂ ನೀಡಬಹುದು. ನಗರ ಉಸ್ತುವಾರಿ ಸಚಿವರು ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ಈ ಹಣವನ್ನು ಪಾಲಿಕೆಗಳು ಒದಗಿಸಲೇ ಬೇಕಾಗುತ್ತದೆ. ಇದಲ್ಲದೆ, ಮೇಯರ್, ಉಪ ಮೇಯರ್, ಆಯುಕ್ತ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ವಿವೇಚನೆಗೆ ಒಳಪಟ್ಟ ಅನುದಾನ, ವಿಶೇಷ ವಿವೇಚನೆಗೆ ಒಳಪಟ್ಟ ಅಭಿವೃದ್ಧಿ ಕಾಮಗಾರಿ ನಿಧಿಯಾಗಿ ಪ್ರತಿ ಪಾಲಿಕೆಗಳು ತಲಾ ₹40 ಕೋಟಿಯನ್ನು ಹೊಂದಿವೆ. ಮೇಯರ್ ಉಪ ಮೇಯರ್, ಸ್ಥಾಯಿ ಸಮಿತಿ ಇಲ್ಲದ್ದರಿಂದ ಆಡಳಿತಾಧಿಕಾರಿ ಆ ನಿಧಿಗಳನ್ನು ಮಂಜೂರು ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉತ್ತರ, ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆಗಳು ತಮ್ಮ ಮೊದಲ ‘ಬೃಹತ್’ ಬಜೆಟ್ಗಳಲ್ಲಿ ಹತ್ತಾರು ನಿರೀಕ್ಷೆಗಳೊಂದಿಗೆ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ‘ಗ್ರೇಟರ್’ ಆಶಯವನ್ನು ವ್ಯಕ್ತಪಡಿಸಿವೆ. ಆದರೆ, ಬಹುತೇಕ ನಿರೀಕ್ಷೆಗಳು ಕೈಗೆಟುಕದ ಗಗನ ಕುಸುಮವಾಗಿವೆ.</p>.<p>ಆಸ್ತಿಗೆ ತೆರಿಗೆ ಸಂಗ್ರಹದಲ್ಲಿ ಐದು ತಿಂಗಳಲ್ಲೇ ಯಶಸ್ಸು ಕಾಣದ ಪಾಲಿಕೆಗಳು, ಹಿಂದಿನ ವರ್ಷಕ್ಕಿಂತ ದುಪ್ಪಟ್ಟು ಸಂಗ್ರಹಿಸುವ ಕನಸನ್ನು ಕಂಡಿವೆ. ತೆರಿಗೆ ಪಾವತಿಸದ ಆಸ್ತಿಗಳನ್ನು ಹರಾಜು ಹಾಕುವಲ್ಲಿ ವಿಫಲವಾಗಿದ್ದು, ಅದನ್ನು ಪಾಲಿಕೆಗಳೇ ಮಾರ್ಗಸೂಚಿ ದರದಲ್ಲಿ ಖರೀದಿಸುವ ಯೋಜನೆ ಇದೆ. ಆದರೆ, ಸುಸ್ತಿದಾರರ ಬಾಕಿ ಹೊರತಾದ ನೂರಾರು ಕೋಟಿ ಹಣವನ್ನು ಆಸ್ತಿ ಮಾಲೀಕರಿಗೆ ನೀಡುವ ಶಕ್ತಿಯನ್ನು ಪಾಲಿಕೆಗಳು ಹೊಂದಿಲ್ಲ ಎಂಬುದು ಅವುಗಳ ‘ಬ್ಯಾಲೆನ್ಸ್ ಶೀಟ್’ನಿಂದಲೇ ಬಹಿರಂಗವಾಗಿದೆ. </p>.<p>ಅನುಷ್ಠಾನವಾಗದ ಪ್ರೀಮಿಯಂ ಎಫ್ಎಎಆರ್ ಮೇಲೆ ಅತಿಹೆಚ್ಚು ಅವಲಂಬಿತವಾಗಿ ನೂರಾರು ಕೋಟಿಗಳನ್ನು ಸಂಗ್ರಹಿಸುವ ಗುರಿಯನ್ನು ಪಾಲಿಕೆಗಳು ಹೊಂದಿವೆ. ರಿಯಲ್ ಎಸ್ಟೇಟ್ ಡೆವಲಪರ್ಗಳ ಆಕ್ಷೇಪಣೆಯಿಂದ ಪ್ರೀಮಿಯಂ ಎಫ್ಎಆರ್ ಅನುಷ್ಠಾನವಾಗಲು ಕಾನೂನು ತೊಡಕಿದೆ. ಅದು ಪರಿಹಾರವಾಗಲು ಸಾಕಷ್ಟು ಸಮಯ ಬೇಕು. ಇನ್ನು ಅದು ಅನುಷ್ಠಾನವಾದರೂ ಅದರ ಖರೀದಿ, ಮಾರಾಟ ಹಾಗೂ ಪಾಲಿಕೆಗಳಿಗೆ ಬರುವ ಶುಲ್ಕಕ್ಕೆ ದೀರ್ಘ ಸಮಯವೇ ಬೇಕು. ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಯೋಜನೆಯಲ್ಲಿ ಹಲವು ಅಕ್ರಮಗಳಾಗಿವೆ ಎಂಬುದನ್ನು ಉಪ ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದು, ಅದರ ನಿವಾರಣೆ ಸಾಧ್ಯವಾಗಿಲ್ಲ. ಇನ್ನು ಪ್ರೀಮಿಯಂ ಎಫ್ಎಆರ್ನಲ್ಲೂ ಇಂತಹ ಅಡೆತಡೆಗಳು ಇರುವುದರಿಂದ, ಅದನ್ನೇ ನೆಚ್ಚಿಕೊಂಡಿರುವ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗುವುದಿಲ್ಲ.</p>.<p>ಜಾಹೀರಾತು ಶುಲ್ಕ, ವಾಹನ ನಿಲುಗಡೆ ಶುಲ್ಕ, ಉದ್ದಿಮೆ ಪರವಾನಗಿಯಿಂದ ಬರುವ ವರಮಾನವನ್ನೂ ನೆಚ್ಚಿಕೊಂಡು ಯೋಜನೆಗಳನ್ನು ರೂಪಿಸಲಾಗಿದೆ. ಸ್ವಂತ ಬಲದಿಂದ ಸಂಪನ್ಮೂಲ ಕ್ರೋಡೀಕರಿಸುವ ಕಸರತ್ತು ನಡೆಸಿರುವ ನಗರ ಪಾಲಿಕೆಗಳು, ಅದರಲ್ಲಿ ಶೇ 50ರಷ್ಟನ್ನು ಸಾಧಿಸಿದರೇ ಅದೇ ಅತಿದೊಡ್ಡ ಯಶಸ್ಸು. ಆದರೆ, ಅಂತಹ ಉದಾಹರಣೆ, ನಗರ ಪಾಲಿಕೆ, ಬೃಹತ್ ನಗರ ಪಾಲಿಕೆಗಳಲ್ಲೇ ದಶಕಗಳಿಂದ ದಾಖಲಾಗಿಲ್ಲ.</p>.<p>ಇನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ನಿರೀಕ್ಷಿಸಿ, ನಗರ ಪಾಲಿಕೆಗಳು ಬಜೆಟ್ ಮಂಡಿಸಿವೆ. ರಾಜ್ಯ ಸರ್ಕಾರ ಪ್ರತಿ ವರ್ಷ ನೀಡುತ್ತಿರುವ ₹3 ಸಾವಿರ ಕೋಟಿಯನ್ನು ₹3,900 ಕೋಟಿ ನೀಡುತ್ತದೆ ಎಂದು ನಿರೀಕ್ಷಿಸಿ, ಅದನ್ನು ಹಂಚಿಕೊಂಡಿವೆ. ಇದರಲ್ಲಿಯೂ ₹900 ಕೋಟಿ ಕೊರತೆಯಾಗಲಿದೆ. ಇನ್ನು, ಜನಪ್ರತಿನಿಧಿಗಳಿಲ್ಲದ ಪಾಲಿಕೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುವುದನ್ನು ಐದು ವರ್ಷದಿಂದ ನಿಲ್ಲಿಸಿದೆ. ಆದರೂ, ಕೇಂದ್ರದಿಂದ ಸುಮಾರು ₹800 ಕೋಟಿ ನಿರೀಕ್ಷಿಸಲಾಗಿದೆ.</p>.<p>ರಾಜ್ಯ ಸರ್ಕಾರ, ಇನ್ನೂ ₹4 ಸಾವಿರ ಕೋಟಿ ಅನುದಾನವನ್ನು ಪ್ರಕಟಿಸಿದ್ದು, ಅದು ಕಳೆದ ಆರ್ಥಿಕ ವರ್ಷದಿಂದ ಬಾಕಿ ಉಳಿದಿದೆ. ಆ ಅನುದಾನ ಬಿಡುಗಡೆಯಾದರೂ ಅದು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ (ಬಿ–ಸ್ಮೈಲ್) ಹೋಗುತ್ತದೆ. ಸುರಂಗ ರಸ್ತೆ, ಕಾರಿಡಾರ್ಗಳಿಗೆ ಈ ಹಣ ವೆಚ್ಚವಾಗಲಿದೆ ಎಂದು ರಾಜ್ಯ ಸರ್ಕಾರ ಹಿಂದಿನ ಬಜೆಟ್ನಲ್ಲೇ ಸ್ಪಷ್ಟಪಡಿಸಿದೆ. ಆ ಹಣ ನಗರ ಪಾಲಿಕೆಗಳ ಯೋಜನೆಗೆ ಸಿಗುವುದಿಲ್ಲ.</p>.<p>ಹೀಗಾಗಿ, ನಗರ ಪಾಲಿಕೆಗಳು ಸ್ವಂತ ಆರ್ಥಿಕ ಕ್ರೋಡೀಕರಣದಲ್ಲಿ ಯಶಸ್ಸು ಸಾಧಿಸದೆ ಹೋದರೆ, ಅದರ ನಿರೀಕ್ಷೆಯಲ್ಲಿ ರೂಪಿಸಲಾಗಿರುವ ಸಮಗ್ರ ನಗರದ ಅಭಿವೃದ್ಧಿಯ ನೂರಾರು ಯೋಜನೆಗಳು ಬಜೆಟ್ನ ಅಂಕಿ–ಅಂಶಗಳಾಗಿಯೇ ಉಳಿಯುತ್ತವೆ.</p>.<p><strong>ಉಸ್ತುವಾರಿ ಸಚಿವರ ನಿಧಿ ₹300 ಕೋಟಿ</strong></p><p>ಐದು ನಗರ ಪಾಲಿಕೆಗಳಲ್ಲಿ ನಗರದ ಉಸ್ತುವಾರಿ ಸಚಿವರಿಗೆ ಒಟ್ಟಾರೆ ₹300 ಕೋಟಿ ನಿಧಿಯನ್ನು ‘ವಿವೇಚನೆಗೆ ಒಳಪಟ್ಟ ಅನುದಾನ’ವಾಗಿ ಮೀಸಲಿಡಲಾಗಿದೆ. ಈ ನಿಧಿಯಲ್ಲಿ ಅವರು ಯಾವ ಕಾಮಗಾರಿಗಾದರೂ ಅಥವಾ ಯಾವ ಶಾಸಕರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾದರೂ ನೀಡಬಹುದು. ನಗರ ಉಸ್ತುವಾರಿ ಸಚಿವರು ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ಈ ಹಣವನ್ನು ಪಾಲಿಕೆಗಳು ಒದಗಿಸಲೇ ಬೇಕಾಗುತ್ತದೆ. ಇದಲ್ಲದೆ, ಮೇಯರ್, ಉಪ ಮೇಯರ್, ಆಯುಕ್ತ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ವಿವೇಚನೆಗೆ ಒಳಪಟ್ಟ ಅನುದಾನ, ವಿಶೇಷ ವಿವೇಚನೆಗೆ ಒಳಪಟ್ಟ ಅಭಿವೃದ್ಧಿ ಕಾಮಗಾರಿ ನಿಧಿಯಾಗಿ ಪ್ರತಿ ಪಾಲಿಕೆಗಳು ತಲಾ ₹40 ಕೋಟಿಯನ್ನು ಹೊಂದಿವೆ. ಮೇಯರ್ ಉಪ ಮೇಯರ್, ಸ್ಥಾಯಿ ಸಮಿತಿ ಇಲ್ಲದ್ದರಿಂದ ಆಡಳಿತಾಧಿಕಾರಿ ಆ ನಿಧಿಗಳನ್ನು ಮಂಜೂರು ಮಾಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>