<p><strong>ಬೆಂಗಳೂರು</strong>: ‘ರಾವಣನ ಬಗ್ಗೆ ವ್ಯಾಸನ ಮೂಲ ರಾಮಾಯಣಕ್ಕಿಂತ ಭಿನ್ನವಾದ ಚಿತ್ರಣವು ನಾಗಚಂದ್ರನ ‘ಪಂಪ ರಾಮಯಣ’ದಲ್ಲಿ ಸಿಗುತ್ತದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.</p>.<p>ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜೈನ ಸಾಹಿತ್ಯ ಸಿರಿ’ ಕಾರ್ಯಕ್ರಮದಲ್ಲಿ ‘ನಾಗಚಂದ್ರ ಕವಿಯ ಪಂಪ ರಾಮಾಯಣದ ವೈಶಿಷ್ಟ್ಯ ಒಂದು ನೋಟ’ ವಿಷಯದ ಬಗ್ಗೆ ಮಾತನಾಡಿದರು.</p>.<p>‘ಒಮ್ಮೊಮ್ಮೆ ಸಮುದ್ರವೂ ತನ್ನ ಮೇರೆಯನ್ನು ಮೀರುವಂತೆ ರಾವಣ ಸೀತೆಯನ್ನು ನೋಡಿದಾಗ ತನ್ನ ಮನಃಸ್ಥಿತಿಯ ಮೇರೆಯನ್ನು ಮೀರುತ್ತಾನೆ. ಆದರೆ, ತನ್ನ ಉದಾತ್ತ ನಡೆಯ ಮೂಲಕ ರಾವಣನನ್ನು ನಾವು ಮೆಚ್ಚುವಂತೆ ನಾಗಚಂದ್ರ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ’ ಎಂದರು.</p>.<p>‘ಜೀವದಯೆ ಹಾಗೂ ಅಹಿಂಸೆ ಜೈನಧರ್ಮದ ಎರಡು ಕಣ್ಣುಗಳು ಎಂಬ ಮೂಲವನ್ನು ಆಶಯವಾಗಿಟ್ಟುಕೊಂಡು ನಾಗಚಂದ್ರ ಕೃತಿಗಳನ್ನು ರಚಿಸಿದ್ದಾನೆ’ ಎಂದು ಹೇಳಿದರು.</p>.<p>ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ ಹಾಗೂ ಸಂಚಾಲಕಿ ಪದ್ಮಿನಿ ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾವಣನ ಬಗ್ಗೆ ವ್ಯಾಸನ ಮೂಲ ರಾಮಾಯಣಕ್ಕಿಂತ ಭಿನ್ನವಾದ ಚಿತ್ರಣವು ನಾಗಚಂದ್ರನ ‘ಪಂಪ ರಾಮಯಣ’ದಲ್ಲಿ ಸಿಗುತ್ತದೆ’ ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.</p>.<p>ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಹಾಗೂ ಚಕ್ರೇಶ್ವರಿ ಮಹಿಳಾ ಸಮಾಜ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜೈನ ಸಾಹಿತ್ಯ ಸಿರಿ’ ಕಾರ್ಯಕ್ರಮದಲ್ಲಿ ‘ನಾಗಚಂದ್ರ ಕವಿಯ ಪಂಪ ರಾಮಾಯಣದ ವೈಶಿಷ್ಟ್ಯ ಒಂದು ನೋಟ’ ವಿಷಯದ ಬಗ್ಗೆ ಮಾತನಾಡಿದರು.</p>.<p>‘ಒಮ್ಮೊಮ್ಮೆ ಸಮುದ್ರವೂ ತನ್ನ ಮೇರೆಯನ್ನು ಮೀರುವಂತೆ ರಾವಣ ಸೀತೆಯನ್ನು ನೋಡಿದಾಗ ತನ್ನ ಮನಃಸ್ಥಿತಿಯ ಮೇರೆಯನ್ನು ಮೀರುತ್ತಾನೆ. ಆದರೆ, ತನ್ನ ಉದಾತ್ತ ನಡೆಯ ಮೂಲಕ ರಾವಣನನ್ನು ನಾವು ಮೆಚ್ಚುವಂತೆ ನಾಗಚಂದ್ರ ತನ್ನ ಕಾವ್ಯದಲ್ಲಿ ಚಿತ್ರಿಸಿದ್ದಾನೆ’ ಎಂದರು.</p>.<p>‘ಜೀವದಯೆ ಹಾಗೂ ಅಹಿಂಸೆ ಜೈನಧರ್ಮದ ಎರಡು ಕಣ್ಣುಗಳು ಎಂಬ ಮೂಲವನ್ನು ಆಶಯವಾಗಿಟ್ಟುಕೊಂಡು ನಾಗಚಂದ್ರ ಕೃತಿಗಳನ್ನು ರಚಿಸಿದ್ದಾನೆ’ ಎಂದು ಹೇಳಿದರು.</p>.<p>ಜೈನ್ ಮಿಲನ್, ಬೆಂಗಳೂರು ಸೆಂಟ್ರಲ್ ಅಧ್ಯಕ್ಷೆ ಮಮತಾ ಕಾಂತರಾಜ್, ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ ಹಾಗೂ ಸಂಚಾಲಕಿ ಪದ್ಮಿನಿ ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>