<p><strong>ಬೆಂಗಳೂರು:</strong> ಬಿಹಾರದ ವಿಕಾಸ್ ಕುಮಾರ್ ಮಾಚೋತ್(25) ಎಂಬುವರ ಕೊಲೆ ಪ್ರಕರಣದ ಸಂಬಂಧ ಪೀಣ್ಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.</p>.<p>ಕೀರ್ತಿ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಏಪ್ರಿಲ್ 6ರಂದು ಬಿಹಾರದ ವಿಕಾಸ್ ಕುಮಾರ್ ಮಾಚೋತ್ ಕೊಲೆ ನಡೆದಿತ್ತು. ಆರಂಭದಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಆಗಿರಲಿಲ್ಲ. ಗುರುತು ಪತ್ತೆಯಾದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.</p>.<p>ಮಾಗಡಿ ರಸ್ತೆಯ ಕಡಬಗೆರೆಯಲ್ಲಿ ವಾಸವಾಗಿದ್ದ ವಿಕಾಸ್ ಅವರು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಅಂದ್ರಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಬಸ್ ಟಿಕೆಟ್ಗೆ ₹15 ವೆಚ್ಚವಾಗುತ್ತದೆ ಎಂಬ ಕಾರಣದಿಂದ ನಡೆದು ಮನೆಯುತ್ತ ಹೊರಟಿದ್ದರು ಎಂದು ಗೊತ್ತಾಗಿದೆ.</p>.<p>‘ವಿಕಾಸ್ ಅವರ ಕೈಯಲ್ಲಿ ಬ್ಯಾಗ್ ಇತ್ತು. ಅದನ್ನು ಗಮನಿಸಿದ್ದ ಆರೋಪಿಗಳು ಬ್ಯಾಗ್ನಲ್ಲಿ ಹಣ ಇರಬಹುದು ಎಂದು ಭಾವಿಸಿ ಹಲ್ಲೆ ನಡೆಸಿ ಅಪಹರಿಸಿದ್ದರು. ಬಳಿಕ ಪೀಣ್ಯದ ಬಳಿ ಕರೆದೊಯ್ದು ಮತ್ತೆ ಥಳಿಸಿದ್ದರು. ಆತನ ಬಳಿ ಹಣ ಇಲ್ಲ ಎಂಬುದು ಆರೋಪಿಗಳಿಗೆ ಗೊತ್ತಾಗಿ ಅಲ್ಲಿಂದ ತೆರಳಲು ಮುಂದಾಗಿದ್ದರು. ಅಷ್ಟರಲ್ಲಿ ವಿಕಾಸ್ ಮೃತಪಟ್ಟಿದ್ದರು. ಗಾಬರಿಗೊಂಡ ಆರೋಪಿಗಳು, ಮೃತದೇಹವನ್ನು ಮಾರ್ಗ ಮಧ್ಯೆ ಕರಿಓಬನಹಳ್ಳಿಯ ಪೊದೆಯಲ್ಲಿ ಎಸೆದು ಪರಾರಿ ಆಗಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<p>ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೀಣ್ಯ ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿಹಾರದ ವಿಕಾಸ್ ಕುಮಾರ್ ಮಾಚೋತ್(25) ಎಂಬುವರ ಕೊಲೆ ಪ್ರಕರಣದ ಸಂಬಂಧ ಪೀಣ್ಯ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.</p>.<p>ಕೀರ್ತಿ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಏಪ್ರಿಲ್ 6ರಂದು ಬಿಹಾರದ ವಿಕಾಸ್ ಕುಮಾರ್ ಮಾಚೋತ್ ಕೊಲೆ ನಡೆದಿತ್ತು. ಆರಂಭದಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಆಗಿರಲಿಲ್ಲ. ಗುರುತು ಪತ್ತೆಯಾದ ನಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.</p>.<p>ಮಾಗಡಿ ರಸ್ತೆಯ ಕಡಬಗೆರೆಯಲ್ಲಿ ವಾಸವಾಗಿದ್ದ ವಿಕಾಸ್ ಅವರು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಅಂದ್ರಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಬಸ್ ಟಿಕೆಟ್ಗೆ ₹15 ವೆಚ್ಚವಾಗುತ್ತದೆ ಎಂಬ ಕಾರಣದಿಂದ ನಡೆದು ಮನೆಯುತ್ತ ಹೊರಟಿದ್ದರು ಎಂದು ಗೊತ್ತಾಗಿದೆ.</p>.<p>‘ವಿಕಾಸ್ ಅವರ ಕೈಯಲ್ಲಿ ಬ್ಯಾಗ್ ಇತ್ತು. ಅದನ್ನು ಗಮನಿಸಿದ್ದ ಆರೋಪಿಗಳು ಬ್ಯಾಗ್ನಲ್ಲಿ ಹಣ ಇರಬಹುದು ಎಂದು ಭಾವಿಸಿ ಹಲ್ಲೆ ನಡೆಸಿ ಅಪಹರಿಸಿದ್ದರು. ಬಳಿಕ ಪೀಣ್ಯದ ಬಳಿ ಕರೆದೊಯ್ದು ಮತ್ತೆ ಥಳಿಸಿದ್ದರು. ಆತನ ಬಳಿ ಹಣ ಇಲ್ಲ ಎಂಬುದು ಆರೋಪಿಗಳಿಗೆ ಗೊತ್ತಾಗಿ ಅಲ್ಲಿಂದ ತೆರಳಲು ಮುಂದಾಗಿದ್ದರು. ಅಷ್ಟರಲ್ಲಿ ವಿಕಾಸ್ ಮೃತಪಟ್ಟಿದ್ದರು. ಗಾಬರಿಗೊಂಡ ಆರೋಪಿಗಳು, ಮೃತದೇಹವನ್ನು ಮಾರ್ಗ ಮಧ್ಯೆ ಕರಿಓಬನಹಳ್ಳಿಯ ಪೊದೆಯಲ್ಲಿ ಎಸೆದು ಪರಾರಿ ಆಗಿದ್ದರು’ ಎಂದು ಮೂಲಗಳು ತಿಳಿಸಿವೆ.</p>.<p>ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದ ಪೀಣ್ಯ ಠಾಣೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>