<p>ಬೆಂಗಳೂರು: ‘ಸೇಡಿಗಾಗಿ ಹೋರಾಡಿ ಯಾರೂ ಗೆದ್ದಿಲ್ಲ, ಕ್ಷಮಾದಾನದಿಂದ ಯಾರೂ ಸೋತಿಲ್ಲ’, ‘ನಿಮ್ಮ ಶತ್ರುಗಳಿಗಾಗಿ ಪ್ರಾರ್ಥಿಸಿರಿ, ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿರಿ’, ‘ದಯೆಯೇ ಧರ್ಮದ ಮೂಲವಯ್ಯ’, ‘ಕಣ್ಣಿಗೆ ಕಣ್ಣು ಎಂಬ ಸಿದ್ಧಾಂತ ಮುಂದುವರಿದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು...’</p>.<p>ಸಮಾನ ಮನಸ್ಕರು ಸೇರಿ ಪುರಭವನದ ಮುಂದೆ ಬುಧವಾರ ಹಮ್ಮಿಕೊಂಡಿದ್ದ ‘ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ–ಭೂಮಿ ರಕ್ಷಿಸಿ’ ಜಾಗೃತಿ ಅಭಿಯಾನದಲ್ಲಿ ಕಂಡುಬಂದ ಬುದ್ಧ, ಯೇಸು, ಬಸವಣ್ಣ, ಮಹಾತ್ಮ ಗಾಂಧೀಜಿ ಮುಂತಾದ ದಾರ್ಶನಿಕರ ಮಾತುಗಳನ್ನು ಒಳಗೊಂಡ ಭಿತ್ತಿಪತ್ರಗಳು ಇವು.</p>.<p>ಯುದ್ಧ ಎಂಬುದೇ ಜೀವವಿರೋಧಿ ಕ್ರಿಯೆ. ಭಾರತ ಎಂದಿಗೂ ಯಾವುದೇ ಯುದ್ಧದ ಪರ ನಿಂತಿರಲಿಲ್ಲ. ಭಾರತದ ವಿದೇಶಾಂಗ ನೀತಿಗೆ ತಿಲಾಂಜಲಿ ಇಡುವ ಮೂಲಕ ದೇಶವು ಜಗತ್ತಿನ ಎದುರು ತಲೆತಗ್ಗಿಸುವಂತೆ ಮೋದಿ ಸರ್ಕಾರ ಮಾಡಿದೆ. ವಿದೇಶಾಂಗ ನೀತಿ ಅಪಮೌಲ್ಯಗೊಂಡಿದೆ ಎಂದು ಸಮಾನ ಮನಸ್ಕರು ದೂರಿದರು.</p>.<p>‘ಯುದ್ಧವು ಇಸ್ರೇಲ್–ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರಬಹುದು. ಅದರ ಪರಿಣಾಮವನ್ನು ನಾವೂ ಅನುಭವಿಸುವಂತಾಗಿದೆ. ಎಲ್ಪಿಜಿ ಸಿಲಿಂಡರ್ ಇಲ್ಲದೇ ಹೋಟೆಲ್ ನಡೆಸುವವರು ಪರದಾಡುವಂತಾಗಿದೆ. ಆಟೊಗಳು ನಿತ್ಯ ಸಾಲುಗಟ್ಟಿ ನಿಂತು ಗ್ಯಾಸ್ ತುಂಬಿಸಲು ಕಾಯುವಂತಾಗಿದೆ’ ಎಂದು ಬೇಸರಪಟ್ಟರು.</p>.<p>‘ಭಾರತಕ್ಕೂ ಇರಾನ್ಗೂ ನಾಲ್ಕು ಸಾವಿರ ವರ್ಷಗಳಿಂದ ಸಂಬಂಧವಿದೆ. ಸ್ವತಂತ್ರ ಭಾರತ ಮತ್ತು ಇರಾನ್ ನಡುವಿನ ಬಾಂಧವ್ಯವೂ ಚೆನ್ನಾಗಿತ್ತು. ಆದರೆ, ಯುದ್ಧದ ಆರಂಭದ ದಿನಗಳಲ್ಲೇ ಈಗಿನ ಸರ್ಕಾರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತ್ತು’ ಎಂದು ಆಪಾದಿಸಿದರು.</p>.<p>ಸಮಾನ ಮನಸ್ಕರಾದ ಎಲ್.ಎನ್.ಮುಕುಂದರಾಜ್, ಶಿವಸುಂದರ್, ಮಂಜುನಾಥ್, ಕೆ.ಪ್ರಕಾಶ್, ಮಹಾಂತೇಶ್, ಬಾಲಕೃಷ್ಣ ಶೆಟ್ಟಿ, ಜಿಪಿಒ ಚಂದ್ರು, ನಗರಗೆರೆ ರಮೇಶ್, ವಿವೇಕಾನಂದ ಎಚ್.ಕೆ., ರೂಪೇಶ್ ಪುತ್ತೂರು, ಉಮೇಶ್, ಯುವರಾಜ್, ಪ್ರಕಾಶಮೂರ್ತಿ, ಬ್ಯಾಡರಹಳ್ಳಿ ಶಿವರಾಜ್, ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260409-4-1786842851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸೇಡಿಗಾಗಿ ಹೋರಾಡಿ ಯಾರೂ ಗೆದ್ದಿಲ್ಲ, ಕ್ಷಮಾದಾನದಿಂದ ಯಾರೂ ಸೋತಿಲ್ಲ’, ‘ನಿಮ್ಮ ಶತ್ರುಗಳಿಗಾಗಿ ಪ್ರಾರ್ಥಿಸಿರಿ, ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿರಿ’, ‘ದಯೆಯೇ ಧರ್ಮದ ಮೂಲವಯ್ಯ’, ‘ಕಣ್ಣಿಗೆ ಕಣ್ಣು ಎಂಬ ಸಿದ್ಧಾಂತ ಮುಂದುವರಿದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು...’</p>.<p>ಸಮಾನ ಮನಸ್ಕರು ಸೇರಿ ಪುರಭವನದ ಮುಂದೆ ಬುಧವಾರ ಹಮ್ಮಿಕೊಂಡಿದ್ದ ‘ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪಿಸಿ–ಭೂಮಿ ರಕ್ಷಿಸಿ’ ಜಾಗೃತಿ ಅಭಿಯಾನದಲ್ಲಿ ಕಂಡುಬಂದ ಬುದ್ಧ, ಯೇಸು, ಬಸವಣ್ಣ, ಮಹಾತ್ಮ ಗಾಂಧೀಜಿ ಮುಂತಾದ ದಾರ್ಶನಿಕರ ಮಾತುಗಳನ್ನು ಒಳಗೊಂಡ ಭಿತ್ತಿಪತ್ರಗಳು ಇವು.</p>.<p>ಯುದ್ಧ ಎಂಬುದೇ ಜೀವವಿರೋಧಿ ಕ್ರಿಯೆ. ಭಾರತ ಎಂದಿಗೂ ಯಾವುದೇ ಯುದ್ಧದ ಪರ ನಿಂತಿರಲಿಲ್ಲ. ಭಾರತದ ವಿದೇಶಾಂಗ ನೀತಿಗೆ ತಿಲಾಂಜಲಿ ಇಡುವ ಮೂಲಕ ದೇಶವು ಜಗತ್ತಿನ ಎದುರು ತಲೆತಗ್ಗಿಸುವಂತೆ ಮೋದಿ ಸರ್ಕಾರ ಮಾಡಿದೆ. ವಿದೇಶಾಂಗ ನೀತಿ ಅಪಮೌಲ್ಯಗೊಂಡಿದೆ ಎಂದು ಸಮಾನ ಮನಸ್ಕರು ದೂರಿದರು.</p>.<p>‘ಯುದ್ಧವು ಇಸ್ರೇಲ್–ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರಬಹುದು. ಅದರ ಪರಿಣಾಮವನ್ನು ನಾವೂ ಅನುಭವಿಸುವಂತಾಗಿದೆ. ಎಲ್ಪಿಜಿ ಸಿಲಿಂಡರ್ ಇಲ್ಲದೇ ಹೋಟೆಲ್ ನಡೆಸುವವರು ಪರದಾಡುವಂತಾಗಿದೆ. ಆಟೊಗಳು ನಿತ್ಯ ಸಾಲುಗಟ್ಟಿ ನಿಂತು ಗ್ಯಾಸ್ ತುಂಬಿಸಲು ಕಾಯುವಂತಾಗಿದೆ’ ಎಂದು ಬೇಸರಪಟ್ಟರು.</p>.<p>‘ಭಾರತಕ್ಕೂ ಇರಾನ್ಗೂ ನಾಲ್ಕು ಸಾವಿರ ವರ್ಷಗಳಿಂದ ಸಂಬಂಧವಿದೆ. ಸ್ವತಂತ್ರ ಭಾರತ ಮತ್ತು ಇರಾನ್ ನಡುವಿನ ಬಾಂಧವ್ಯವೂ ಚೆನ್ನಾಗಿತ್ತು. ಆದರೆ, ಯುದ್ಧದ ಆರಂಭದ ದಿನಗಳಲ್ಲೇ ಈಗಿನ ಸರ್ಕಾರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತ್ತು’ ಎಂದು ಆಪಾದಿಸಿದರು.</p>.<p>ಸಮಾನ ಮನಸ್ಕರಾದ ಎಲ್.ಎನ್.ಮುಕುಂದರಾಜ್, ಶಿವಸುಂದರ್, ಮಂಜುನಾಥ್, ಕೆ.ಪ್ರಕಾಶ್, ಮಹಾಂತೇಶ್, ಬಾಲಕೃಷ್ಣ ಶೆಟ್ಟಿ, ಜಿಪಿಒ ಚಂದ್ರು, ನಗರಗೆರೆ ರಮೇಶ್, ವಿವೇಕಾನಂದ ಎಚ್.ಕೆ., ರೂಪೇಶ್ ಪುತ್ತೂರು, ಉಮೇಶ್, ಯುವರಾಜ್, ಪ್ರಕಾಶಮೂರ್ತಿ, ಬ್ಯಾಡರಹಳ್ಳಿ ಶಿವರಾಜ್, ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260409-4-1786842851</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>