ಮೈಸೂರು ರಸ್ತೆಯ ಬಹುತೇಕ ಕಡೆ ದೊಡ್ಡದಾದ ಗುಂಡಿಗಳು ಬಿದ್ದಿದ್ದವು. ರಾಜಾಜಿನಗರ, ಯಶವಂತಪುರ, ಆಡುಗೋಡಿ, ದೇವನಹಳ್ಳಿ, ಎಚ್ಎಸ್ಆರ್ ಲೇಔಟ್ ಹಾಗೂ ಸುತ್ತಮುತ್ತಲ ಠಾಣೆ ವ್ಯಾಪ್ತಿಯ ರಸ್ತೆಗಳೂ ಹಾಳಾಗಿದ್ದವು. ಎಲ್ಲ ರಸ್ತೆಯಲ್ಲೂ ಗುಂಡಿಗಳಿಗೆ ಕಲ್ಲು ಹಾಗೂ ಕಾಂಕ್ರಿಟ್ ಹಾಕಿ ಪೊಲೀಸರು ಮುಚ್ಚಿಸಿದರು. ಕೆಲ ಸಿಬ್ಬಂದಿ ಖುದ್ದಾಗಿ ಗುಂಡಿಗಳನ್ನು ಮುಚ್ಚಿ, ಕೊನೆಯಲ್ಲಿ ತೇಪೆ ಹಾಕಿದರು.