<p><strong>ಬೆಂಗಳೂರು:</strong> ಕುರುಬರಹಳ್ಳಿಯಲ್ಲಿ ಗುರುವಾರ ರಾತ್ರಿ ಸಿಎನ್ಜಿ ಚಾಲಿತ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಮಲಗಿದ್ದ ಚಾಲಕ ಸಜೀವ ದಹನ ಆಗಿದ್ದಾರೆ. ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.</p>.<p>ಅಂಬದಾಸ್ (23) ಮೃತಪಟ್ಟ ಕ್ಯಾಬ್ ಚಾಲಕ.</p>.<p>ಕಬ್ಬಿಣ ತುಂಬಿದ ಲಾರಿ, ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು, ಪಕ್ಕದಲ್ಲಿದ್ದ ಗೋದಾಮಿಗೆ ನುಗ್ಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲಿ ಮಲಗಿದ್ದ ಅಂಬದಾಸ್ ಅವರು ಹೊರಕ್ಕೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.</p>.<p>ಅಂಬದಾಸ್ ಅವರು ಕುಟುಂಬದವರ ಜತೆಗೆ ಕುರುಬರಹಳ್ಳಿಯಲ್ಲಿ ವಾಸಿಸುತ್ತಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಪ್ರಯಾಣಿಕರನ್ನು ಬಿಟ್ಟು ಕುರುಬರಹಳ್ಳಿಯ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.</p>.<p>ಘಟನೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಕ್ಯಾಬ್ ಚಾಲಕನನ್ನು ರಕ್ಷಿಸಲು ಸಾಧ್ಯ ಆಗಲಿಲ್ಲ. ರಾಜಾಜಿನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.</p>.<p><strong>ಕಿರಿದಾದ ರಸ್ತೆಗೆ ಬಂದಿದ್ದ ಲಾರಿ ಚಾಲಕ:</strong> ಆಂಧ್ರಪ್ರದೇಶದಿಂದ ಸುಂಕದಕಟ್ಟೆಗೆ ಕಬ್ಬಿಣ ತುಂಬಿಕೊಂಡು ಲಾರಿ ಬರುತ್ತಿತ್ತು. ಲಾರಿ ಚಾಲಕ ಶರ್ಮಾ, ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ. ಮ್ಯಾಪ್ನಲ್ಲಿ ಕುರುಬರಹಳ್ಳಿ ಮೂಲಕ ರಸ್ತೆ ತೋರಿಸಿತ್ತು. ಈ ಪ್ರದೇಶದಲ್ಲಿ ಬಹುತೇಕ ಇಳಿಜಾರು ಹಾಗೂ ಕಿರಿದಾದ ರಸ್ತೆಗಳಿವೆ. ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.</p>.<p>‘ಸಾಲ ಮಾಡಿಕೊಂಡು ಕಾರು ಖರೀದಿಸಿದ್ದ. ಪ್ರತಿ ತಿಂಗಳು ₹ 25 ಸಾವಿರ ಇಎಂಐ ಕಟ್ಟುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಚಾಲನೆ ಮಾಡಬೇಡ ಎಂದು ತಿಳಿಸಿದ್ದೆವು. ಇಎಂಐ ಕಟ್ಟಬೇಕೆಂದು ರಾತ್ರಿಯೂ ಕ್ಯಾಬ್ ಓಡಿಸುತ್ತಿದ್ದ’ ಎಂದು ಅಂಬದಾಸ್ ತಾಯಿ ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕುರುಬರಹಳ್ಳಿಯಲ್ಲಿ ಗುರುವಾರ ರಾತ್ರಿ ಸಿಎನ್ಜಿ ಚಾಲಿತ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಮಲಗಿದ್ದ ಚಾಲಕ ಸಜೀವ ದಹನ ಆಗಿದ್ದಾರೆ. ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.</p>.<p>ಅಂಬದಾಸ್ (23) ಮೃತಪಟ್ಟ ಕ್ಯಾಬ್ ಚಾಲಕ.</p>.<p>ಕಬ್ಬಿಣ ತುಂಬಿದ ಲಾರಿ, ಚಾಲಕನ ನಿಯಂತ್ರಣ ತಪ್ಪಿ, ರಸ್ತೆಬದಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು, ಪಕ್ಕದಲ್ಲಿದ್ದ ಗೋದಾಮಿಗೆ ನುಗ್ಗಿದೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲಿ ಮಲಗಿದ್ದ ಅಂಬದಾಸ್ ಅವರು ಹೊರಕ್ಕೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.</p>.<p>ಅಂಬದಾಸ್ ಅವರು ಕುಟುಂಬದವರ ಜತೆಗೆ ಕುರುಬರಹಳ್ಳಿಯಲ್ಲಿ ವಾಸಿಸುತ್ತಿದ್ದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ರಾತ್ರಿ ಪ್ರಯಾಣಿಕರನ್ನು ಬಿಟ್ಟು ಕುರುಬರಹಳ್ಳಿಯ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿದ್ರೆ ಮಾಡುತ್ತಿದ್ದರು. ಆಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.</p>.<p>ಘಟನೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಕ್ಯಾಬ್ ಚಾಲಕನನ್ನು ರಕ್ಷಿಸಲು ಸಾಧ್ಯ ಆಗಲಿಲ್ಲ. ರಾಜಾಜಿನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.</p>.<p><strong>ಕಿರಿದಾದ ರಸ್ತೆಗೆ ಬಂದಿದ್ದ ಲಾರಿ ಚಾಲಕ:</strong> ಆಂಧ್ರಪ್ರದೇಶದಿಂದ ಸುಂಕದಕಟ್ಟೆಗೆ ಕಬ್ಬಿಣ ತುಂಬಿಕೊಂಡು ಲಾರಿ ಬರುತ್ತಿತ್ತು. ಲಾರಿ ಚಾಲಕ ಶರ್ಮಾ, ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ. ಮ್ಯಾಪ್ನಲ್ಲಿ ಕುರುಬರಹಳ್ಳಿ ಮೂಲಕ ರಸ್ತೆ ತೋರಿಸಿತ್ತು. ಈ ಪ್ರದೇಶದಲ್ಲಿ ಬಹುತೇಕ ಇಳಿಜಾರು ಹಾಗೂ ಕಿರಿದಾದ ರಸ್ತೆಗಳಿವೆ. ಲಾರಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.</p>.<p>‘ಸಾಲ ಮಾಡಿಕೊಂಡು ಕಾರು ಖರೀದಿಸಿದ್ದ. ಪ್ರತಿ ತಿಂಗಳು ₹ 25 ಸಾವಿರ ಇಎಂಐ ಕಟ್ಟುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಚಾಲನೆ ಮಾಡಬೇಡ ಎಂದು ತಿಳಿಸಿದ್ದೆವು. ಇಎಂಐ ಕಟ್ಟಬೇಕೆಂದು ರಾತ್ರಿಯೂ ಕ್ಯಾಬ್ ಓಡಿಸುತ್ತಿದ್ದ’ ಎಂದು ಅಂಬದಾಸ್ ತಾಯಿ ಕಣ್ಣೀರಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>