‘ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ, ಕ್ಷಿಪ್ರ ನಗರೀಕರಣ, ಒತ್ತುವರಿ ಮತ್ತಿತರ ಅಂಶಗಳು ಬೆಂಗಳೂರಿನಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿವೆ ಎಂದು ಬಿಬಿಎಂಪಿಯು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.ನಗರ ಸಾರಿಗೆ, ರಸ್ತೆಗಳು, ಬಡಾವಣೆ ರಚನೆ, ಎಸ್ಇಜೆಡ್, ಐಟಿ ಪಾರ್ಕ್ಗಳಂತಹ ಮೂಲಸೌಕರ್ಯಗಳನ್ನು ಒದಗಿಸುವ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಅಂತರ್ಜಲ ಕುಸಿತ ಹಾಗೂ ಪ್ರವಾಹಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ 859 ಕಿ.ಮೀ. ಉದ್ದದ ಪ್ರಾಥಮಿಕ ಹಾಗೂ ಎರಡನೇ ಹಂತದ ರಾಜಕಾಲುವೆ ಜಾಲ ಇದೆ’ ಎಂದು ಅವರು ಹೇಳಿದ್ದಾರೆ.