200 ಮನೆಗೆ ಒಬ್ಬರಂತೆ ಒಟ್ಟು 4300 ಗಣತಿದಾರರನ್ನು ನಗರ ಜಿಲ್ಲೆಯಲ್ಲಿ ನೇಮಕ ಮಾಡಲಾಗಿದೆ. ಇವರು ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿದರೆ ಗಣತಿದಾರರ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಗಣತಿಗಾಗಿ ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿದೆ. ಎಲ್ಲ ಮಾಹಿತಿಯನ್ನು ಗಣತಿದಾರರು ಅದರಲ್ಲೇ ನಮೂದಿಸಲಿದ್ದಾರೆ. ಇದರಿಂದ ಗಣತಿದಾರರ ಕೆಲಸ ಸುಲಭವಾಗಲಿದೆ ಅಲ್ಲದೆ ಜನಗಣತಿಯ ಮಾಹಿತಿಯೂ ಬೇಗ ಸಿಗಲಿದೆ ಎಂದು ಅಂದಾಜಿಸಲಾಗಿದೆ.