<p><strong>ಬೆಂಗಳೂರು:</strong> ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಬೀದಿ ನಾಯಿಗಳ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ 2,600 ಶ್ವಾನಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.</p>.<p>ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು 2025ರ ಡಿಸೆಂಬರ್ನಿಂದಲೇ ಆಶ್ರಯ ಕೇಂದ್ರಗಳನ್ನು ನಿರ್ಮಿಸುತ್ತಿರುವ ನಗರ ಪಾಲಿಕೆಗಳು, ಈ ಕಾಮಗಾರಿಗಳಿಗೆ ವೇಗ ನೀಡಲು ಇದೀಗ ನಿರ್ಧರಿಸಿವೆ.</p>.<p>ಐದೂ ನಗರ ಪಾಲಿಕೆಗಳಲ್ಲಿ ತಲಾ 500 ಬೀದಿ ನಾಯಿಗಳಿಗೆ ಅವಕಾಶವಿರುವ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ದಕ್ಷಿಣ ನಗರ ಪಾಲಿಕೆ ಬಿಂಗಿಪುರದಲ್ಲಿ ಈಗಾಗಲೇ 100 ನಾಯಿಗಳಿಗೆ ಆಶ್ರಯ ಕಲ್ಪಿಸಿದೆ.</p>.<p>ಆಶ್ರಯ ಕೇಂದ್ರಗಳಲ್ಲಿ ಎನ್ಜಿಒಗಳು ನಾಯಿಗಳ ಆರೈಕೆ ಮಾಡಲಿವೆ. ಆಹಾರ ನೀಡುವ ಜೊತೆಗೆ ವೈದ್ಯರನ್ನೂ ಒದಗಿಸಲಾಗುತ್ತದೆ. ಪ್ರತಿಯೊಂದು ಬೀದಿ ನಾಯಿಗೆ ಪ್ರತಿ ತಿಂಗಳಿಗೆ ₹3,035 ವೆಚ್ಚವಾಗಲಿದ್ದು, ನಗರ ಪಾಲಿಕೆಗಳು ಇದನ್ನು ಭರಿಸಲಿವೆ. ಇದಲ್ಲದೆ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಆಶ್ರಯ ಕೇಂದ್ರಕ್ಕೆ ಬೀದಿ ನಾಯಿಯೊಂದನ್ನು ತಲುಪಿಸಲು ಸಿಬ್ಬಂದಿಗೆ ₹300 ನೀಡಲಾಗುತ್ತದೆ. ನಗರದಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ.</p>.<p>‘ಗುರುತಿಸಲಾಗಿರುವ ನಾಯಿಗಳನ್ನು ನಾವು ಕೇಂದ್ರಗಳಿಗೆ ಸಾಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೇಂದ್ರಗಳಲ್ಲಿ ನಾಯಿಗಳ ಆರೈಕೆಗೆ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಉತ್ತರ ನಗರ ಪಾಲಿಕೆಗಳಲ್ಲಿ ನಿರ್ಮಿಸುತ್ತಿರುವ ಆಶ್ರಯ ತಾಣಗಳು ಮೇ ಅಂತ್ಯಕ್ಕೆ ಸಿದ್ಧವಾಗಲಿವೆ. ಕೇಂದ್ರ, ಪೂರ್ವ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜೂನ್ ಅಂತ್ಯಕ್ಕೆ ಕೇಂದ್ರಗಳು ನಿರ್ಮಾಣವಾಗಲಿವೆ. ಪಶ್ಚಿಮ ನಗರ ಪಾಲಿಕೆಯಲ್ಲಿ ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.</p>.<p>ಎಬಿಸಿ: ‘ಬೆಂಗಳೂರಿನಲ್ಲಿ ಪ್ರಾಣಿಗಳ ಸಂತಾನಶಕ್ತಿಹರಣ (ಎಬಿಸಿ) ಕಾರ್ಯಕ್ರಮ ಎಲ್ಲ ರೀತಿಯ ಕಾನೂನುಗಳನ್ನು ಮೀರಿ ನಡೆಯುತ್ತಿದೆ. ಕೆಲವು ಕೇಂದ್ರಗಳಲ್ಲಿ ಅಗತ್ಯ ಸಮ್ಮತಿಗಳನ್ನು ಪಡೆಯದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಪ್ರಾಣಿಪ್ರಿಯ ಕಾರ್ಯಕರ್ತ ಅರುಣ್ ಪ್ರಸಾದ್ ಹೇಳಿದರು.</p>.<p>ಎಬಿಸಿ ನಿಯಮ 2023ರಂತೆ ಎಬಿಸಿ ಕೇಂದ್ರಗಳು ಯೋಜನಾ ಅನುಷ್ಠಾನದ ಪ್ರಮಾಣಪತ್ರವನ್ನು ಪಡೆಯಬೇಕು. ಆದರೆ ಇಂತಹ ಪ್ರಮಾಣ ಪತ್ರ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ನಡೆಸಲಾಗುತ್ತಿರುವ ‘ಸ್ಟೆರ್ಲೈಸೇಷನ್’, ‘ವ್ಯಾಕ್ಸಿನೇಷನ್’ ಸೂಕ್ತವಾಗಿ ನಡೆಸುತ್ತಿಲ್ಲ, ಅದು ಹಳತಾಗಿದೆ ಎಂಬುದು ನಾಯಿ ಗಣತಿಯ ಅಂಕಿ–ಅಂಶವೇ ಹೇಳುತ್ತದೆ’ ಎಂದರು.</p>.<h2> ಪಶುವೈದ್ಯ ಸಿಬ್ಬಂದಿ ಕೊರತೆ </h2><p>ಜಿಬಿಎ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪಶುವೈದ್ಯರು ಹಾಗೂ ಅರೆಪಶುವೈದ್ಯ ಸಿಬ್ಬಂದಿ ಕೊರತೆ ಇದೆ. 19 ಪಶುವೈದ್ಯರು ಹಾಗೂ 16 ಅರೆ ಪಶುವೈದ್ಯ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕನಿಷ್ಠ 36 ಅರೆಪಶುವೈದ್ಯ ಸಿಬ್ಬಂದಿಯ ಅಗತ್ಯವಿದೆ ಎನ್ನಲಾಗಿದೆ. ಪ್ರಾಣಿಗಳ ಸಂತಾನಶಕ್ತಿ ಹರಣ (ಎಬಿಸಿ) ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವ ತಜ್ಞರು ಹಾಗೂ ವೈದ್ಯರೊಂದಿಗೆ ಅರೆ ಪಶುವೈದ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಈ ಸಿಬ್ಬಂದಿಗೆ ಪ್ರಮುಖವಾದ ಪಾತ್ರವಿದೆ. ‘ನಾಯಿಗಳ ಕಡಿತ ಅಥವಾ ಹಾವಳಿ ಬಗ್ಗೆ ದೂರು ಬಂದಾಗ ಈ ಸಿಬ್ಬಂದಿಯೇ ಮೊದಲು ಸ್ಥಳಕ್ಕೆ ಹೋಗುವುದು’ ಎಂದು ಅರೆ ಪಶುವೈದ್ಯ ಸಿಬ್ಬಂದಿಯೊಬ್ಬರು ಹೇಳಿದರು. ಜಿಬಿಎ ವ್ಯಾಪ್ತಿಯಲ್ಲಿರುವ ಪಶುವೈದ್ಯ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಂದು ಪಾಲಿಕೆಗೆ ಪ್ರತ್ಯೇಕ ಸಿಬ್ಬಂದಿ ಕಲ್ಪಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ‘ಪಶುವೈದ್ಯ ಸಿಬ್ಬಂದಿ ಕೊರತೆ ಇರುವುದು ನಿಜ. ಪಶುವೈದ್ಯರು ಅಥವಾ ನಿವೃತ್ತ ವೈದ್ಯರನ್ನು ನೇಮಿಸಿಕೊಳ್ಳಲು ಚಿಂತಿಸಲಾಗುತ್ತಿದೆ. ಶೀಘ್ರವೇ ಕ್ರಮಕೈಗೊಳ್ಳುತ್ತೇವೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು. </p>.<h2> ಕಾನೂನು ಪ್ರಕಾರ ದಯಾಮರಣ: ಮಹೇಶ್ವರ್ ರಾವ್</h2><p>ಸುಪ್ರಿಂ ಕೋರ್ಟ್ ಮೇ 19ರಂದು ನೀಡಿರುವ ಆದೇಶ ಪಾಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬದ್ಧವಾಗಿದ್ದು ಅದರ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು. ಶಿಕ್ಷಣ ಸಂಸ್ಥೆ ಆಸ್ಪತ್ರೆ ಕ್ರೀಡಾ ಸಂಕೀರ್ಣ ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣದಲ್ಲಿರುವ ಬೀದಿ ನಾಯಿಗಳ ಸ್ಥಳಾಂತರ ಸೇರಿದಂತೆ ಭಾರತೀಯ ಕಲ್ಯಾಣ ಮಂಡಳಿಯ ಪ್ರಮಾಣಿತ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣ ಪ್ರಗತಿಯಲ್ಲಿದೆ ಮತ್ತು ಆಶ್ರಯ ತಾಣ ನಿರ್ವಹಣೆ ಮಾಡಲು ಸೇವಾದಾರರ ಆಯ್ಕೆ ಪ್ರಗತಿಯಲ್ಲಿದೆ ಎಂದರು. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಅಥವಾ ಪದೇ ಪದೇ ನಾಯಿ ಕಡಿತ ಹಾಗೂ ಆಕ್ರಮಣಕಾರಿ ವರ್ತನೆಯಿಂದ ಸಾರ್ವಜನಿಕರ ಸುರಕ್ಷತೆಗೆ ತೊಂದರೆ ಇರುವ ಸ್ಥಳಗಳಲ್ಲಿ ತಜ್ಞ ಪಶುವೈದ್ಯರಿಂದ ದೃಢೀಕರಣಕ್ಕೊಳಪಟ್ಟು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಪ್ರಾಣಿಜನನ ನಿಯಮಗಳು 2023 ಮತ್ತು ಇತರೆ ಶಾಸನಬದ್ಧ ನಿಬಂಧನೆಗಳಿಗೆ ಅನುಸಾರವಾಗಿ ಗುಣಪಡಿಸಲಾಗದಷ್ಟು ಅನಾರೋಗ್ಯಕ್ಕೊಳಪಟ್ಟ ನಾಯಿ ರೇಬೀಸ್ ನಾಯಿ ಆಕ್ರಮಣಕಾರಿ/ಅಪಾಯಕಾರಿ ನಾಯಿಗಳ ಪ್ರಕರಣಗಳಲ್ಲಿ ದಯಾಮರಣ ಸೇರಿದಂತೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಬೀದಿ ನಾಯಿಗಳ ಆಶ್ರಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಒಟ್ಟಾರೆ 2,600 ಶ್ವಾನಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.</p>.<p>ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲು 2025ರ ಡಿಸೆಂಬರ್ನಿಂದಲೇ ಆಶ್ರಯ ಕೇಂದ್ರಗಳನ್ನು ನಿರ್ಮಿಸುತ್ತಿರುವ ನಗರ ಪಾಲಿಕೆಗಳು, ಈ ಕಾಮಗಾರಿಗಳಿಗೆ ವೇಗ ನೀಡಲು ಇದೀಗ ನಿರ್ಧರಿಸಿವೆ.</p>.<p>ಐದೂ ನಗರ ಪಾಲಿಕೆಗಳಲ್ಲಿ ತಲಾ 500 ಬೀದಿ ನಾಯಿಗಳಿಗೆ ಅವಕಾಶವಿರುವ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ದಕ್ಷಿಣ ನಗರ ಪಾಲಿಕೆ ಬಿಂಗಿಪುರದಲ್ಲಿ ಈಗಾಗಲೇ 100 ನಾಯಿಗಳಿಗೆ ಆಶ್ರಯ ಕಲ್ಪಿಸಿದೆ.</p>.<p>ಆಶ್ರಯ ಕೇಂದ್ರಗಳಲ್ಲಿ ಎನ್ಜಿಒಗಳು ನಾಯಿಗಳ ಆರೈಕೆ ಮಾಡಲಿವೆ. ಆಹಾರ ನೀಡುವ ಜೊತೆಗೆ ವೈದ್ಯರನ್ನೂ ಒದಗಿಸಲಾಗುತ್ತದೆ. ಪ್ರತಿಯೊಂದು ಬೀದಿ ನಾಯಿಗೆ ಪ್ರತಿ ತಿಂಗಳಿಗೆ ₹3,035 ವೆಚ್ಚವಾಗಲಿದ್ದು, ನಗರ ಪಾಲಿಕೆಗಳು ಇದನ್ನು ಭರಿಸಲಿವೆ. ಇದಲ್ಲದೆ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಆಶ್ರಯ ಕೇಂದ್ರಕ್ಕೆ ಬೀದಿ ನಾಯಿಯೊಂದನ್ನು ತಲುಪಿಸಲು ಸಿಬ್ಬಂದಿಗೆ ₹300 ನೀಡಲಾಗುತ್ತದೆ. ನಗರದಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ.</p>.<p>‘ಗುರುತಿಸಲಾಗಿರುವ ನಾಯಿಗಳನ್ನು ನಾವು ಕೇಂದ್ರಗಳಿಗೆ ಸಾಗಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೇಂದ್ರಗಳಲ್ಲಿ ನಾಯಿಗಳ ಆರೈಕೆಗೆ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಉತ್ತರ ನಗರ ಪಾಲಿಕೆಗಳಲ್ಲಿ ನಿರ್ಮಿಸುತ್ತಿರುವ ಆಶ್ರಯ ತಾಣಗಳು ಮೇ ಅಂತ್ಯಕ್ಕೆ ಸಿದ್ಧವಾಗಲಿವೆ. ಕೇಂದ್ರ, ಪೂರ್ವ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಜೂನ್ ಅಂತ್ಯಕ್ಕೆ ಕೇಂದ್ರಗಳು ನಿರ್ಮಾಣವಾಗಲಿವೆ. ಪಶ್ಚಿಮ ನಗರ ಪಾಲಿಕೆಯಲ್ಲಿ ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.</p>.<p>ಎಬಿಸಿ: ‘ಬೆಂಗಳೂರಿನಲ್ಲಿ ಪ್ರಾಣಿಗಳ ಸಂತಾನಶಕ್ತಿಹರಣ (ಎಬಿಸಿ) ಕಾರ್ಯಕ್ರಮ ಎಲ್ಲ ರೀತಿಯ ಕಾನೂನುಗಳನ್ನು ಮೀರಿ ನಡೆಯುತ್ತಿದೆ. ಕೆಲವು ಕೇಂದ್ರಗಳಲ್ಲಿ ಅಗತ್ಯ ಸಮ್ಮತಿಗಳನ್ನು ಪಡೆಯದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ’ ಎಂದು ಪ್ರಾಣಿಪ್ರಿಯ ಕಾರ್ಯಕರ್ತ ಅರುಣ್ ಪ್ರಸಾದ್ ಹೇಳಿದರು.</p>.<p>ಎಬಿಸಿ ನಿಯಮ 2023ರಂತೆ ಎಬಿಸಿ ಕೇಂದ್ರಗಳು ಯೋಜನಾ ಅನುಷ್ಠಾನದ ಪ್ರಮಾಣಪತ್ರವನ್ನು ಪಡೆಯಬೇಕು. ಆದರೆ ಇಂತಹ ಪ್ರಮಾಣ ಪತ್ರ ಇಲ್ಲದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ನಡೆಸಲಾಗುತ್ತಿರುವ ‘ಸ್ಟೆರ್ಲೈಸೇಷನ್’, ‘ವ್ಯಾಕ್ಸಿನೇಷನ್’ ಸೂಕ್ತವಾಗಿ ನಡೆಸುತ್ತಿಲ್ಲ, ಅದು ಹಳತಾಗಿದೆ ಎಂಬುದು ನಾಯಿ ಗಣತಿಯ ಅಂಕಿ–ಅಂಶವೇ ಹೇಳುತ್ತದೆ’ ಎಂದರು.</p>.<h2> ಪಶುವೈದ್ಯ ಸಿಬ್ಬಂದಿ ಕೊರತೆ </h2><p>ಜಿಬಿಎ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪಶುವೈದ್ಯರು ಹಾಗೂ ಅರೆಪಶುವೈದ್ಯ ಸಿಬ್ಬಂದಿ ಕೊರತೆ ಇದೆ. 19 ಪಶುವೈದ್ಯರು ಹಾಗೂ 16 ಅರೆ ಪಶುವೈದ್ಯ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕನಿಷ್ಠ 36 ಅರೆಪಶುವೈದ್ಯ ಸಿಬ್ಬಂದಿಯ ಅಗತ್ಯವಿದೆ ಎನ್ನಲಾಗಿದೆ. ಪ್ರಾಣಿಗಳ ಸಂತಾನಶಕ್ತಿ ಹರಣ (ಎಬಿಸಿ) ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವ ತಜ್ಞರು ಹಾಗೂ ವೈದ್ಯರೊಂದಿಗೆ ಅರೆ ಪಶುವೈದ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಈ ಸಿಬ್ಬಂದಿಗೆ ಪ್ರಮುಖವಾದ ಪಾತ್ರವಿದೆ. ‘ನಾಯಿಗಳ ಕಡಿತ ಅಥವಾ ಹಾವಳಿ ಬಗ್ಗೆ ದೂರು ಬಂದಾಗ ಈ ಸಿಬ್ಬಂದಿಯೇ ಮೊದಲು ಸ್ಥಳಕ್ಕೆ ಹೋಗುವುದು’ ಎಂದು ಅರೆ ಪಶುವೈದ್ಯ ಸಿಬ್ಬಂದಿಯೊಬ್ಬರು ಹೇಳಿದರು. ಜಿಬಿಎ ವ್ಯಾಪ್ತಿಯಲ್ಲಿರುವ ಪಶುವೈದ್ಯ ವಿಭಾಗದಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಂದು ಪಾಲಿಕೆಗೆ ಪ್ರತ್ಯೇಕ ಸಿಬ್ಬಂದಿ ಕಲ್ಪಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ‘ಪಶುವೈದ್ಯ ಸಿಬ್ಬಂದಿ ಕೊರತೆ ಇರುವುದು ನಿಜ. ಪಶುವೈದ್ಯರು ಅಥವಾ ನಿವೃತ್ತ ವೈದ್ಯರನ್ನು ನೇಮಿಸಿಕೊಳ್ಳಲು ಚಿಂತಿಸಲಾಗುತ್ತಿದೆ. ಶೀಘ್ರವೇ ಕ್ರಮಕೈಗೊಳ್ಳುತ್ತೇವೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದರು. </p>.<h2> ಕಾನೂನು ಪ್ರಕಾರ ದಯಾಮರಣ: ಮಹೇಶ್ವರ್ ರಾವ್</h2><p>ಸುಪ್ರಿಂ ಕೋರ್ಟ್ ಮೇ 19ರಂದು ನೀಡಿರುವ ಆದೇಶ ಪಾಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬದ್ಧವಾಗಿದ್ದು ಅದರ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು. ಶಿಕ್ಷಣ ಸಂಸ್ಥೆ ಆಸ್ಪತ್ರೆ ಕ್ರೀಡಾ ಸಂಕೀರ್ಣ ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣದಲ್ಲಿರುವ ಬೀದಿ ನಾಯಿಗಳ ಸ್ಥಳಾಂತರ ಸೇರಿದಂತೆ ಭಾರತೀಯ ಕಲ್ಯಾಣ ಮಂಡಳಿಯ ಪ್ರಮಾಣಿತ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣ ಪ್ರಗತಿಯಲ್ಲಿದೆ ಮತ್ತು ಆಶ್ರಯ ತಾಣ ನಿರ್ವಹಣೆ ಮಾಡಲು ಸೇವಾದಾರರ ಆಯ್ಕೆ ಪ್ರಗತಿಯಲ್ಲಿದೆ ಎಂದರು. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಅಥವಾ ಪದೇ ಪದೇ ನಾಯಿ ಕಡಿತ ಹಾಗೂ ಆಕ್ರಮಣಕಾರಿ ವರ್ತನೆಯಿಂದ ಸಾರ್ವಜನಿಕರ ಸುರಕ್ಷತೆಗೆ ತೊಂದರೆ ಇರುವ ಸ್ಥಳಗಳಲ್ಲಿ ತಜ್ಞ ಪಶುವೈದ್ಯರಿಂದ ದೃಢೀಕರಣಕ್ಕೊಳಪಟ್ಟು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಪ್ರಾಣಿಜನನ ನಿಯಮಗಳು 2023 ಮತ್ತು ಇತರೆ ಶಾಸನಬದ್ಧ ನಿಬಂಧನೆಗಳಿಗೆ ಅನುಸಾರವಾಗಿ ಗುಣಪಡಿಸಲಾಗದಷ್ಟು ಅನಾರೋಗ್ಯಕ್ಕೊಳಪಟ್ಟ ನಾಯಿ ರೇಬೀಸ್ ನಾಯಿ ಆಕ್ರಮಣಕಾರಿ/ಅಪಾಯಕಾರಿ ನಾಯಿಗಳ ಪ್ರಕರಣಗಳಲ್ಲಿ ದಯಾಮರಣ ಸೇರಿದಂತೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>