<p>ಬೆಂಗಳೂರು: ಲಾಲ್ಬಾಗ್ನಲ್ಲಿ ಹಾಗೂ ಅದರ ಕೆಳಗೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಯಿಂದ ಜಿಯೊ–ಪಾರಂಪರಿಕ ತಾಣದ ನಿಯಮಗಳು ಉಲ್ಲಂಘನೆಯಾಗುವ ಜತೆಗೆ, ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಲಿದೆ ಎಂದು ನಾಗರಿಕರ ಸಂಘಗಳು ಹಾಗೂ ಪರಿಸರ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದರು.</p>.<p>ಉತ್ತರ–ದಕ್ಷಿಣ ಸುರಂಗ ರಸ್ತೆ ಯೋಜನೆ ಬಗ್ಗೆ ಭಾರತೀಯ ಭೂವಿಜ್ಞಾನ ಸಮೀಕ್ಷೆಯ (ಜಿಎಸ್ಐ) ಹಿರಿಯ ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.</p>.<p>ಸುರಂಗ ರಸ್ತೆಯಿಂದ ಲಾಲ್ಬಾಗ್ನ ಐತಿಹಾಸಿಕ ಬಂಡೆಯ ಮೇಲಾಗುವ ಪರಿಣಾಮವನ್ನು ಜಿಎಸ್ಐನ ಉನ್ನತ ಮಟ್ಟದ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಲಾಲ್ಬಾಗ್ನೊಳಗೆ 60 ಮೀಟರ್ ಕೆಳಗೆ ಸುರಂಗ ಕೊರೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಬಂಡೆ ಪಾರಂಪರಿಕ ತಾಣವಾಗಿದ್ದು, 1975ರಲ್ಲಿ ಜಿಎಸ್ಐ ಅಧಿಸೂಚನೆಯಾಗಿದೆ. ಪಾರಂಪರಿಕ ತಾಣಗಳ ಕಾಯ್ದೆ ಪ್ರಕಾರ ಇದನ್ನು ರಕ್ಷಿಸಬೇಕು. ಈ ಪ್ರದೇಶವನ್ನು ನಿರ್ಮಾಣರಹಿತ ವಲಯವನ್ನಾಗಿ ಘೋಷಿಸಬೇಕು’ ಎಂದು ನಾಗರಿಕರು ಆಗ್ರಹಿಸಿದರು.</p>.<p>‘ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಲಾಲ್ಬಾಗ್ನಂತಹ ಹಸಿರು ಪ್ರದೇಶವನ್ನು ನಗರ ಮೂಲಸೌಕರ್ಯಕ್ಕಾಗಿ ಉಪಯೋಗಿಸಿಕೊಂಡರೆ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ’ ಎಂದರು.</p>.<p>‘ಲಾಲ್ಬಾಗ್ ಪ್ರದೇಶದ ಜಿಯೊ–ಪಾರಂಪರಿಕ ತಾಣಕ್ಕೆ ಸಂಬಂಧಿಸಿದ ಅತ್ಯುನ್ನತ ಚಿತ್ರಗಳು ಸೇರಿದಂತೆ ಎಲ್ಲ ಮಾಹಿತಿಗಳನ್ನು ಜಿಎಸ್ಐನ ಪ್ರಧಾನ ಕಚೇರಿ ಹಾಗೂ ನವದೆಹಲಿಯಲ್ಲಿರುವ ಯುನೆಸ್ಕೊ ತಂಡಕ್ಕೆ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ತಜ್ಞರ ತಂಡವು ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಪರಿಶೀಲನೆ ನಡೆಸಿತ್ತು. ಕೆಎಂಎಲ್ ಕಡತ ಸಿದ್ಧವಾಗುವುದಕ್ಕೆ ಅಧಿಕಾರಿಗಳು ಕಾಯುತ್ತಿದ್ದು, ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ (ಬಿಎಂಆರ್ಸಿಎಲ್) ಹಾಗೂ ಬಿ–ಸ್ಮೈಲ್ನಿಂದ ಸಂಪೂರ್ಣ ಮೌಲ್ಯಮಾಪನದ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ.</p>.<p>ಸಿಟಿಜನ್ 4 ಸಿಟಿಜನ್ಸ್, ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಗ್ರೂಪ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್, ಪರಿಸರಕ್ಕಾಗಿ ನಾವು, ಹಸಿರು ರಥ, ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಲಾಲ್ಬಾಗ್ ವಾಕರ್ಸ್, ಬೆಂಗಳೂರು ಟೌನ್ ಹಾಲ್ನ ಪ್ರತಿನಿಧಿಗಳು ಲಾಲ್ಬಾಗ್ ಉಳಿಸುವಂತೆ ಮನವಿ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-4-1834096281</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಲಾಲ್ಬಾಗ್ನಲ್ಲಿ ಹಾಗೂ ಅದರ ಕೆಳಗೆ ನಿರ್ಮಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಯಿಂದ ಜಿಯೊ–ಪಾರಂಪರಿಕ ತಾಣದ ನಿಯಮಗಳು ಉಲ್ಲಂಘನೆಯಾಗುವ ಜತೆಗೆ, ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಲಿದೆ ಎಂದು ನಾಗರಿಕರ ಸಂಘಗಳು ಹಾಗೂ ಪರಿಸರ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದರು.</p>.<p>ಉತ್ತರ–ದಕ್ಷಿಣ ಸುರಂಗ ರಸ್ತೆ ಯೋಜನೆ ಬಗ್ಗೆ ಭಾರತೀಯ ಭೂವಿಜ್ಞಾನ ಸಮೀಕ್ಷೆಯ (ಜಿಎಸ್ಐ) ಹಿರಿಯ ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.</p>.<p>ಸುರಂಗ ರಸ್ತೆಯಿಂದ ಲಾಲ್ಬಾಗ್ನ ಐತಿಹಾಸಿಕ ಬಂಡೆಯ ಮೇಲಾಗುವ ಪರಿಣಾಮವನ್ನು ಜಿಎಸ್ಐನ ಉನ್ನತ ಮಟ್ಟದ ತಜ್ಞರ ಸಮಿತಿ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಲಾಲ್ಬಾಗ್ನೊಳಗೆ 60 ಮೀಟರ್ ಕೆಳಗೆ ಸುರಂಗ ಕೊರೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಲ್ಲಿನ ಬಂಡೆ ಪಾರಂಪರಿಕ ತಾಣವಾಗಿದ್ದು, 1975ರಲ್ಲಿ ಜಿಎಸ್ಐ ಅಧಿಸೂಚನೆಯಾಗಿದೆ. ಪಾರಂಪರಿಕ ತಾಣಗಳ ಕಾಯ್ದೆ ಪ್ರಕಾರ ಇದನ್ನು ರಕ್ಷಿಸಬೇಕು. ಈ ಪ್ರದೇಶವನ್ನು ನಿರ್ಮಾಣರಹಿತ ವಲಯವನ್ನಾಗಿ ಘೋಷಿಸಬೇಕು’ ಎಂದು ನಾಗರಿಕರು ಆಗ್ರಹಿಸಿದರು.</p>.<p>‘ಬೆಂಗಳೂರಿನಲ್ಲಿ ಹಸಿರು ಹೊದಿಕೆ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಲಾಲ್ಬಾಗ್ನಂತಹ ಹಸಿರು ಪ್ರದೇಶವನ್ನು ನಗರ ಮೂಲಸೌಕರ್ಯಕ್ಕಾಗಿ ಉಪಯೋಗಿಸಿಕೊಂಡರೆ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ’ ಎಂದರು.</p>.<p>‘ಲಾಲ್ಬಾಗ್ ಪ್ರದೇಶದ ಜಿಯೊ–ಪಾರಂಪರಿಕ ತಾಣಕ್ಕೆ ಸಂಬಂಧಿಸಿದ ಅತ್ಯುನ್ನತ ಚಿತ್ರಗಳು ಸೇರಿದಂತೆ ಎಲ್ಲ ಮಾಹಿತಿಗಳನ್ನು ಜಿಎಸ್ಐನ ಪ್ರಧಾನ ಕಚೇರಿ ಹಾಗೂ ನವದೆಹಲಿಯಲ್ಲಿರುವ ಯುನೆಸ್ಕೊ ತಂಡಕ್ಕೆ ನೀಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನ ತಜ್ಞರ ತಂಡವು ಮಾರ್ಚ್ 31ರಿಂದ ಏಪ್ರಿಲ್ 2ರವರೆಗೆ ಪರಿಶೀಲನೆ ನಡೆಸಿತ್ತು. ಕೆಎಂಎಲ್ ಕಡತ ಸಿದ್ಧವಾಗುವುದಕ್ಕೆ ಅಧಿಕಾರಿಗಳು ಕಾಯುತ್ತಿದ್ದು, ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಷನ್ (ಬಿಎಂಆರ್ಸಿಎಲ್) ಹಾಗೂ ಬಿ–ಸ್ಮೈಲ್ನಿಂದ ಸಂಪೂರ್ಣ ಮೌಲ್ಯಮಾಪನದ ವರದಿಯನ್ನು ನಿರೀಕ್ಷಿಸುತ್ತಿದ್ದಾರೆ.</p>.<p>ಸಿಟಿಜನ್ 4 ಸಿಟಿಜನ್ಸ್, ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಗ್ರೂಪ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್, ಪರಿಸರಕ್ಕಾಗಿ ನಾವು, ಹಸಿರು ರಥ, ಬಸವನಗುಡಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಲಾಲ್ಬಾಗ್ ವಾಕರ್ಸ್, ಬೆಂಗಳೂರು ಟೌನ್ ಹಾಲ್ನ ಪ್ರತಿನಿಧಿಗಳು ಲಾಲ್ಬಾಗ್ ಉಳಿಸುವಂತೆ ಮನವಿ ಸಲ್ಲಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260410-4-1834096281</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>