ಕರ್ನಾಟಕದಲ್ಲಿ ಶಿಕ್ಷಣ, ಉದ್ಯೋಗದ ನಡುವಿನ ಅಂತರ ತಗ್ಗಿಸಲು ಕ್ಯಾಂಪಸ್ ಟು ಕರಿಯರ್ ಚಟುವಟಿಕೆ ಆರಂಭಿಸಲಾಗಿದೆ. ಮೇ 15 ಮತ್ತು 16ರಂದು ಕೌಶಲ, ಉದ್ಯೋಗ, ಉದ್ಯಮಶೀಲತೆ ಕುರಿತು ಜಾಗೃತಿ ಮೂಡಿಸಲು ಸಮ್ಮೇಳನ ಆಯೋಜಿಸಲಾಗುತ್ತಿದೆ
ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಬರುವ ಶೈಕ್ಷಣಿಕ ವರ್ಷದಲ್ಲಿ ಆರು ಹೊಸ ಕೋರ್ಸ್ ಆರಂಭಿಸಲಿದೆ. ಇದರಲ್ಲಿ ಬಿ.ಎಸ್ಸಿ ಹಾಗೂ ಎಂ.ಎಸ್ಸಿ ಡೇಟಾ ಅನಾಲಿಟಿಕ್ಸ್, ಐದು ವರ್ಷದ ಸಂಯೋಜಿತ ಅರ್ಥಶಾಸ್ತ್ರ, ಎಂ.ಎ ಅರ್ಥಶಾಸ್ತ್ರ, ಎಂ.ಎಸ್ಸಿ ಅಭಿವೃದ್ದಿ ಶಾಸ್ತ್ರ, ಸಾರ್ವಜನಿಕ ನೀತಿ ಕೋರ್ಸ್ ಸೇರಿವೆ. 15ಕ್ಕೂ ಅಧಿಕ ದೇಶ ಹಾಗೂ ವಿದೇಶದ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ