₹ 98,500 ವಂಚನೆ: ‘ಪದ್ಮನಾಭನಗರದ ನಿವಾಸಿ ನಾರಾಯಣ ಅವರಿಗೆ ಜೂನ್ 28ರಂದು ಕರೆ ಬಂದಿತ್ತು. ಬೆಸ್ಕಾಂ ಪ್ರತಿನಿಧಿ ಎಂದಿದ್ದ ಆರೋಪಿ, ಬಿಲ್ ಪಾವತಿಸುವಂತೆ ಹೇಳಿ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಿಸಿದ್ದ. ಆರೋಪಿ ಮಾತು ನಂಬಿದ್ದ ನಾರಾಯಣ, ವೈಯಕ್ತಿಕ ವಿವರ ನಮೂದಿಸಿದ್ದರು. ಇದಾದ ನಂತರ, ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 98,500 ಕಡಿತವಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.