ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿನ 86 ಹಳ್ಳಿಗಳಲ್ಲಿ ಶನಿವಾರ ನಾಲ್ಕನೇ ವಿದ್ಯುತ್ ಅದಾಲತ್ ನಡೆಯಿತು.
ಎರಡು ಸಾವಿರ ಗ್ರಾಹಕರು ಭಾಗವಹಿಸಿ, ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಬೆಸ್ಕಾಂ ಅಧಿಕಾರಿಗಳ ಗಮನ ಸೆಳೆದರು.
ಗ್ರಾಮೀಣ ಭಾಗದ ಗ್ರಾಹಕರಿಂದ ಬೆಸ್ಕಾಂ ಅಧಿಕಾರಿಗಳು 700 ದೂರು ಸ್ವೀಕರಿಸಿದರು. ಬಹುತೇಕ ಮನವಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಉಳಿದ ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಅಸಮರ್ಪಕ ವಿದ್ಯುತ್ ಪೂರೈಕೆ, ವಾಲಿರುವ ವಿದ್ಯುತ್ ಕಂಬಗಳು, ನೀರಾವರಿ ವಿದ್ಯುತ್ ಸಂಪರ್ಕ, ಮಾಪನ, ಬಿಲ್ಲಿಂಗ್, ಟಿ.ಸಿ ಬದಲಾವಣೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯವನ್ನು ವಿದ್ಯುತ್ ಅದಾಲತ್ನಲ್ಲಿ ಮಾಡಲಾಗುತ್ತಿದೆ.