ಎಲೆಕ್ಟ್ರಿಕಲ್ ಗುತ್ತಿಗೆದಾರ ರವೀಂದ್ರ ಜೀತ್ ಸಿಂಗ್ ಎಂಬುವರು ಕಗ್ಗದಾಸನಪುರದಲ್ಲಿ ವಿದ್ಯುತ್ ಮಾರ್ಗ ಪರಿವರ್ತನೆಗೆ ಕೆ.ಜಯಚಂದ್ರ ಅವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ₹2 ಲಕ್ಷ ಲಂಚ ನೀಡಬೇಕೆಂದು ನರೇಶ್ ಬೇಡಿಕೆ ಇಟ್ಟಿದ್ದರು. ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ಎಚ್ಎಎಲ್ ಬಳಿಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಪಡೆಯುವಾಗ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.