‘ನಮ್ಮ ವಿಚಾರದಲ್ಲಿ ಶಾಂತಾರಾಮ್ ಶೆಟ್ಟಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ದೂರುದಾರಾದ ಗುಲಾಬಿ ಶೆಟ್ಟಿ (ಭಾಸ್ಕರ್ ಶೆಟ್ಟಿ ತಾಯಿ) ಅವರ ಮನವಿ ಮೇರೆಗೆ ರಾಜ್ಯ ಗೃಹ ಇಲಾಖೆ ಶಾಂತಾರಾಮ್ ಅವರನ್ನು ಎಸ್ಪಿಪಿಯಾಗಿ ನೇಮಕ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗೋಷ್ಠಿ ನಡೆಸಿ ನಮ್ಮ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ, ಅವರು ಪ್ರಕರಣದಲ್ಲಿ ಎಸ್ಪಿಪಿಯಾಗಿದ್ದರೆ ನಿಷ್ಪಕ್ಷಪಾತ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಗೃಹ ಇಲಾಖೆ ಆದೇಶ ರದ್ದುಪಡಿಸಬೇಕು’ ಎಂದು ಕೋರಿದ್ದರು.