ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ನಾಗೇಶ್, 'ಬೈಬಲ್ ಕಡ್ಡಾಯಗೊಳಿಸಿರುವ ಕ್ಲಾರೆನ್ಸ್ ಶಾಲೆಯ ನಡೆಯು ರಾಜ್ಯ ಶಿಕ್ಷಣ ನೀತಿಯ ಉಲ್ಲಂಘನೆಯಾಗಿದೆ. ಬೇರೆ ಬೋರ್ಡ್ ಶಾಲೆಗಳಿಗೆ ನಿರಾಕ್ಷೇಪಣ ಪತ್ರವನ್ನು ನೀಡುವ ಮೊದಲು ಕಾಯಿದೆಯ ನಿಬಂಧನೆಗಳಿಗೆ ಒಳಪಟ್ಟಿರಬೇಕೆಂದು ಒತ್ತಿಹೇಳುತ್ತೇವೆ. ಧಾರ್ಮಿಕ ಪುಸ್ತಕಗಳನ್ನು ಬೋಧನೆ ಮಾಡಲು ಪ್ರತ್ಯೇಕ ನಿಬಂಧನೆಗಳಿಲ್ಲ. ಇದೆಲ್ಲವೂ ನಿರಾಕ್ಷೇಪಣ ಪತ್ರದಲ್ಲಿ ಉಲ್ಲೇಖಗೊಂಡಿರುತ್ತದೆ' ಎಂದಿದ್ದಾರೆ.