‘ಅಜಲಾಪುರ ಗ್ರಾಮ ಕೊಂಕಲ್ ಹೋಬಳಿ ವ್ಯಾಪ್ತಿಗೆ ಒಳಪಟ್ಟರೆ ಬದ್ದೇಪಲ್ಲಿ ಗ್ರಾಮ ಮತ್ತು ತಾಂಡಾ ಸೈದಾಪುರ ಹೋಬಳಿಗೆ ಸೇರಿದ್ದಾಗಿವೆ. ಕೃಷಿ, ಶಿಕ್ಷಣ, ಪಹಣಿ, ಜಮೀನು ದಾಖಲೆ, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದು ಕಚೇರಿಗಳು ಸೈದಾಪುರ ಹೋಬಳಿ ವ್ಯಾಪ್ತಿಗೆ ಸೇರಿವೆ. ಬದ್ದೇಪಲ್ಲಿ ಗ್ರಾಮಕ್ಕೆ ಅಜಲಾಪುರ ಕೇವಲ ಗ್ರಾಮ ಪಂಚಾಯಿತಿ ಕೇಂದ್ರ ಮಾತ್ರ. ಇನ್ನುಳಿದ ಎಲ್ಲಾ ಇಲಾಖೆಗಳು ಸೈದಾಪುರ ಹೋಬಳಿ ವ್ಯಾಪ್ತಿಗೆ ಒಳಪಡುತ್ತವೆ. ಯಾವುದೇ ಕಾರಣಕ್ಕೂ ಬದ್ದೇಪಲ್ಲಿ ಗ್ರಾಮ ಹಾಗೂ ತಾಂಡಾವನ್ನು ಗುರುಮಠಕಲ್ ತಾಲ್ಲೂಕಿಗೆ ಸೇರಿಸಬಾರದು. ಜಿಲ್ಲಾಡಳಿತ ಜನರಿಗೆ ಮಾಡಿರುವ ಇಂಥಾ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು’ ಎಂದು ಸಭೆಯಲ್ಲಿ ಮುಖಂಡರು ನಿರ್ಣಯ ತೆಗೆದುಕೊಂಡರು.