ನಂಜನಗೂಡಿನ ಬಳಿ ಮಿಶ್ರ ತ್ಯಾಜ್ಯವನ್ನು ಎಸೆದ ಬಗ್ಗೆ ಪುರಾವೆ ಹಾಗೂ ತಾಜ್ಯದ ಮಾದರಿಗಳ ಎಫ್ಐ
ಆರ್ ವರದಿ ಮತ್ತು ಪ್ರಯೋಗಾಲಯದ ವಿಶ್ಲೇಷಣೆ ವರದಿಯನ್ನು ಕೆಎಸ್ಪಿಸಿಬಿ ಕೇರಳದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿತ್ತು. ಈ ಬಗ್ಗೆ ಕ್ರಮಕ್ಕೆ ಒತ್ತಾಯಿಸಿ, ಸರಣಿ ಪತ್ರಗಳನ್ನು ಬರೆದಿತ್ತು.ಆದರೆ, ಈ ಬಗ್ಗೆ ಮೌನಕ್ಕೆ ಶರಣಾಗಿದ್ದ ಅಲ್ಲಿನ ಮಂಡಳಿಯು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಫೆ.22ರಂದು ಅಲ್ಲಿನ ಮಂಡಳಿಯ ಸದಸ್ಯ ಕಾರ್ಯದರ್ಶಿ ಈ ಬಗ್ಗೆ ಪತ್ರ ಕಳುಹಿಸಿದ್ದು, ತ್ಯಾಜ್ಯ ಎಸೆದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.