ರಾಜ್ಯದಲ್ಲಿ 1,000 ಹಳ್ಳಿಗಳು ಮುಳುಗಡೆಯಾಗಿವೆ, 35,000 ಕಿ.ಮೀ ರಸ್ತೆಗಳು ಹಾಳಾಗಿವೆ, 57,000 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಎಂದು ಕಾಂಗ್ರೆಸ್ ಅಧ್ಯಯನ ವರದಿ ತಿಳಿಸಿದೆ. ಆದರೆ, ಇವರು ಎಲ್ಲಿ ಸಮೀಕ್ಷೆ ನಡೆಸಿರುವುದು, ಈ ಸಂಖ್ಯೆ ಎಲ್ಲಿಂದ ಸಿಕ್ಕಿದೆ ಎಂಬ ವೈಜ್ಞಾನಿಕ ವಿವರ ಇಲ್ಲ. ವರದಿಯಲ್ಲಿ ಅರ್ಧದಷ್ಟು ಭಾಗ ಆರ್.ವಿ.ದೇಶಪಾಂಡೆಯವರ ಉತ್ತರ ಕನ್ನಡ ಜಿಲ್ಲೆಯ ಛಾಯಾಚಿತ್ರಗಳು ಮತ್ತು ಪತ್ರಿಕಾ ವರದಿಗಳ ಕಟಿಂಗುಗಳೇ ತುಂಬಿಕೊಂಡಿವೆ ಎಂದು ಹೇಳಿದರು.