ದೇಶದ ಅಭಿವೃದ್ಧಿಗಾಗಿ ಮೋದಿಯವರ ಕೈ ಬಲಪಡಿಸುವ ಅಗತ್ಯವಿದೆ. ಅವರ ಮಹಿಳಾ ಪರವಾದ ಹಲವು ಕಾರ್ಯಕ್ರಮಗಳು ಸಮಾನತೆಯನ್ನು ತರಲು ಸಹಕಾರಿಯಾಗಿವೆ ಎಂದರು. ಶಾಸಕ ಸತೀಶ್ ರೆಡ್ಡಿ ಅಂಬರೀಷ್ ಅವರಿಗೆ ತಮ್ಮನಂತಿದ್ದರು. ಅವರ ಅಗಲಿಕೆಯ ನಂತರವೂ, ಅದೇ ಬಾಂಧವ್ಯ ಹೊಂದಿದ್ದಾರೆ. ಮುಂದೆ ಮಂತ್ರಿ ಆಗುವ ಎಲ್ಲ ಅವಕಾಶಗಳಿದ್ದು, ಬೊಮ್ಮನಹಳ್ಳಿಯ ಮತದಾರರು ಈ ಬಾರಿಯೂ ಗೆಲ್ಲಿಸಬೇಕೆಂದರು.