‘ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದವರು ಸಾವನ್ನಪ್ಪಿದಾಗ ಅವರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡುವ ಸರ್ಕಾರದ ತೀರ್ಮಾನ ಸಕಾಲಿಕ. ದಲಿತ ಸಮುದಾಯಗಳ ಬಗ್ಗೆ ಅಸಡ್ಡೆ, ಅಸಹಕಾರ ಮತ್ತು ದೌರ್ಜನ್ಯ ಮನಸ್ಥಿತಿ ಸಮಾಜದಲ್ಲಿ ಕಡಿಮೆ ಆಗಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವ ತೀರ್ಮಾನ ಮಾಡಿರುವುದು ಉತ್ತಮ ನಿರ್ಧಾರ’ ಎಂದಿದ್ದಾರೆ.