ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸಾರ ಕ್ಷತ್ರಿಯ ಸಮಾಜ: ಯಶಸ್ವಿ ಆನ್‌ಲೈನ್‌ ವಧುವರರ ಸಮಾವೇಶ

Last Updated 1 ನವೆಂಬರ್ 2020, 16:17 IST
ಅಕ್ಷರ ಗಾತ್ರ

ಬೆಂಗಳೂರು: ಭಾವಸಾರ ಕ್ಷತ್ರಿಯ ಸಮಾಜದ ವಧುವರರ ರಾಜ್ಯಮಟ್ಟದ ಆನ್‌ಲೈನ್‌ ಸಮಾವೇಶವು ಭಾನುವಾರ ಯಶಸ್ವಿಯಾಗಿ ಜರುಗಿತು.

ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ (ಎಐಬಿಕೆಎಂ) ರಾಜ್ಯ ಘಟಕವು ಮೊದಲ ಬಾರಿಗೆ ಆಯೋಜಿಸಿದ್ದ ಈ ಆನ್‌ಲೈನ್‌ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗದ ವಧು ವರರು, ಅವರ ಪಾಲಕರು ಸಕ್ರಿಯವಾಗಿ ಭಾಗವಹಿಸಿದ್ದರು.

‘ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ವಿರಾಮ ಅವಧಿ ಸೇರಿದಂತೆ 10 ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ನೂರಾರು ವಿವಾಹ ಆಕಾಂಕ್ಷಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಸಮಾಜ ಬಂಧುಗಳು ಕೋವಿಡ್‌ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ವಧು – ವರರು ಪರಸ್ಪರ ಪರಿಚಯಿಸಿಕೊಳ್ಳಲು ಈ ವೇದಿಕೆಯು ಅಪೂರ್ವ ಅವಕಾಶ ಒದಗಿಸಿತ್ತು‘ ಎಂದು ಎಐಬಿಕೆಎಂನ ರಾಜ್ಯ ಘಟಕದ ಅಧ್ಯಕ್ಷ ಸುಧೀರ್‌ ನವಲೆ ಅವರು ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು. ವೇಣುಗೋಪಾಲ್‌, ಮಂಜುನಾಥ ಅಂಚಲಕರ್‌, ಪ್ರಕಾಶ್‌ ನವಲೆ, ರಾಕೇಶ್ ರಾವ್‌ ನೇತೃತ್ವದಲ್ಲಿನ ತಾಂತ್ರಿಕ ತಂಡವು ಈ ಕಾರ್ಯಕ್ರಮದಲ್ಲಿ ಎಲ್ಲಿಯೂ ತಾಂತ್ರಿಕ ಅಡಚಣೆ ಎದುರಾಗದಂತೆ ಕಾಯಕ್ರಮವನ್ನು ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸಿತು. ಪ್ರಕಾಶ್ ಬೋಂಗಳೆಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT