ಬೆಂಗಳೂರು: ಪಶ್ಚಿಮ ವಲಯ (ಮಂಗಳೂರು) ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಆರೇ ತಿಂಗಳಲ್ಲಿ ವರ್ಗಾವಣೆ ಮಾಡಿರುವ ಸರ್ಕಾರ, ಈ ಹುದ್ದೆಗೆ ಅರುಣ್ ಚಕ್ರವರ್ತಿ ಅವರನ್ನು ವರ್ಗಾವಣೆ ಮಾಡಿದೆ.
ಚಕ್ರವರ್ತಿ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದರು. ನಿಂಬಾಳ್ಕರ್ಗೆ ಸಿಐಡಿಯ (ಆರ್ಥಿಕ ಅಪರಾಧ) ಐಜಿಪಿ ಹುದ್ದೆ ನೀಡಲಾಗಿದೆ.
ಗುಪ್ತಚರ ಡಿಐಜಿಯಾಗಿದ್ದ ರವಿಕುಮಾರ್ ಎಚ್ ನಾಯ್ಕ್ ಅವರನ್ನು ಭದ್ರತಾ ವಿಭಾಗದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.