ನವದೆಹಲಿ: ಬಿಹಾರದ ಸೃಜನ್ ಹಗರಣದ ಸಂಬಂಧ ಸಿಬಿಐ ಹೊಸದಾಗಿ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಸ್ವಯಂ ಸೇವಾ ಸಂಸ್ಥೆ ‘ಸೃಜನ್ ಮಹಿಳಾ ವಿಕಾಸ ಸಹಯೋಗ ಸಮಿತಿ’ಯ ಎಲ್ಲ ಅಧಿಕಾರಿಗಳನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ. ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ ಹಗರಣ ನಡೆದ ಅವಧಿಯಲ್ಲಿದ್ದ ವ್ಯವಸ್ಥಾಪಕರು, ಬಂಕಾ ಜಿಲ್ಲೆಯ ಭೂಸ್ವಾಧೀನ ಅಧಿಕಾರಿ ವಿರುದ್ಧವೂ ಆರೋಪಪಟ್ಟಿ ದಾಖಲಿಸಲಾಗಿದೆ.
ಒಂದು ಎಫ್ಐಆರ್ನಲ್ಲಿ ಸೃಜನ್ ಅಧ್ಯಕ್ಷೆ ಶುಭಲಕ್ಷ್ಮಿ ಪ್ರಸಾದ್ ಹಾಗೂ ಇತರ 9 ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ಕಳೆದ ವರ್ಷ ಈ ಹಗರಣದ ಸಂಬಂಧ ಸಿಬಿಐ 10 ಎಫ್ಐಆರ್ಗಳನ್ನು ದಾಖಲಿಸಿತ್ತು.
2003ರಿಂದ 2014ರ ಅವಧಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಈ ಎನ್ಜಿಒ ಸರ್ಕಾರಕ್ಕೆ ₹800 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಆರೋಪ ಇದೆ.