‘ಮೆಟ್ರೊ ಕಾಮಗಾರಿಗಾಗಿ ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಗಳ ಬಳಿ ನೈಸ್ಗೆ ಸೇರಿದ ಜಾಗದ ಅಗತ್ಯವಿದೆ. ಈ ಜಾಗವನ್ನು ಕಾಯಂ ಆಗಿ ಬಳಸಿಕೊಳ್ಳಬೇಕಾಗಿರುವುದರಿಂದ ಯಾವ ರೀತಿಯ ಪರಿಹಾರ ನೀಡಬೇಕು ಎಂಬ ಬಗ್ಗೆ ಜಿಜ್ಞಾಸೆ ಇದೆ. ನಾವು ಪರಿಹಾರದ ಪ್ಯಾಕೇಜ್ ಅನ್ನು ಠೇವಣಿ ಇಟ್ಟು, ಬಳಿಕ ನೈಸ್ನ ಜಾಗದಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೇವೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಬಿಎಂಆರ್ಸಿಎಲ್ನ ಭೂಸ್ವಾಧೀನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಿವಶಂಕರ್ ಅವರು ಲಭ್ಯವಾಗಲಿಲ್ಲ.