ನೇರಳೆ ಮಾರ್ಗದಲ್ಲಿ ಕೆಂಗೇರಿ–ಎಂ.ಜಿ.ರಸ್ತೆ ನಡುವೆ ಮಾತ್ರ ರೈಲುಗಳು ಸಂಚರಿಸಿದವು. ಇದರ ಅರಿವಿಲ್ಲದೆ ಟ್ರಿನಿಟಿ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರೈಲು ಹತ್ತಲು ಬಂದ ಪ್ರಯಾಣಿಕರು ಗೊಂದಲಕ್ಕೊಳಗಾದರು. ರೈಲು ಸಂಚಾರ ವ್ಯತ್ಯಯವಾದ ಮಾಹಿತಿ ತಿಳಿದು ಬೇರೆ ವಾಹನ ಬಳಸಿದರು.