ಬೆಂಗಳೂರು: ಮೆಜೆಸ್ಟಿಕ್ ಆನಂದರಾವ್ ವೃತ್ತ ಬಳಿಯ ಮೇಲ್ಸೇತುವೆಯಲ್ಲಿ ಬಿಎಂಟಿಸಿ ಬಸ್ಸೊಂದು ಗುದ್ದಿ ಭಿಕ್ಷುಕರೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ‘ಮೃತ ಭಿಕ್ಷುಕನ ವಯಸ್ಸು 35 ವರ್ಷವಿರಬಹುದೆಂದು ಹೇಳಲಾಗಿದ್ದು, ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ ಆರೋಪದಡಿ ಚಾಲಕ ಶಾಮಣ್ಣ ಎಂಬುವರನ್ನು ಬಂಧಿಸಲಾಗಿದೆ’ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸರು ಹೇಳಿದರು.