<p><strong>ಬೆಂಗಳೂರು:</strong> ಪುರುಷರಿಗೆ ‘ಶಕ್ತಿ’ ಯೋಜನೆಯ ಉಚಿತ ಪ್ರಯಾಣದ ಟಿಕೆಟ್ ನೀಡಿ, ಪ್ರಯಾಣ ದರದ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಹಾಕಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಬಿಎಂಟಿಸಿಯ ಐವರು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.</p>.<p>ಎನ್. ಪ್ರಕಾಶ್, ಬ್ರಿಜೇಶ್ ಬಾಬು, ಬೊಮ್ಮಲಿಂಗೇಶ್ ಪಿ., ಮೋಹನ್ ಕೆ., ಸೂರ್ಯನಾರಾಯಣ ಟಿ. ಅಮಾನತುಗೊಂಡವರು.</p>.<p>ಬಿಎಂಟಿಸಿಯಿಂದ ನಿರ್ವಾಹಕರಿಗೆ ಅಧಿಕೃತ ಡೈನಾಮಿಕ್ ಯುಪಿಐ ಕ್ಯೂಆರ್ ಕೋಡ್ ಒದಗಿಸಲಾಗಿತ್ತು. ಆದರೆ, ಈ ಐವರು ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ಗಳ ಮೂಲಕ ಟಿಕೆಟ್ ದರವನ್ನು ಸಂಗ್ರಹಿಸುತ್ತಿರುವುದು ತಪಾಸಣಾ ತಂಡವು ಪರಿಶೀಲನೆ ನಡೆಸಿದಾಗ ಕಂಡುಬಂದಿತ್ತು. ಮುಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ದುರುಪಯೋಗದ ಮೊತ್ತ:</strong> 39ನೇ ಘಟಕದ ನಿರ್ವಾಹಕ ಎನ್. ಪ್ರಕಾಶ್ ₹6,312, 6ನೇ ಘಟಕದ ಬ್ರಿಜೇಶ್ ಬಾಬು ₹9,795, ಘಟಕ 18ನೇ ಘಟಕದ ಬೊಮ್ಮಲಿಂಗೇಶ್ ಪಿ. ₹16,404, ಮೋಹನ್ ಕೆ. ₹6,117, ಸೂರ್ಯನಾರಾಯಣ ಟಿ. ₹6,117 ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪುರುಷರಿಗೆ ‘ಶಕ್ತಿ’ ಯೋಜನೆಯ ಉಚಿತ ಪ್ರಯಾಣದ ಟಿಕೆಟ್ ನೀಡಿ, ಪ್ರಯಾಣ ದರದ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಹಾಕಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಬಿಎಂಟಿಸಿಯ ಐವರು ನಿರ್ವಾಹಕರನ್ನು ಅಮಾನತು ಮಾಡಲಾಗಿದೆ.</p>.<p>ಎನ್. ಪ್ರಕಾಶ್, ಬ್ರಿಜೇಶ್ ಬಾಬು, ಬೊಮ್ಮಲಿಂಗೇಶ್ ಪಿ., ಮೋಹನ್ ಕೆ., ಸೂರ್ಯನಾರಾಯಣ ಟಿ. ಅಮಾನತುಗೊಂಡವರು.</p>.<p>ಬಿಎಂಟಿಸಿಯಿಂದ ನಿರ್ವಾಹಕರಿಗೆ ಅಧಿಕೃತ ಡೈನಾಮಿಕ್ ಯುಪಿಐ ಕ್ಯೂಆರ್ ಕೋಡ್ ಒದಗಿಸಲಾಗಿತ್ತು. ಆದರೆ, ಈ ಐವರು ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ಸ್ಕ್ಯಾನರ್ಗಳ ಮೂಲಕ ಟಿಕೆಟ್ ದರವನ್ನು ಸಂಗ್ರಹಿಸುತ್ತಿರುವುದು ತಪಾಸಣಾ ತಂಡವು ಪರಿಶೀಲನೆ ನಡೆಸಿದಾಗ ಕಂಡುಬಂದಿತ್ತು. ಮುಂದಿನ ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.</p>.<p><strong>ದುರುಪಯೋಗದ ಮೊತ್ತ:</strong> 39ನೇ ಘಟಕದ ನಿರ್ವಾಹಕ ಎನ್. ಪ್ರಕಾಶ್ ₹6,312, 6ನೇ ಘಟಕದ ಬ್ರಿಜೇಶ್ ಬಾಬು ₹9,795, ಘಟಕ 18ನೇ ಘಟಕದ ಬೊಮ್ಮಲಿಂಗೇಶ್ ಪಿ. ₹16,404, ಮೋಹನ್ ಕೆ. ₹6,117, ಸೂರ್ಯನಾರಾಯಣ ಟಿ. ₹6,117 ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>