‘ಸುಮಾರು 1,350 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ಪೈಕಿ ತರಬೇತಿ ನಿರತ 300 ನೌಕರರನ್ನು ಹಲವು ಷರತ್ತುಗಳ ಮೇಲೆ ಮರು ನೇಮಕ ಮಾಡಲಾಗಿದೆ. ಕಾಯಂ ನೌಕರರ ಪೈಕಿ ಹಲವರಿಂದ ಮುಚ್ಚಳಿಕೆ ಬರೆಸಿಕೊಂಡು ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ. ಆದರೆ 22 ವರ್ಷ ನಿಷ್ಠೆಯಿಂದ ಸಂಸ್ಥೆಗಾಗಿ ದುಡಿದ ನನ್ನಂತಹ ಹಲವರನ್ನು ವಜಾಗೊಳಿಸಲಾಗಿದೆ’ ಎಂದು ಯಶವಂತಪುರದ ಘಟಕ 8ರಲ್ಲಿ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಮಾಲತಿ ಬೇಸರ ವ್ಯಕ್ತಪಡಿಸಿದರು.