<p><strong>ಬೆಂಗಳೂರು</strong>: ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಅದಕ್ಕೆ ಅನುಗುಣವಾಗಿ ಬಿಎಂಟಿಸಿ ಬಸ್ ಮಾರ್ಗಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಇದ್ದ ಬಿಎಂಟಿಸಿ ಕಾರ್ಯಾಚರಣೆಯನ್ನು ಈಗ ಜಿಬಿಎ ವ್ಯಾಪ್ತಿಗೆ ಅನುಗುಣವಾಗಿ 40 ಕಿ.ಮೀ.ಗೆ ವಿಸ್ತರಿಸಲಾಗಿದೆ.</p>.<p>ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ ‘ವಜ್ರ ವಿಸ್ತಾರ’ ಹವಾನಿಯಂತ್ರಿತ ಬಸ್ಗಳ ಸಂಚಾರಕ್ಕೆ ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.</p>.<p>ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಬಿಎಂಟಿಸಿ ವ್ಯವಸ್ಥಾಪನ ನಿರ್ದೇಶಕ ಕೆ.ಬಿ. ಶಿವಕುಮಾರ್, ರಾಮನಗರ, ಕನಕಪುರದ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.</p>.<p><strong>ಮೆಜೆಸ್ಟಿಕ್ನಿಂದ ರಾಮನಗರಕ್ಕೆ</strong></p><p>ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಪ್ರತಿದಿನ 6 ಬಸ್ 36 ಟ್ರಿಪ್ಗಳಲ್ಲಿ ಸಂಚರಿಸಲಿವೆ. ಎಂಆರ್ಬಿಎಸ್ ನಾಯಂಡಹಳ್ಳಿ ರಾಜರಾಜೇಶ್ವರಿನಗರ ಗೇಟ್ ಕೆಂಗೇರಿ ನೈಸ್ ರಸ್ತೆ ಜಂಕ್ಷನ್ ಮೂಲಕ ರಾಮನಗರ ತಲುಪುತ್ತವೆ.</p><p><strong>ಬನಶಂಕರಿಯಿಂದ ಕನಕಪುರಕ್ಕೆ</strong></p><p>ಬನಶಂಕರಿಯಿಂದ ಕನಕಪುರಕ್ಕೆ ಪ್ರತಿದಿನ 8 ಬಸ್ 48 ಟ್ರಿಪ್ಗಳಲ್ಲಿ ಸಂಚರಿಸುತ್ತವೆ. ಕೋಣನಕುಂಟೆ ಕ್ರಾಸ್ ತಲಗಟ್ಟಪುರ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣ ಕಗ್ಗಲಿಪುರ ಹಾರೋಹಳ್ಳಿ ದಯಾನಂದ ಸಾಗರ ಕಾಲೇಜು ಜೈನ್ ಯುನಿವರ್ಸಿಟಿ ಗೇಟ್ ಮೂಲಕ ಕನಕಪುರಕ್ಕೆ ಸಂಚರಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಅದಕ್ಕೆ ಅನುಗುಣವಾಗಿ ಬಿಎಂಟಿಸಿ ಬಸ್ ಮಾರ್ಗಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಿಂದ 25 ಕಿ.ಮೀ. ವರೆಗೆ ಇದ್ದ ಬಿಎಂಟಿಸಿ ಕಾರ್ಯಾಚರಣೆಯನ್ನು ಈಗ ಜಿಬಿಎ ವ್ಯಾಪ್ತಿಗೆ ಅನುಗುಣವಾಗಿ 40 ಕಿ.ಮೀ.ಗೆ ವಿಸ್ತರಿಸಲಾಗಿದೆ.</p>.<p>ಮೊದಲ ಹಂತದಲ್ಲಿ ಬೆಂಗಳೂರು ನಗರದಿಂದ ರಾಮನಗರ ಹಾಗೂ ಕನಕಪುರಕ್ಕೆ ‘ವಜ್ರ ವಿಸ್ತಾರ’ ಹವಾನಿಯಂತ್ರಿತ ಬಸ್ಗಳ ಸಂಚಾರಕ್ಕೆ ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.</p>.<p>ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಶಾಸಕ ಎಚ್.ಎ. ಇಕ್ಬಾಲ್ ಹುಸೇನ್, ಬಿಎಂಟಿಸಿ ವ್ಯವಸ್ಥಾಪನ ನಿರ್ದೇಶಕ ಕೆ.ಬಿ. ಶಿವಕುಮಾರ್, ರಾಮನಗರ, ಕನಕಪುರದ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.</p>.<p><strong>ಮೆಜೆಸ್ಟಿಕ್ನಿಂದ ರಾಮನಗರಕ್ಕೆ</strong></p><p>ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಮನಗರಕ್ಕೆ ಪ್ರತಿದಿನ 6 ಬಸ್ 36 ಟ್ರಿಪ್ಗಳಲ್ಲಿ ಸಂಚರಿಸಲಿವೆ. ಎಂಆರ್ಬಿಎಸ್ ನಾಯಂಡಹಳ್ಳಿ ರಾಜರಾಜೇಶ್ವರಿನಗರ ಗೇಟ್ ಕೆಂಗೇರಿ ನೈಸ್ ರಸ್ತೆ ಜಂಕ್ಷನ್ ಮೂಲಕ ರಾಮನಗರ ತಲುಪುತ್ತವೆ.</p><p><strong>ಬನಶಂಕರಿಯಿಂದ ಕನಕಪುರಕ್ಕೆ</strong></p><p>ಬನಶಂಕರಿಯಿಂದ ಕನಕಪುರಕ್ಕೆ ಪ್ರತಿದಿನ 8 ಬಸ್ 48 ಟ್ರಿಪ್ಗಳಲ್ಲಿ ಸಂಚರಿಸುತ್ತವೆ. ಕೋಣನಕುಂಟೆ ಕ್ರಾಸ್ ತಲಗಟ್ಟಪುರ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣ ಕಗ್ಗಲಿಪುರ ಹಾರೋಹಳ್ಳಿ ದಯಾನಂದ ಸಾಗರ ಕಾಲೇಜು ಜೈನ್ ಯುನಿವರ್ಸಿಟಿ ಗೇಟ್ ಮೂಲಕ ಕನಕಪುರಕ್ಕೆ ಸಂಚರಿಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>