‘ಇತರೆ ಆರೋಪಿಗಳ ಜೊತೆ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ವಿಶ್ವಾಸ್, ಮೊಹಮ್ಮದ್ ಆಸೀಫ್ ಮೇಲೆ ಹಲ್ಲೆ ಮಾಡಿದ್ದ. ಐ–ಫೋನ್, ₹35 ಸಾವಿರ ನಗದು ಕಿತ್ತುಕೊಂಡಿದ್ದ. ನಂತರ, ದೂರುದಾರರನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಅಪಹರಿಸಲು ಮುಂದಾಗಿದ್ದ. ಸ್ಥಳದಲ್ಲಿ ಜನರು ಸೇರುತ್ತಿದ್ದಂತೆ ಅವರನ್ನು ಬಿಟ್ಟು, ಬಿಎಂಡಬ್ಲ್ಯು ಬೈಕ್ ಸಮೇತ ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಆಸೀಫ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.