ಬೆರಟೇನ ಅಗ್ರಹಾರದ ಲವಕುಶ ಲೇಔಟ್ ಬಳಿ ಸರ್ವೆ ನಂಬರ್ 18ರಲ್ಲಿ ಇರುವ ಕೆರೆ ಜಾಗದ ಒತ್ತುವರಿಗಾಗಿ ಎರಡು ತಿಂಗಳಿನಿಂದ ಪ್ರಯತ್ನ ನಡೆದಿದೆ. ಜಲಮೂಲದ ಸುತ್ತಲೂ ಹಾಕಿದ್ದ ತಂತಿ ಬೇಲಿಯನ್ನು ಕಿತ್ತು, ಜೆಸಿಬಿಗಳನ್ನು ಬಳಸಿ ಐದು ಎಕರೆಯಷ್ಟು ಕಬಳಿಸಲಾಗಿದೆ. ಪಶ್ಚಿಮ ಭಾಗದಲ್ಲಿ ಕೆರೆಯ ತಂತಿ ಬೇಲಿ ಹಾಗೇ ಇದ್ದು, ಇದರ ಪಕ್ಕದಲ್ಲೇ ನಿವೇಶನಗಳನ್ನು ಮಾಡಲಾಗಿದೆ. ಈ ಮೂಲಕ ಮೀಸಲು ಪ್ರದೇಶದ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.