ನೃತ್ಯ ಸಂಜೀವಿನಿ ಅಕಾಡೆಮಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೈಷಧಂ ಎಸ್ಸೆ (ಪ್ರೊ. ಅಶ್ವತ್ಥನಾರಾಯಣ ಶಾಸ್ತ್ರಿ) ಅವರ ‘ಒಂದು ಯುಗಾಂತ’ ಕಾದಂಬರಿ ಮತ್ತು ‘ಜನ ಆಡಿಬಿಡುತ್ತಾರೆ’ ಚೀನೀ ಕಾವ್ಯದ ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು. ‘ನಮ್ಮನ್ನು ದಾಸ್ಯಕ್ಕೆ ತಳ್ಳಿದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಗಾಂಧೀಜಿ ಅವರ ಕಾಲವನ್ನು ನೋಡಿ, ಪ್ರಸ್ತುತ ಜಗತ್ತು ಬದಲಾಗಬೇಕಿದೆ ಎನ್ನುತ್ತಿದ್ದೇವೆ. ಆದರೆ, ಪ್ರಾಚೀನ ಕಾಲದಿಂದಲೂ ಇರುವ ಜಾತಿ ಸಂಘರ್ಷವನ್ನು ಪ್ರಶ್ನಿಸುತ್ತಿಲ್ಲ. ನಮ್ಮ ಬದುಕು ಜಟಿಲ ಮತ್ತು ಭಿನ್ನವಾದದ್ದಾಗಿದೆ’ ಎಂದು ಹೇಳಿದರು.