ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್,‘ಮಾನವ, ಆಹಾರ, ಪರ್ಯಟನೆ, ವಲಸೆ, ದೈವತೆ ಸೇರಿದಂತೆ ವಿವಿಧ ಸಂಗತಿಗಳಿಗೆ ಸಂಬಂಧಿಸಿದ ಚರಿತ್ರೆಗಳನ್ನು ಕಾದಂಬರಿಯಲ್ಲಿ ಹೇಳಲಾಗಿದೆ.ಕಾದಂಬರಿಕಾರ ಯಾರ ಪರವಾಗಿಯೂ ಇರುವುದಿಲ್ಲ. ಇರುವುದನ್ನು ಪಾಕಮಾಡಿ, ರಸಪೂರ್ಣವಾಗಿ ನೀಡುವುದು ಕೆಲಸವಾಗಿರುತ್ತದೆ. ಗಣೇಶಯ್ಯ ಅವರು ಅದನ್ನೇ ಮಾಡಿದ್ದಾರೆ. ಚರಿತ್ರೆಯ ವಾಸ್ತವವನ್ನೂ ಕಾದಂಬರಿಯಲ್ಲಿ ಹೇಳಲಾಗಿದೆ.ದೇಶದಲ್ಲಿನ ಸಾಮಾಜಿಕ ಜೀವನದಲ್ಲಿ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ತಂತ್ರಜ್ಞಾನದ ಬದಲಾವಣೆಯಂತೂ ಊಹೆಗೆ ನಿಲುಕದಷ್ಟು ಆಗಿದೆ’ ಎಂದು ಹೇಳಿದರು.